ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಖಾಝಿ ಇ.ಕೆ.ಇಬ್ರಾಹೀಂ ಮದನಿ ಆಯ್ಕೆ

ಉಳ್ಳಾಲ, ಡಿ.9: ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ 2016-19ನೆ ಸಾಲಿನ ವಾರ್ಷಿಕ ಮಹಾಸಭೆಯು ಉಳ್ಳಾಲ ಮದನಿ ಹಾಲ್ನಲ್ಲಿ ಕೃಷ್ಣಾಪುರ ಸಂಯುಕ್ತ ಜಮಾಅತ್ ಖಾಝಿ ಇ.ಕೆ.ಇಬ್ರಾಹೀಂ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಯದ್ ಅಬೂಬಕರ್ ಚೆರುಕುಂಞಿ ತಂಙಳ್ ದುಆ ನೆರವೇರಿಸಿದರು. ಉಳ್ಳಾಲ ಸೈಯದ್ ಮದನಿ ಶರೀಅತ್ ಕಾಲೇಜಿನ ಪ್ರೊ. ಅಹ್ಮದ್ ಬಾವ ಸಭೆಯನ್ನು ಉದ್ಘಾಟಿಸಿದರು.
ದರ್ಗಾ ಸಮಿತಿಯ ಉಪಾಧ್ಯಕ್ಷ ಹಾಜಿ ಬಾವ ಮುಹಮ್ಮದ್, ಯು.ಕೆ.ಮೋನು ಇಸ್ಮಾಯೀಲ್, ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಎ.ಕೆ. ಮೊಯ್ದಿನ್, ವಳವೂರು ಇಸ್ಮಾಯೀಲ್ ಹಾಜಿ ಮಾತನಾಡಿದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಖಾಝಿ ಇ.ಕೆ.ಇಬ್ರಾಹೀಂ ಮದನಿ ಕೃಷ್ಣಾಪುರ, ಉಪಾಧ್ಯಕ್ಷರಾಗಿ ಸೈಯದ್ ಇಸ್ಮಾಯೀಲ್ ತಂಙಳ್ ಮದನಿ ಉಜಿರೆ, ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ಮದನಿ, ಹಾಜಿ ವಿ.ಎ.ಇಸ್ಮಾಯೀಲ್ ಮದನಿ ನೆಕ್ಕಿಲಾಡಿ, ಅಬ್ದುರ್ರಹ್ಮಾನ್ ಮದನಿ ಕಾಡಾಚಿರ ಕಣ್ಣೂರು, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎ. ಅಬ್ದುರ್ರಹ್ಮಾನ್ ಮದನಿ ಜೆಪ್ಪು,ಕಾರ್ಯದರ್ಶಿಗಳಾಗಿ ಕೆ.ಎಂ.ಮುಹಿಯ್ಯುದ್ದೀನ್ ಮದನಿ ಕಟ್ಟತ್ತಿಲ, ಆರ್.ಕೆ. ಮುಹಮ್ಮದ್ ರಫೀಕ್ ಮದನಿ ಅಮ್ಮೆಂಬಳ, ಅಬ್ಬಾಸ್ ಮದನಿ ಬಂಡಾಡಿ, ಕೆ. ಅಹ್ಮದ್ ಬಶೀರ್ ಮದನಿ ಕೂಳೂರು, ಕೋಶಾಧಿಕಾರಿಯಾಗಿ ಅಬ್ದುರ್ರಝಾಕ್ ಮದನಿ ಅಕ್ಕರಂಗಡಿ, ಕ್ಷೇಮನಿಧಿಯ ಅಧ್ಯಕ್ಷರಾಗಿ ಸೈಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಸಂಚಾಲಕರಾಗಿ ಪಿ.ಕೆ.ಮುಹಮ್ಮದ್ ಮದನಿ ಅಳಕೆ, ಪ್ರಕಾಶನ ಸಮಿತಿಯ ಅಧ್ಯಕ್ಷರಾಗಿ ಬಂಡಾಡಿ ಅಬ್ಬಾಸ್ ಮದನಿ, ಸಂಚಾಲಕರಾಗಿ ಸಾಮಣಿಗೆ ಮುಹಮ್ಮದ್ ಮದನಿ, ಸದಸ್ಯರಾಗಿ ಸಿ.ಟಿ.ಎಂ.ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಸೈಯದ್ ಅಬ್ದುಸ್ಸಲಾಂ ಮದನಿ ತಂಙಳ್ ಪೂಂಜಾಲಕಟ್ಟೆ, ಕರಾಯ ಕಾಸಿಂ ಮದನಿ, ಪಿ.ಎಂ.ಮೂಸಲ್ ಮದನಿ ತಲಕ್ಕಿ, ಕೊಳಕೇರಿ ಉಸ್ಮಾನ್ ಮದನಿ, ಸಿ.ಕೆ.ಕುಂಞಲನ್ ಮದನಿ ನೀಲಗಿರಿ, ಮರ್ಸಿನ್ ಮುಹಮ್ಮದ್ ಮದನಿ, ಅಬ್ದುರ್ರಶೀದ್ ಮದನಿ ಆಲಪ್ಪುಝ, ಯೂಸುಫ್ ಮದನಿ ಚೆರುವತ್ತೂರು, ಉಳ್ಳಾಲ ಮುಸ್ತಫಾ ಮದನಿ, ಖಾಸಿಂ ಮದನಿ ಬೊಳ್ಳಾಯಿ, ಅಬ್ದುಲ್ ಅಝೀಝ್ ಮದನಿ ಬಿಜಾಪುರ, ಅಬೂಬಕರ್ ಮದನಿ ಪರಪ್ಪು, ಅಕ್ಬರ್ ಅಲಿ ಮದನಿ ಆಲಂಪಾಡಿ, ಆದಂ ಮದನಿ ಆತೂರು, ಕೊಯ್ಯೂರು ಇಸ್ಮಾಯೀಲ್ ಮದನಿ, ಬೆನಪು ಅಬೂಬಕರ್ ಮದನಿ, ಹಂಝ ಮದನಿ ಚೆಂಬುಗುಡ್ಡೆ, ಅಬ್ದುರ್ರಝಾಕ್ ಮದನಿ ಮಂಜನಾಡಿ, ಉಮರ್ ಮದನಿ ಮಚ್ಚಂಪಾಡಿ, ಮುಫತ್ತಿಸ್ ಅಬ್ದುಲ್ ಹಮೀದ್ ಮದನಿ ಬೊಳ್ಮಾರ್, ಉಮರ್ ಮದನಿ ಪೊಯ್ಯತ್ತಬೈಲ್, ಬಶೀರ್ ಮದನಿ ಮಡಿಕೇರಿ, ಇಸ್ಮಾಯೀಲ್ ಬುಖಾರಿ ಮದನಿ ನೂಜಿ, ಸಿನಾನ್ ಮದನಿ ಕಲ್ಲಡ್ಕ, ಅಲಿ ಮದನಿ ಸೆರ್ಕಳ ಆಯ್ಕೆಯಾದರು.







