ಪೆಟ್ರೋಲ್ ಬಂಕ್ಗೆ ನುಗ್ಗಿ ಕಳವು
ಮಂಗಳೂರು, ಡಿ.17: ದೇರಳಕಟ್ಟೆ ಸಮೀಪದ ಯೆನೆಪೊಯ ಆಸ್ಪತ್ರೆಯ ಬಳಿಯ ಪೆಟ್ರೋಲ್ ಬಂಕೊಂದಕ್ಕೆ ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 51,240 ರೂ. ನಗದನ್ನು ಕಳವುಗೈದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಸುನಂದ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ಮಹಾಬಲ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಶನಿವಾರ ಮುಂಜಾನೆ ಈ ಕೃತ್ಯ ತಿಳಿದು ಬಂದಿದೆ. ಕಳ್ಳರು ಪೆಟ್ರೋಲ್ ಬಂಕ್ನ ಶಟರ್ ಮುರಿದು ಈ ಕೃತ್ಯ ಎಸಗಿದ್ದಾರೆ.
Next Story