ಜ.27ರಂದು ಬಹರೇನ್ನಲ್ಲಿ ‘ಕರಾವಳಿ ಸಂಭ್ರಮ’
ಉಡುಪಿ, ಡಿ.15: ಅನಿವಾಸಿ ಬಿಲ್ಲವರ ಸಂಘಟನೆಯಾದ ಬಹರೇನ್ ಬಿಲ್ಲವಾಸ್ ವತಿಯಿಂದ ಸಾಂಸ್ಕೃತಿಕ ಹಬ್ಬ ‘ಕರಾವಳಿ ಸಂಭ್ರಮ -2017’ನ್ನು ಜ.27ರಂದು ಸಂಜೆ 3 ಗಂಟೆಗೆ ಬಹರೇನ್ ಮನಮದಲ್ಲಿರುವ ಅಲ್ ರಾಜ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಕನ್ನಡ ಚಿತ್ರರಂಗದ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ತಮ್ಮ ಪತ್ನಿಯೊಂದಿಗೆ ಪಾಲ್ಗೊಳ್ಳಲಿ ರುವರು.
ಅದೇ ರೀತಿ ಚಿತ್ರನಟರು, ಕಲಾವಿದರು, ಜಾನಪದ ವಿದ್ವಾಂಸರು, ಹಾಸ್ಯ ಕಲಾವಿದರ ತಂಡ, ಜಾನಪದ ಕಲಾವಿದರ ತಂಡ ಭಾಗವಹಿಸಲಿವೆ.ಅಲ್ಲದೆ ಸ್ಥಳೀಯ ಕಲಾವಿದರುಗಳ ವಿವಿಧ ನೃತ್ಯ ವೈವಿಧ್ಯಗಳು ನಡೆಯಲಿವೆ ಎಂದು ಸಂಘದ ಅಧ್ಯಕ್ಷ ರಾಜ್ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ.28ರಂದು ಸಂಜೆ ಗಂಟೆ 7ಗಂಟೆಗೆ ಬಿಲ್ಲವ ಸಮಾಗಮ ಕಾರ್ಯಕ್ರಮವು ಅದ್ಲಿಯ ಶೇಕ್ ಇಸ ಬಿನ್ ಸಲ್ಮಾನ್ ಕಲ್ಚರಲ್ ಹಾಲ್ನಲ್ಲಿ ನಡೆಯಲಿದೆ. ಇದರಲ್ಲಿ ಬಿಲ್ಲವ ಮುಖಂಡರು ಸಮಾಜವನ್ನು ಉದ್ದೇಶಿಸಿ ಮಾತನಾಡಲಿರುವರು.
ಸಂಗೀತ, ನೃತ್ಯ, ಹಾಸ್ಯ ನಾಟಕ, ಜಾನಪದ ನೃತ್ಯಗಳು ನಡೆಯಲಿದ್ದು, ಬಿಲ್ಲವ ಸಮು ದಾಯದ ಎಲ್ಲ ಸದಸ್ಯರಿಗೆ ಪಾಲ್ಗೊಳಲು ಮುಕ್ತ ಅವಕಾಶ ನೀಡಲಾಗಿದೆ. ಸೌದಿ ರಾಷ್ಟ್ರದ ಬಿಲ್ಲವ ಸಮುದಾಯದ ಸದಸ್ಯರು ಇದರಲ್ಲಿ ಪಾಲ್ಗೊಳಲಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊಬೈಲ್- 0097339688395 ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಚಂದ್ರಶೇಖರ್ ಸುವರ್ಣ, ರೋಹಿದಾಸ್, ಸತೀಶ್ ಸುವರ್ಣ, ಗಗನ್ ಸುವರ್ಣ ಉಪಸ್ಥಿತರಿದ್ದರು.