ಪೆರಿಯಾರ್ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರು ಪಾಲು

ಕೊಚ್ಚಿ, ಡಿ.16: ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರ್ ಎಂಬಲ್ಲಿ ಪೆರಿಯಾರ್ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜಿನ ಮೂರನೆ ವರ್ಷದ ಪದವಿ ವಿದ್ಯಾರ್ಥಿಗಳಾದ ಬಿಹಾರ್ ನ ಅನುಭವ್ ಚಂದ್ರ ಮತ್ತು ಉತ್ತರ ಪ್ರದೇಶದ ಆದಿತ್ಯ ಪಾಟೇಲ್, ಪ್ರಥಮ ಪದವಿ ವಿದ್ಯಾರ್ಥಿ ವಯನಾಡ್ ನ ಕೆನ್ನತ್ ಜಾನ್ ಮತ್ತು ಖಾಸಗಿ ರೆಸೊರ್ಟ್ವೊಂದರ ಮಾಲಿಕ ಬಿನ್ನಿ ಎಂಬವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇಬ್ಬರು ವಾರ್ಡನ್ಗಳು ಮತ್ತು 11 ವಿದ್ಯಾರ್ಥಿಗಳು ಪ್ರವಾಸಿಧಾಮವಾಗಿರುವ ಪನಿಯೆಲಿ ಪೊರು ಎಂಬಲ್ಲಿಗೆ ಆಗಮಿಸಿದ್ದರು. ವಿದ್ಯಾರ್ಥಿಗಳು ನೀರಿಗೆ ಇಳಿದಾಗ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story





