Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಸಂಸತ್ ಭವನ ಕಾಂಗ್ರೆಸ್ ಮನೆಯಲ್ಲ

*ಸಂಸತ್ ಭವನ ಕಾಂಗ್ರೆಸ್ ಮನೆಯಲ್ಲ

ವಾರ್ತಾಭಾರತಿವಾರ್ತಾಭಾರತಿ19 Dec 2016 12:14 AM IST
share

 *ಸಂಸತ್ ಭವನ ಕಾಂಗ್ರೆಸ್ ಮನೆಯಲ್ಲ

  
-ಅನಂತಕುಮಾರ್, ಕೇಂದ್ರ ಸಚಿವ ಆರೆಸ್ಸೆಸ್ ಮುಖ್ಯ ಕಚೇರಿಯೆಂದು ಅಧಿಕೃತವಾಗಿ ಘೋಷಣೆ ಮಾಡಿಬಿಡಿ.

---------------------
  ನಾನು-ಯಡಿಯೂರಪ್ಪ ಈಗ ಸ್ವಲ್ಪ ದೂರವಿದ್ದೇವೆ ಅಷ್ಟೇ. ಇಂದಲ್ಲ ನಾಳೆ ಒಂದಾಗುತ್ತೇವೆ

  - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ ಇಬ್ಬರಲ್ಲಿ ಯಾರಾದರೂ ಒಬ್ಬರಷ್ಟೇ ಉಳಿಯುತ್ತಾರೆ ಎಂಬ ಸೂಚನೆಯೇ?
---------------------
  1996ರಲ್ಲಿ ಜಯಲಲಿತಾ ಸೋಲಿಗೆ ನಾನೇ ಕಾರಣ
-ರಜನಿಕಾಂತ್, ಸಿನೆಮಾ ನಟ
  ಇಲ್ಲ ನಾನು ಕಾರಣ ಎಂದು ಜಿದ್ದಿಗೆ ಬಿದ್ದಿದ್ದಾರೆ ಶಶಿಕಲಾ.
---------------------
  ನರೇಂದ್ರ ಮೋದಿ ಸಂಸತ್‌ನಿಂದ ಓಡಿ ಹೋದ ಪ್ರಥಮ ಪ್ರಧಾನಿ
-ರನ್‌ದೀಪ್ ಸರ್ಜೇವಾಲಾ,ಕಾಂಗ್ರೆಸ್ ವಕ್ತಾರ.
  
ರಾಹುಲ್‌ಗಾಂಧಿ ಮಾತನಾಡಿ ಭೂಕಂಪ ಆಗಿಬಿಟ್ಟರೆ ಎಂಬ ಭಯದಿಂದಿರಬೇಕು. ಒಟ್ಟಿನಲ್ಲಿ ಜನರ ಹಿತಾಸಕ್ತಿಗಾಗಿ.

---------------------
  ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಪಾಕ್ ಯತ್ನಿಸುತ್ತಿದೆ
-ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ, ದಾದ್ರಿ ಹತ್ಯೆ ಇವೆಲ್ಲವನ್ನೂ ಪಾಕಿಸ್ತಾನವೇ ಬಂದು ಮಾಡಿರಬೇಕು, ಅಲ್ಲವೇ?
---------------------
  ಹೆದ್ದಾರಿಯಲ್ಲಿ ಬಾರ್‌ಗಳಿಗೆ ನಿಷೇಧ
-ಸುಪ್ರೀಂಕೋರ್ಟ್.
  
ನಮಗೆ ಹೆದ್ದಾರಿಯೇ ಬೇಡ ಎಂದು ಕುಡುಕರು ಹೆದ್ದಾರಿ ತಡೆ ಆಚರಿಸಲಿದ್ದಾರಂತೆ.

---------------------
  ಸಮಾಜ ಸೇವೆ ಮಾಡುವಾಗ ಅವಮಾನ ಆಗುವುದು ಸಹಜ
-ಅಣ್ಣಾ ಹಝಾರೆ,ಹೋರಾಟಗಾರ
  
ಆದರೆ ಜನರಲ್ಲಿ ಅನುಮಾನ ಹುಟ್ಟಬಾರದು.

