ತಿಬ್ಲೆಪದವು: ರಹ್ಮಾನಿಯ ಮದರಸದಲ್ಲಿ ಈದ್ ಮಿಲಾದ್ ಆಚರಣೆ
![ತಿಬ್ಲೆಪದವು: ರಹ್ಮಾನಿಯ ಮದರಸದಲ್ಲಿ ಈದ್ ಮಿಲಾದ್ ಆಚರಣೆ ತಿಬ್ಲೆಪದವು: ರಹ್ಮಾನಿಯ ಮದರಸದಲ್ಲಿ ಈದ್ ಮಿಲಾದ್ ಆಚರಣೆ](https://www.varthabharati.in/sites/default/files/images/articles/2016/12/13/IMG-20161212-WA0089.jpg)
ಕೊಣಾಜೆ , ಡಿ.13 : ರಹ್ಮಾನಿಯಾ ಮದರಸ ತಿಬ್ಲೆಪದವು ನಾಟೆಕಲ್ ಇದರ ವತಿಯಿಂದ ಈದ್ ಮಿಲಾದ್ ಆಚರಣೆಯು ಸೋಮವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದರಸದ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ನರೇಕಳ ಅವರು ವಹಿಸಿದ್ದರು.
ಮದರಸ ಮುಖ್ಯ ಅಧ್ಯಾಪಕರಾದ ಇಬ್ರಾಹಿಂ ಮದನಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸಚಿವರಾದ ಯು.ಟಿ.ಖಾದರ್ ಅವರು ಭಾಗವಹಿಸಿ ಮಾತನಾಡಿ, ನಾವೆಲ್ಲರೂ ಕೋಮು ಸೌಹಾರ್ದತೆಯೊಂದಿಗೆ ಬದುಕುವ ಮೂಲಕ ಪ್ರವಾದಿರವರ ಆದರ್ಶ ಜೀವನವನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿ.ಎಂ.ಮುಹಮ್ಮದ್, ಮೊಯಿದಿನ್ ಕುಂಞಿ ನಾಟೆಕಲ್, ಇಕ್ಬಾಲ್, ಉಸ್ಮಾನ್, ಹಮೀದ್, ಖಾಸಿಂ ಮುಂತಾದವರು ಉಪಸ್ಥಿತರಿದ್ದರು.
Next Story