ಅಳಿಯನಿಂದ ಅತ್ತೆ ಮಾವನ ಮೇಲೆ ಹಲ್ಲೆ
ಮುಂಡಗೋಡ, ಡಿ.18: ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನಿಗೆ ಬುದ್ದಿ ಹೇಳಿದ ಅತ್ತೆ ಮಾವನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾ ಕಾಲೋನಿಯಲ್ಲಿ ನಡೆದಿದೆ. ಹಲ್ಲೆಮಾಡಿದವವನನ್ನು ಸುರೇಶ ದಾದಾರಾವ ಸಿಂದೆ ಎಂದು ತಿಳಿದುಬಂದಿದೆ
ಹಲ್ಲೆಗೊಳಗಾದವರನ್ನು ಮೈನಳ್ಳಿಯ ದುರ್ಗಾ ಕಾಲೋನಿಯವರಾದ ಬೈರು ಸಾಳೊಂಕೆ ಮತ್ತು ತುಳಸಾಭಾಯಿ ಸಾಳೊಂಕೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ದಂಪತಿಗಳು ತಮ್ಮ ಮಗಳನ್ನು ಅಳಿಯ ಸರಿಯಾಗಿ ನೋಡಿಕೊಂಡು ಹೋಗು ತೊಂದರೆ ಕೊಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ ಅಳಿಯನು ಕುಪಿತನಾಗಿ ಸುತ್ತಿಗೆ ಹಿಡಿದು ಕೊಂಡು ಅಕ್ರಮವಾಗಿ ಮನೆಗೆ ಪ್ರವೇಶ ಅತ್ತೆ ಮಾವನನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ ಮಾವನಿಗೆ ಸುತ್ತಿಗೆಯಿಂದ ಹಲ್ಲೆಮಾಡಿದ್ದು, ಬಿಡಿಸಲು ಬಂದ ಅತ್ತೆಯನ್ನು ಸಲಿಕೆಯ ಕಾವಿನಿಂದ ತಲೆಗೆ ಹೊಡೆದಿದ್ದಾನೆ ಎಂದು ಬೈರು ಸಾಳೊಂಕೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
Next Story





