Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಮಾಯಣದ ಶೂರ್ಪನಖಿ ನಿಜಕ್ಕೂ ಮಾಯಗಾತಿಯೇ...

ರಾಮಾಯಣದ ಶೂರ್ಪನಖಿ ನಿಜಕ್ಕೂ ಮಾಯಗಾತಿಯೇ ಅಥವಾ ಬಲಿಪಶುವೇ?

ವಾರ್ತಾಭಾರತಿವಾರ್ತಾಭಾರತಿ18 Dec 2016 6:57 PM IST
share
ರಾಮಾಯಣದ ಶೂರ್ಪನಖಿ ನಿಜಕ್ಕೂ ಮಾಯಗಾತಿಯೇ ಅಥವಾ ಬಲಿಪಶುವೇ?

ಹೊಸದಿಲ್ಲಿ,ಡಿ.18: ರಾಮಾಯಣದಲ್ಲಿ ಲಂಕಾಧಿಪತಿ ರಾವಣನ ತಂಗಿ ಶೂರ್ಪನಖಿಯ ಬಗ್ಗೆ ತಿಳಿಯದವರಾರು? ಲಕ್ಷ್ಮಣ ತನ್ನನ್ನು ಮೋಹಿಸಿದ್ದ ಇದೇ ಶೂರ್ಪನಖಿಯ ಮೂಗನ್ನು ತುಂಡರಿಸಿದ್ದ ಮತ್ತು ರಾಮ ಮತ್ತು ರಾವಣರ ನಡುವಿನ ಯುದ್ಧಕ್ಕೆ ಈಕೆಯೇ ಕಾರಣಕರ್ತಳು ಎನ್ನಲಾಗುತ್ತದೆ. ಆದರೆ ರಾಮಾಯಣದಲ್ಲಿ ಚಿತ್ರಿಸಿರುವಂತೆ ಆಕೆ ನಿಜಕ್ಕೂ ಮಾಯಗಾತಿ ಹೆಂಗಸಾಗಿದ್ದಳೇ..?

ಪೌರಾಣಿಕ ಕೃತಿಗಳ ಲೇಖಕಿ ಕವಿತಾ ಕಾಣೆ ಅವರು ತನ್ನ ಇತ್ತೀಚಿನ ‘ಲಂಕಾದ ರಾಜಕುಮಾರಿ ’ ಕೃತಿಯಲ್ಲಿ ಶೂರ್ಪನಖಿಯನ್ನು ಖಳನಾಯಕಿಯಂತೆ ಚಿತ್ರಿಸಿರುವ ವಾಲ್ಮೀಕಿಯ ಕಲ್ಪನೆಗೆ ವಿರುದ್ಧವಾದ ಚಿತ್ರಣವನ್ನು ನೀಡಿದ್ದಾರೆ.

ಶೂರ್ಪನಖಿಯ ಮನೋಸ್ಥಿತಿಯ ಬಗ್ಗೆ ಗಾಢಚಿಂತನೆಯನ್ನು ನಡೆಸಿರುವ ಕಾಣೆ ತನ್ನ ಕೃತಿಯಲ್ಲಿ ಆಕೆಯನ್ನು ಮಾನವಜೀವಿಯೊಂದಿಗೆ ಸಮೀಕರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.

ಎಲ್ಲ ರಾಮಾಯಣಗಳಲ್ಲೂ ಶೂರ್ಪನಖಿಯ ಒಂದೇ ಬಗೆಯ ಚಿತ್ರಣವಿದೆ. ನಾನು ಅದನ್ನು ಮೀರಲು ಬಯಸಿದ್ದೆ. ಲಕ್ಷ್ಮಣ ಆಕೆಯ ಮೂಗನ್ನು ತುಂಡರಿಸಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ರಾಮಾಯಣದಲ್ಲಿಯ ಅತ್ಯಂತ ಹಿಂಸಾತ್ಮಕ ಅಧ್ಯಾಯವೆಂದು ನಾನು ಭಾವಿಸಿದ್ದೇನೆ. ಆದರೆ ಅವಳಿಗೆ ಏನೇ ಆಗಿದ್ದರೂ ಅದು ಅವಳ ಸ್ವಂತ ಕೃತ್ಯಗಳಿಂದಲೇ ಆಗಿತ್ತೇ? ಆಕೆ ಮಾಯಗಾತಿಯಾಗಿದ್ದಳೇ ಅಥವಾ ಬಲಿಪಶು ವಾಗಿದ್ದಳೇ? ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ ಇಡೀ ದೃಷ್ಟಿಕೋನವೇ ಬದಲಾಗಿಬಿಡುತ್ತದೆ ಎಂದು ಪುಣೆ ಮೂಲದ ಕಾಣೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.

ಕಾಣೆಯವರ ಗಮನವನ್ನು ಸೆಳೆದಿದ್ದು ಶೂರ್ಪನಖಿಯ ಹೆಸರು. ಮತ್ತು ಇದರಿಂದಾಗಿಯೇ ಅವರು ಇತಿಹಾಸವನ್ನು ಕೆದಕಿ ಆಕೆಯ ಪಾತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟ್ದಿದ್ದಾರೆ.

ಅನಾಕರ್ಷಕ ಮತ್ತು ಘೋರರೂಪದ ಹೆಣ್ಣಾಗಿ ಸಾಂಪ್ರದಾಯಿಕವಾಗಿ ಬಿಂಬಿಸಲ್ಪ ಟ್ಟಿರುವ ಶೂರ್ಪನಖಿಯ ಕಣ್ಣುಗಳು ಮೀನಿನ ಕಣ್ಣುಗಳನ್ನು ಹೋಲುತ್ತಿದ್ದ ಕಾರಣಕ್ಕಾಗಿ ಆಕೆಯ ಮೂಲ ಹೆಸರು ಮೀನಾಕ್ಷಿ ಎಂದಾಗಿತ್ತು.

ಹೀಗಿರುವಾಗ ಚೂಪಾದ ಮತ್ತು ಉದ್ದನೆಯ ನಖಗಳನ್ನು ಹೊಂದಿರುವವಳು ಎಂಬ ಅರ್ಥವನ್ನು ನೀಡುವ,ದುಷ್ಟಶಕ್ತಿಗಳೊಂದಿಗೆ ಗುರುತಿಸಿಕೊಂಡಿರುವಂತಹ ಈ ಶೂರ್ಪನಖಿ ಎಂಬ ಹೆಸರು ಆಕೆಗೆ ಬಂದಿದ್ದಾದರೂ ಹೇಗೆ? ಕಾಣೆ ತನ್ನ ಕೃತಿಯಲ್ಲಿ ಇದಕ್ಕೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X