Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2016ರಲ್ಲಿ ನಾವು ನಂಬಿಯೇ ಬಿಟ್ಟ ಟಾಪ್...

2016ರಲ್ಲಿ ನಾವು ನಂಬಿಯೇ ಬಿಟ್ಟ ಟಾಪ್ ಟೆನ್ ಫೇಕ್ ನ್ಯೂಸ್‌ಗಳು

ಈ ಪಟ್ಟಿ ಮಜವಾಗಿದೆ :)

ವಾರ್ತಾಭಾರತಿವಾರ್ತಾಭಾರತಿ26 Dec 2016 9:19 PM IST
share
2016ರಲ್ಲಿ ನಾವು ನಂಬಿಯೇ ಬಿಟ್ಟ ಟಾಪ್ ಟೆನ್ ಫೇಕ್ ನ್ಯೂಸ್‌ಗಳು

ಕರೆನ್ಸಿಯಿಂದ ಹಿಡಿದು ಉಪ್ಪಿನವರೆಗೆ 2016ರಲ್ಲಿ ಬಹಳಷ್ಟು ಸುಳ್ಳುಸುದ್ದಿಗಳು ನಮ್ಮನ್ನು ನಂಬುವಂತೆ ಮಾಡಿಬಿಟ್ಟಿವೆ. ವಾಟ್ಸ್ ಅಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಂದ ಹಿಡಿದು ಮುಖ್ಯವಾಹಿನಿ ಮಾಧ್ಯಮ ವರೆಗೆ ಯಾವುದೂ ಇದರಿಂದ ಹೊರತಾಗಿಲ್ಲ. ಯುನೆಸ್ಕೊ, ಆರ್‌ಬಿಐನಂಥ ಸಂಸ್ಥೆಗಳು ಕೂಡಾ ವಾಸ್ತವ ಏನು ಎಂದು ಸ್ಪಷ್ಟಪಡಿಸಲು ಹೇಳಿಕೆ ನೀಡಬೇಕಾಯಿತು. ಫೇಸ್‌ಬುಕ್, ಗೂಗಲ್‌ನಂಥ ದೈತ್ಯ ಇಂಟರ್‌ನೆಟ್ ಕಂಪನಿಗಳು ಕೂಡಾ ಈ ಬಗ್ಗೆ ಗಮನ ಹರಿಸಬೇಕಾಯಿತು. ಯಾವುದಪ್ಪ ಅಂಥ ಸುಳ್ಳು ಸುದ್ದಿಗಳು ಎಂಬ ಕುತೂಹಲವೇ? ಇಲ್ಲಿದೆ ನೋಡಿ ಟಾಪ್ ಟೆನ್ ಫೇಕ್ ಸುದ್ದಿಗಳ ಪಟ್ಟಿ.

1. ಒಂದನೇ ಸ್ಥಾನದಲ್ಲಿರುವ ಸುಳ್ಳು ಸುದ್ದಿಯನ್ನು ಯುನೆಸ್ಕೊ ಹೆಸರು ದರ್ಬಳಕೆ ಮಾಡಿ ಹರಡಲಾಯಿತು. 2016ರ ಜೂನ್‌ನಲ್ಲಿ ಯುನೆಸ್ಕೊ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ಅತ್ಯುತ್ತಮ ಪ್ರಧಾನಿ ಎಂದು ಪರಿಗಣಿಸಿದೆ ಎಂದು ಜಾಲತಾಣಗಳಲ್ಲಿ ಬಿಸಿ ಬಿಸಿ ಸುದ್ದಿ ಹಬ್ಬಿತ್ತು. ಆದರೆ ಅಂತಹ ಯಾವುದೇ ಘೋಷಣೆಯನ್ನು ಮಾಡಿರಲೇ ಇಲ್ಲ !

I am proud to be #Indian, thank you @UNESCO for judging @narendramodi as best PM of the world

Received on @WhatsApp pic.twitter.com/PQqDhjQR8f

— Pranay Rupani (@pranayrupani) June 23, 2016

Congratulation to all of us Our PM "NARENDRA D. MODI" is now declared as the BEST PM OF THE WORLD by UNESCO*
Very proud to be an INDIAN.

