Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೋಟು ರದ್ದತಿ ಮಹಾ ದುರಂತ: ಮನಮೋಹನ್

ನೋಟು ರದ್ದತಿ ಮಹಾ ದುರಂತ: ಮನಮೋಹನ್

ವಾರ್ತಾಭಾರತಿವಾರ್ತಾಭಾರತಿ9 Dec 2016 7:43 PM IST
share
ನೋಟು ರದ್ದತಿ ಮಹಾ ದುರಂತ: ಮನಮೋಹನ್

ಹೊಸದಿಲ್ಲಿ, ಡಿ.9: ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ನಿರ್ಧಾರವು ‘ಅವರ ಮೂಲಭೂತ ಕರ್ತವ್ಯದ ಅಪಹಾಸ್ಯವಾಗಿದೆ’ ಹಾಗೂ ಒಂದು ಶತಕೋಟಿಗೂ ಹೆಚ್ಚಿನ ಭಾರತೀಯರ ವಿಶ್ವಾಸವನ್ನು ನಾಶಗೊಳಿಸಿದೆಯೆಂದು ಮೋದಿಯವರ ಪೂರ್ವಾಧಿಕಾರಿ ಮನಮೋಹನ ಸಿಂಗ್ ಟೀಕಿಸಿದ್ದಾರೆ.ಇಂದಿನ ‘ದಿ ಹಿಂದೂ’ ಪತ್ರಿಕೆಯಲ್ಲಿ ಈ ತೀಕ್ಷ್ಣ ಟೀಕೆ ಪ್ರಕಟವಾಗಿದೆ.

‘ಮೇಕಿಂಗ್ ಆಫ್ ಎ ಮಾಮತ್ ಟ್ರಾಜಡಿ’ ಎಂಬ ಸಂಪಾದಕೀಯದಲ್ಲಿ ಸಿಂಗ್, ಜಿಡಿಪಿ ಹಾಗೂ ಉದ್ಯೋಗ ಸೃಷ್ಟಿಯ ಮೇಲೆ ಅತ್ಯಲ್ಪ ಪರಿಣಾಮ ಹಾಗೂ ಮುಂದಿನ ತಿಂಗಳುಗಳಲ್ಲಿ ಅನಗತ್ಯ ಕಠಿಣ ದಿನಗಳ ಭವಿಷ್ಯ ನುಡಿದಿದ್ದಾರೆ. ನೋಟು ರದ್ದತಿ ನಿರ್ಧಾರವು ಪ್ರಾಮಾಣಿಕ ಭಾರತೀಯನಿಗೆ ಆಳವಾದ ಗಾಯ ಮಾಡಲಿದೆ ಹಾಗೂ ಅಪ್ರಾಮಾಣಿಕ ಕಪ್ಪುಕುಳಗಳು ಬೆರಳಗಿಣ್ಣಿಗೆ ಕೇವಲ ಸಣ್ಣ ಗಾಯದೊಂದಿಗೆ ಪಾರಾಗಲಿದ್ದಾರೆಂದು ಹೇಳಿದ್ದಾರೆ.

ಭಾರತ ಸರಕಾರ ತಮ್ಮನ್ನು ಹಾಗೂ ತಮ್ಮ ಹಣವನ್ನು ರಕ್ಷಿಸುವುದೆಂದು ಕೋಟ್ಯಂತರ ಜನರು ಇರಿಸಿದ್ದ ನಂಬಿಕೆ ಹಾಗೂ ಭರವಸೆಯನ್ನು ಪ್ರಧಾನಿಯ ಒಂದು ಅವಸರದ ನಿರ್ಧಾರವು ನಾಶಗೊಳಿಸಿದೆ. ಅದರಿಂದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವಾಗಲಿದೆ. ಬಹುಸಂಖ್ಯಾತ ಭಾರತೀಯರ ಪ್ರಾಮಾಣಿಕ ಸಂಪತ್ತು ರಾತ್ರಿ ಬೆಳಗಾಗುವುದರೊಳಗೆ ಬರಿದಾದುದರಿಂದಾದ ಗಾಯಕ್ಕೆ ಹೊಸ ನೋಟುಗಳ ಮಿತ ಲಭ್ಯತೆಯು ಸುಣ್ಣ ಸವರಿದಂತಾಗಿದೆಯೆಂದು ಮನಮೋಹನ್ ಟೀಕಿಸಿದ್ದಾರೆ.

ಒಬ್ಬನಲ್ಲಿ ಎಲ್ಲ ಪರಿಹಾರಗಳಿವೆ ಹಾಗೂ ಕಪ್ಪುಹಣ ಮಟ್ಟ ಹಾಕಲು ಹಿಂದಿನ ಸರಕಾರಗಳು ವಿಫಲವಾಗಿವೆಯೆಂದು ನಂಬುವುದು ತಪ್ಪು ಎಂದವರು ಸರಕಾರವನ್ನು ತಿವಿದಿದ್ದಾರೆ.

ತೆರಿಗೆಗಳ್ಳತನ ಹಾಗೂ ನಕಲಿ ನೋಟುಗಳನ್ನು ಭಯೋತ್ಪಾದಕರು ಬಳಸುವುದನ್ನು ತಡೆಯುವ ನೋಟು ರದ್ದತಿಯ ಹಿಂದಿನ ಗೌರವಾರ್ಹ ಹಾಗೂ ವೌಲ್ಯಯುತ ಉದ್ದೇಶಕ್ಕೆ ಹೃತ್ಪೂರ್ವಕ ಬೆಂಬಲವಿದೆ. ಆದರೆ, ಶೇ.90ರಷ್ಟು ನೌಕರರು ವೇತನವನ್ನು ನಗದು ರೂಪದಲ್ಲೇ ಪಡೆಯುತ್ತಿದ್ದಾರೆ ಹಾಗೂ 60 ಕೋಟಿಗೂ ಹೆಚ್ಚು ಭಾರತೀಯರು ಬ್ಯಾಂಕ್‌ಗಳೇ ಇಲ್ಲದ ಪಟ್ಟಣ ಹಾಗೂ ಹಳ್ಳಿಗಳಲಿದ್ದಾರೆ. ದೊಡ್ಡ ನೋಟುಗಳಲ್ಲಿರುವ ಅವರ ಹಣವನ್ನು ಯಾರು ರಕ್ಷಿಸುತ್ತಾರೆ? ಅದಕ್ಕೆ ಕಪ್ಪು ಹಣವೆಂಬ ಕಳಂಕ ಹಚ್ಚುವುದು ಹಾಗೂ ಈ ಲಕ್ಷಾಂತರ ಜನರ ಜೀವನವನ್ನು ಹದಗೆಡಿಸುವುದು ‘ಮಹಾ ದುರಂತ’ ಎಂದು ಮನಮೋಹನ್ ಟೀಕಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X