ಗಾಂಜಾ ಆರೋಪಿ ಪೋಲಿಸ್ ವಶಕ್ಕೆ
![ಗಾಂಜಾ ಆರೋಪಿ ಪೋಲಿಸ್ ವಶಕ್ಕೆ ಗಾಂಜಾ ಆರೋಪಿ ಪೋಲಿಸ್ ವಶಕ್ಕೆ](https://www.varthabharati.in/sites/default/files/images/articles/2016/12/15/15dl-HAYAZ.jpg)
ಬೆಳ್ತಂಗಡಿ, ಡಿ.15 : ಬೆಳ್ತಂಗಡಿ ಸಮೀಪದ ಹಳೆಕೋಟೆ ಬಳಿ ಇರುವ ಬಸ್ನಿಲ್ದಾಣದ ಬಳಿ ಗುರುವಾರ ಇಬ್ಬರಿಂದ ಗಾಂಜಾವನ್ನು ಪೋಲಿಸರು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬೆಲಾಲ್ ಮಸೀದಿ ಬಳಿಯ ಟಿಪ್ಪು ನಗರದ ನಿವಾಸಿ, ಪ್ರಸ್ತುತ ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿರುವ ಹಯಾರ್ ಯಾನೆ ಪೈಝಲ್ (26) ಬಂಧಿತ ಆರೋಪಿ. ಈತನಿಂದ ಇವರಿಂದ 3000 ರೂ. ಮೌಲ್ಯದ 150 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story