— अर्जुन कुमार राय (@arjunrai06) December 1, 2016

Congratulations @narendramodi sir for being declared the best PM in the world by @UNESCO #ProudIndian @PMOIndia

— Pankaj Advani (@PankajAdvani247) June 24, 2016

Also @UNESCO has declared @smritiirani best HRD minister in heavy weight category Please retweet @PankajAdvani247 https://t.co/xAsD8LXbiD

— Sir Chetan Bhagat (@chetan_bhaqat) June 25, 2016

2. ಇಂಥದ್ದೇ ಇನ್ನೊಂದು ಸುದ್ದಿ, ಜನ ಗಣ ಮನ- ಭಾರತದ ರಾಷ್ಟ್ರಗೀತೆ ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಯುನೆಸ್ಕೊ ಮೆಚ್ಚುಗೆಗೆ ಪಾತ್ರವಾಗಿದೆ ಎಂಬ ಸುದ್ದಿ 2008ರಿಂದಲೇ ಹರಿದಾಡುತ್ತಿದ್ದರೂ, ಈ ವರ್ಷ ವ್ಯಾಪಕವಾಗಿ ಹರಿದಾಡಿ ಕೊನೆಗೆ ಯುನೆಸ್ಕೊ ಸ್ಪಷ್ಟನೆ ನೀಡಬೇಕಾಯಿತು.

Congratulations!! Our National Anthem "Jana Gana Mana. "is now declared as "THE BEST ANTHEM OF THE WORLD" By UNESCO.!PROUD to be an INDIAN.

— Aamir Khan (@aamirkhannw) November 14, 2016

UNESCO has declared Indian national anthem as the best national anthem in the world. Yay! ✌️

— Shiraz (@iSHIRAZONLY) November 30, 2016

3. ಇಷ್ಟಾದರೂ ಇಂಥದ್ದೇ ಸುಳ್ಳುಸುದ್ದಿಯ ಸರಣಿ ಮುಂದುವರಿಯಿತು. ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ 2000 ರೂಪಾಯಿ ನೋಟು, ವಿಶ್ವದ ಅತ್ಯುತ್ತಮ ನೋಟು ಎಂಬ ಯುನೆಸ್ಕೊ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸುಳ್ಳು ಸುದ್ದಿ ಹರಡಿತು. ಬಳಿಕ  ಇದೂ ಸುಳ್ಳು ಎಂದು ತಿಳಿದುಬಂತು

4. ಇದೇ ನೋಟಿಗೆ ಸಂಬಂಧಿಸಿದ ಮತ್ತೊಂದು ಗಾಳಿ ಸುದ್ದಿ, ಈ ನೋಟ್‌ನಲ್ಲಿ ಜಿಪಿಎಸ್ ಚಿಪ್ ಅಳವಡಿಸಲಾಗಿದೆ ಎನ್ನುವುದು. ಈ ಮೂಲಕ ಹೊಸ ನೋಟು ಎಲ್ಲಿದ್ದರೂ ಅದರ ಜಾಡು ಹಿಡಿಯಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕೆಲವು ಖ್ಯಾತ ಸುದ್ದಿ ಮಾಧ್ಯಮಗಳೂ  ಇದನ್ನೂ ಪ್ರಸಾರ ಮಾಡಿದವು.

BREAKING NEWS ₹ : 2000 Rupee Notes Nano GPS Chip found | Black Money Tracking Technology https://t.co/Ibz9SN5vvO #GPSTracking pic.twitter.com/4rheZkT3Ur

— Amparos GPS Media (@GPSAmparos) December 17, 2016

New 2000 Rupee Notes Nano GPS Chip Explained | Black Money Tracking https://t.co/aUOBk14DmR

— Firoz Diwan (@feroz_diwan) November 9, 2016

5. ಈ 2000 ರೂಪಾಯಿ ಹಾಗೂ 500 ರೂಪಾಯಿ ನೋಟುಗಳಲ್ಲಿ ವಿಕಿರಣಶೀಲ ಶಾಯಿ ಬಳಸಲಾಗಿದೆ ಎಂಬುದು ವದಂತಿ ಇನ್ನೊಂದು ಪ್ರಮುಖ ಸುಳ್ಳು ಸುದ್ದಿ.

