ಡಿ.16ರಿಂದ ಪ್ರವಾದಿ ಸಂದೇಶ ಪ್ರಚಾರ ಅಭಿಯಾನ
ಮಂಗಳೂರು, ಡಿ.14: ಯುನಿವೆಫ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್ (ಸ.)ಅವರ ಸಂದೇಶ ಪ್ರಚಾರ ಅಭಿಯಾನ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಡಿ.16ರಿಂದ ಫೆಬ್ರವರಿ 3ರ ತನಕ ಹಮ್ಮಿಕೊಳ್ಳಲಾಗಿದೆ.
ಇದರ ಉದ್ಘಾಟನಾ ಸಮಾರಂಭವು ಡಿ.16ರಂದು ಸಂಜೆ 6.30ಕ್ಕೆ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಜರಗಲಿದೆ. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿಯ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಉದ್ಘಾಟಿಸುವರು. ಯುನಿವೆಫ್ ರಾಜ್ಯಾಧ್ಯಕ್ಷ ರಫೀ ಉದ್ದೀನ್ ುದ್ರೋಳಿ ಅಧ್ಯಕ್ಷತೆ ವಹಿಸುವರು.
ಇದೇ ವೇಳೆ ಕಳೆದ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ದ.ಕ. ಜಿಲ್ಲೆಯ ಐವರು ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಮೌಲಾನಾ ಅಬುಲ್ ಕಲಾಂ ಆಝಾದ್ ಪ್ರಶಸ್ತಿ ಮತ್ತು ಸರ್. ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಅಭಿಯಾನದ ಅಂಗವಾಗಿ ಉಳ್ಳಾಲ, ತೊಕ್ಕೊಟ್ಟು, ದೇರಳಕಟ್ಟೆ, ಕೆ.ಸಿ.ರೋಡ್, ಮಾರಿಪಳ್ಳ, ಪುತ್ತೂರು, ಉಪ್ಪಿನಂಗಡಿ, ಕೃಷ್ಣಾಪುರ, ಬಜ್ಪೆ ಹಾಗೂ ಕುದ್ರೋಳಿಯಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗುವುದು. ಅಭಿಯಾನದ ಸಂಚಾಲಕರಾಗಿ ಸಲೀಮ್ ಮಲಾರ್ ಹಾಗೂ ಸಹಸಂಚಾಲಕರಾಗಿ ಅಬ್ದುಲ್ಲಾ ಪಾರೆ ನೇಮಿಸಲ್ಪಟ್ಟಿದ್ದಾರೆ.
ಇದರ ಸಮಾರೋಪ ಸಮಾರಂಭವು ಫೆಬ್ರವರಿ 3ರಂದು ಮಂಗಳೂರಿನ ಪುರಭವನದಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.