ಬಾಯಾರ್ ಸ್ವಲಾತ್ ಮಜ್ಲಿಸ್
![ಬಾಯಾರ್ ಸ್ವಲಾತ್ ಮಜ್ಲಿಸ್ ಬಾಯಾರ್ ಸ್ವಲಾತ್ ಮಜ್ಲಿಸ್](https://www.varthabharati.in/sites/default/files/images/articles/2016/12/18/bayar 02.jpg)
ಬಾಯರ್, ಡಿ.17: ಪ್ರವಾದಿ ಜನ್ಮ ದಿನಾಚರಣೆ ಅನಿಸ್ಲಾಮಿಕ ಎಂದು ಹೇಳುವ ನೂತನವಾದಿಗಳಿಂದ ದೂರವಿರಿ ಎಂದು ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯಿದ ಅಧ್ಯಕ್ಷ ಅಬ್ದುರ್ರಹ್ಮಾನ್ಇಂಬಿಚ್ಚಿಕೋಯ ಬಾಯಾರ್ ತಂಙಳ್ ಕರೆ ನೀಡಿದರು.
ಅವರು ಶುಕ್ರವಾರ ಬಾಯಾರ್ ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯಿದಲ್ಲಿ ನಡೆದ ಸ್ವಲಾತ್ ಮಜ್ಲಿಸ್ ನೇತೃತ್ವವಹಿಸಿ ಮಾತನಾಡಿದರು.
ಪ್ರವಾದಿ ಜನ್ಮ ದಿನಾಚರಣೆಗೆ ಇತಿಹಾಸವಿದ್ದು ನೂತನವಾದಿಗಳು ಬೇರೆ ಬೇರೆ ರೀತಿಯಲ್ಲಿ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದು ಈ ಬಗ್ಗೆ ಮುಸ್ಲಿಂ ಸಮುದಾಯ ಎಚ್ಚರ ವಹಿಸಬೇಕು ಎಂದು ಹೇಳಿದರು.
ಅಲ್-ಮದೀನಾ ಮಂಜನಾಡಿಯ ಅಧ್ಯಕ್ಷ ಅಬ್ಬಾಸ್ ಮುಸ್ಲಿಯರ್, ದಾರುಲ್ ಅಶ್-ಅರಿಯ್ಯಿ ಸುರಿಬೈಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಾಲೆಮಂಡೇವು ಮುಹಮ್ಮದ್ ಫೈಝಿ, ಎಸ್ಸೆಸ್ಸೆಫ್ ಮುಖಂಡ ಅಶ್ರಫ್ ಸಅದಿ ಮಲ್ಲೂರು, ಸುನ್ನಿ ಫೈಝಿ ಉಸ್ತಾದ್, ಬಿ.ಎಸ್. ಮುಸ್ಲಿಯಾರ್, ಮಜೀದ್ ಹಾಜಿ ಉಚ್ಚಿಲ, ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಪೊಯ್ಯತ್ತಬೈಲ್ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ವಂದಿಸಿದರು.