ಬೊಳ್ಳೂರು: ಮೀಲಾದುನ್ನಬಿ ಆಚರಣೆ
ಸರಕಾರಿ ಸವಲತ್ತುಗಳ ಸದುಪಯೋಗಕ್ಕೆ ಗಫೂರ್ ಕರೆ
ಮುಲ್ಕಿ, ಡಿ.14: ಸಿದ್ದರಾಮಯ್ಯ ಸರಕಾರವು ಅಲ್ಪಸಂಖ್ಯಾತರಿಗೆ ಬಹಳಷ್ಟು ಯೋಜನೆಗಳನ್ನು ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಅಬ್ದುಲ್ ಗಫೂರ್ ಕರೆ ನೀಡಿದರು.
ಅವರು ಹಳೆಯಂಗಡಿ ಬೊಳ್ಳೂರು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಮಸೀದಿಯ ವಠಾರದಲ್ಲಿ ನಡೆದ ಮೀಲಾದುನ್ನೆಬಿ ಆಚರಣೆಯ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಬೊಳ್ಳೂರು ಉಸ್ತಾದರಾದ ಶೈಖುನಾ ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ವಸಂತ್ ಬೆರ್ನಾರ್ಡ್, ಮಂಗಳೂರು ತಾ.ಪಂಚಾಯತ್ ಮಾಜಿ ಸದಸ್ಯ ಮನ್ಸೂರ್ ಸಾಗ್, ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಮಸೀದಿಯ ಮಾಜಿ ಕಾರ್ಯದರ್ಶಿ ಹಾಜಿ ಬಿ.ಎ.ಅಬ್ದುಲ್ ಖಾದರ್ ಐಎಕೆ ಮೊದಲಾದವರು ಉಪಸ್ಥಿತರಿದ್ದರು.
Next Story