---------------------
  

ಆಡಳಿತದಲ್ಲಿ ನಿರ್ಣಯ ಕೈಗೊಳ್ಳುವಾಗ ಅದಕ್ಕೆ ಬಹುಮತ ಬೇಕೆಂದೇನೂ ಇಲ್ಲ ,ಜನರ ಸಹಮತ ಇದ್ದರೆ ಸಾಕು ಎಂದು ಭೀಷ್ಮ ಹೇಳಿದ್ದರು -ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
  ಅಂತಹ ಭೀಷ್ಮ ಕೊನೆಗೆ ಶಿಖಂಡಿಯಿಂದ ಹತರಾಗಬೇಕಾಯಿತು.
---------------------
  ಬುದ್ಧಿ ಜೀವಿಗಳನ್ನು ಅನುಸರಿಸುವ ಕೆಲವು ಮಂದಿ ಹಿಂದೂ ಎನ್ನಲು ಸಂಕೋಚ ಪಡುತ್ತಿದ್ದಾರೆ

  
-ಡಾ.ಚಿದಾನಂದಮೂರ್ತಿ,ಸಂಶೋಧಕ ತಮ್ಮಂಥವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಿರುವ ಕಾರಣದಿಂದ ಇರಬೇಕು.

---------------------
  
ತನಿಖೆಯಾದರೆ ಸಿದ್ದು ಸಂಪುಟದ ಅನೇಕ ಸಚಿವರು ಜೈಲಿಗೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  
ಜೈಲಿಗೆ ಹೋಗಿ ಬಂದವರ ಅನುಭವದ ಮಾತು.

---------------------
  ಕುತ್ತಿಗೆ ಕುಯ್ದರೂ ಬಿಜೆಪಿ ಬಿಡೋಲ್ಲ

  -ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ ಅದಕ್ಕೇ ಬೆನ್ನಿಗೆ ಇರಿಯುತ್ತಿದ್ದಾರೆ.
---------------------
  ನಾವ್ಯಾರೂ ಅರ್ಜಿ ಹಾಕಿಕೊಂಡು ಆಯಾ ಜಾತಿಯಲ್ಲಿ ಹುಟ್ಟಿಲ್ಲ
-ಸಿದ್ದರಾಮಯ್ಯ, ಮುಖ್ಯಮಂತ್ರಿ
  
ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಮಾತ್ರ ಜಾತಿ ಅರ್ಜಿ ಬೇಕಾಗುತ್ತದೆ.

---------------------

  ಇತ್ತೀಚಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ ಕಂಡು ಮುಂದಿನ ಚುನಾವಣೆೆಯೊಳಗೆ ಸತ್ತರೆ ಸಾಕು ಎಂಬಂತಾಗಿದೆ

 -ಕಾಗೋಡು ತಿಮ್ಮಪ್ಪ, ಸಚಿವ ಯಾರು ಸತ್ತರೆ ಸಾಕು ಎಂದು ಹೇಳಲಿಲ್ಲ.

---------------------
  ದೇಶದಲ್ಲಿ ಕಾಂಗ್ರೆಸ್‌ಗೆ ಕರ್ನಾಟಕವೊಂದೇ ಸಂಪನ್ಮೂಲ ಕೇಂದ್ರ
-ಪ್ರಹ್ಲಾದ್ ಜೋಷಿ, ಸಂಸದ
  ದೋಚುವುದಕ್ಕೆ ಬಿಜೆಪಿಗೆ ಇನ್ನಷ್ಟು ಸಂಪನ್ಮೂಲಗಳ ಅವಶ್ಯವಿದೆಯೇ?
---------------------
  ಸ್ವಜನ ಮತ್ತು ನೈತಿಕತೆ ಇರುವ ರಾಜಕಾರಣಿಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಬಂದಿದೆ
- ಪ್ರಮೋದ್ ಮುತಾಲಿಕ್, ಶ್ರೀ ರಾಮ ಸೇನೆ ಮುಖ್ಯಸ್ಥ
  
ಅವರಿದ್ದಿದ್ದರೆ ನೀವು ಯಾವತ್ತೋ ಜೈಲಲ್ಲಿರಬೇಕಾಗಿರುತ್ತಿತ್ತು.

