ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ಎನ್ನೆಸ್ಸೆಸ್ ಶಿಬಿರ ಸಮಾರೋಪ
![ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ಎನ್ನೆಸ್ಸೆಸ್ ಶಿಬಿರ ಸಮಾರೋಪ ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ಎನ್ನೆಸ್ಸೆಸ್ ಶಿಬಿರ ಸಮಾರೋಪ](https://www.varthabharati.in/sites/default/files/images/articles/2016/12/15/IMG_20161016_162527.jpg)
ಮುಡಿಪು , ಡಿ.15 : ಸೈಂಟ್ ರೇಮಂಡ್ಸ್ ಪ. ಪೂ. ಕಾಲೇಜು ವಾಮಂಜೂರು ಇದರ ರಾ. ಸೇ. ಯೋ. ಘಟಕದ 2016-17 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದೇರಳಕಟ್ಟೆ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾನೀರು ಇಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಆಶೀರ್ವಚನ ನೀಡಿದ ಪಾನೀರು ಚರ್ಚ್ನ ಧರ್ಮಗುರು ರೆ.ಫಾ. ಡೆನಿಸ್ ಸುವಾರಿಸ್ರವರುರಾ, ಎನ್ನೆಸ್ಸೆಸ್ ನ ಇಂತಹ ಶಿಬಿರಗಳು ಸದೃಢ ಸಮಾಜ ಮತ್ತು ಸಜ್ಜನ ವ್ಯಕ್ತಿಗಳನ್ನು ಸಮಾಜಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಂ. ಭ. ಸಾಧನಾ ಬಿ.ಎಸ್. , ಶಿಬಿರದಲ್ಲಿ ಕಲಿತ ಎಲ್ಲಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಪ್ರಯತ್ನ ಮಾಡಬೇಕು ಎಂದರು.
ಸಹಕಾರ್ಯಕ್ರಮಾಧಿಕಾರಿ ಜಯರಾಮ ಗೌಡ ಸ್ವಾಗತಿಸಿದರು .
ಕಾರ್ಯಕ್ರಮಾಧಿಕಾರಿ ದಿನಕರ್ ಅಂಚನ್ ವಂದಿಸಿದರು.
ಶಿಭಿರಾರಾರ್ಥಿಗಳಾದ ಧನುಷ್ ಮತ್ತು ಪೃಥ್ವಿ ಏಳು ದಿನಗಳ ಶಿಬಿರದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು.
ಶಿಬಿರಾರ್ಥಿ ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.