---------------------
  ಕಪ್ಪು ಹಣ ಬಿಳಿ ಮಾಡುವ ದಂಧೆಯಲ್ಲಿ ಮಂತ್ರಿಮಂಡಲ ಶಾಮೀಲು
-ಶೋಭಾ ಕರಂದ್ಲಾಜೆ, ಸಂಸದೆ
    ಕೇಂದ್ರದ ಮಂತ್ರಿಮಂಡಲದ ಕುರಿತಂತೆ ಈ ಅನುಮಾನ ಮೊದಲೇ ಇತ್ತು. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ 15 ಸ್ಥಾನವನ್ನು ಗೆಲ್ಲುತ್ತೇವೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  
20 ಅಹಿಂದ ಅಭ್ಯರ್ಥಿಗಳಿಗೆ ಕೊಟ್ಟರೆ 20 ಸ್ಥಾನ ಗೆಲ್ಲುವ ಸಾಧ್ಯತೆಗಳೂ ಇವೆ.

---------------------
  ಆರಂಭದಲ್ಲಿ ಎಲ್ಲರೂ ಅನಾಮಧೇಯರಾಗಿರುತ್ತಾರೆ
-ಬಾಬಾರಾಮ್‌ದೇವ್,ಯೋಗಗುರು.
 ಹಣ ಬಂದ ಬಳಿಕ ಹಣಾಮಧೇಯರು.
---------------------
  ನೋಟು ನಿಷೇಧ ಎಂಬುದು ಒಂದು ದೊಡ್ಡ ಹಗರಣ
-ಪಿ.ಚಿದಂಬರಂ,ಕಾಂಗ್ರೆಸ್ ನಾಯಕ
  ಕಾಂಗ್ರೆಸ್‌ನ ಪಾಲೆಷ್ಟು ಎಂದು ಕೇಳುತ್ತಿದ್ದಾರೆ.
---------------------
  ಪ್ರಧಾನಿ ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ಮತ್ತು ನೀವು ಕಾಂಗ್ರೆಸ್ ವಿರುದ್ಧ ಯುದ್ಧ ಮಾಡುತ್ತಿದ್ದೀರಿ.
---------------------
  ನೋಟು ರದ್ದತಿ ಕಾಂಗ್ರೆಸ್‌ನ ನೆಮ್ಮದಿ ಕೆಡಿಸಿದೆ.
-ಅರುಣ್ ಜೇಟ್ಲಿ, ಕೇಂದ್ರ ಸಚಿವ
  ಕಾಂಗ್ರೆಸ್ ನೆಮ್ಮದಿಯನ್ನು ಕೆಡಿಸುವುದಕ್ಕಾಗಿ ದೇಶದ ಜನಸಾಮಾನ್ಯರ ಬದುಕನ್ನು ಕೆಡಿಸುವುದೇ?
---------------------
  2018ರ ಚುನಾವಣೆ ನನ್ನ ಕೊನೆಯ ಹೋರಾಟ
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ
  ಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಗೆಯೇ?
---------------------
  ನನಗೆ ಸಂಸತ್‌ಗೆ ರಾಜೀನಾಮೆ ನೀಡಬೇಕು ಅನ್ನಿಸುತ್ತದೆ.
-ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕ
  
ಅದು ಮೋದಿ ಪ್ರಧಾನಿಯಾದಾಗಲೇ ಹುಟ್ಟಿದ್ದ ಅನಿಸಿಕೆ.

---------------------

  ದಲಿತ ಕಾವ್ಯ ಬುಸುಗುಡುವ ಹಾವಾಗಬಾರದು
-ಡಾ.ಎಲ್.ಹನುಮಂತಯ್ಯ, ಹಿರಿಯ ಕವಿ
 
ಸದ್ಯಕ್ಕೆ ಅದು ಎರಡು ತಲೆಯ ಹಾವಾಗಿ ಬದಲಾಗುತ್ತಿದೆ.

---------------------
  ಪುರುಷ ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪು
-ಉಮಾಶ್ರೀ, ಸಚಿವೆ
  
ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎನ್ನುವುದನ್ನಾದರೂ ವಿವರಿಸಿ.

---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X