Radioactive ink being used in new Rs 2000, Rs 500 notes | Oneindia News https://t.co/6rzoLz4E5p via @YouTube

— अभिनन्तः (@mannatabhinanth) December 12, 2016

So it's not chip but Radioactive Ink used in new 2000 notes, which is helping IT Deptt to keeping track of stashing of notes. pic.twitter.com/2W5iLRfp9x

— Nation First (@rahulgupta1976) December 11, 2016

This is bizarre! Banks are printing whatsapp forwards & passing them off as circulars. Link via @vinayaravind pic.twitter.com/pnzk8A29On

— Smita Prakash (@smitaprakash) December 24, 2016

More importantly false, re US dollar and writing making it non-legal tender. See Title 18 Section 333 of US Code https://t.co/DYwhnMfPji? https://t.co/nYO160kjuJ

— Raju Narisetti (@raju) December 24, 2016

6. ಇನ್ನೊಂದು ಸುಳ್ಳುಸುದ್ದಿ ನಿಮ್ಮನ್ನು ಬೆಚ್ಚಿ ಬೀಳಿಸುವಂಥದ್ದು. ವಾಟ್ಸಪ್ ಪ್ರೊಫೈಲ್ ಚಿತ್ರಗಳನ್ನು ಐಸಿಸ್ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ದಿಲ್ಲಿ ಪೊಲೀಸ್ ಕಮಿಶೆನರ್ ಹೆಸರು ಬಳಸಿ ವ್ಯಾಪಕವಾಗಿ ಹರಡಲಾಗಿತ್ತು.

Mr,A,K Mittal ips delhi,govt, police has sended a massege to someone on whatsapp to delete the all photo of girls due to isis hackers

— sanjay kumar (@skumar953432811) January 21, 2016

A snapshot circulating on whatsapp regarding ISIS in Delhi NCR can somebody authenticate this ? pic.twitter.com/o4InAzPKuw

— Life (@sandeepgandotra) July 6, 2016

7. ಆರ್‌ಬಿಐ 10 ರೂಪಾಯಿ ನಾಣ್ಯದ ಚಲಾವಣೆ ರದ್ದುಪಡಿಸಿದೆ ಎಂಬ ವದಂತಿ ಕೂಡಾ ಎಷ್ಟು ದಟ್ಟವಾಗಿ ಹಬ್ಬಿತ್ತು ಎಂದರೆ ಕೊನೆಗೆ ಆರ್‌ಬಿಐ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು.

8. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟ ತಕ್ಷಣ, ಅವರ ಗುಪ್ತ ಮಗಳು ಅಮೆರಿಕದಲ್ಲಿ ವಾಸವಿದ್ದಾಳೆ ಎಂಬ ಸುಳ್ಳು ಸುದ್ದಿ ಹಾಗೂ ಚಿತ್ರ ವಾಟ್ಸ್ ಅಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

9. ಭಾರತದಲ್ಲಿ 7517 ಕಿಲೋಮೀಟರ್ ಕರಾವಳಿ ಇದ್ದರೂ, 2016ರ ನವೆಂಬರ್‌ನಲ್ಲಿ ಉಪ್ಪು ಕೊರತೆ ಇದೆ ಎಂಬ ಸುದ್ದಿ ಮಧ್ಯರಾತ್ರಿ ವೇಳೆಗೆ ಹುಟ್ಟಿಕೊಂಡು ಜನರ ನಿದ್ದೆಗೆಡಿಸಿತು. ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ಹೈದ್ರಾಬಾದ್‌ನಲ್ಲಿ ಜನ ಈ ಸುದ್ದಿ ನಂಬಿ ಅಂಗಡಿಗಳಿಗೆ ಧಾವಿಸಿ ಉಪ್ಪು ಖರೀದಿಸಿಟ್ಟುಕೊಂಡರು.

#WATCH: Panic among people after rumours of salt shortage in UP, authorities say there is no shortage (visuals from Allahabad) pic.twitter.com/batUz6ylhM

— ANI UP (@ANINewsUP) November 11, 2016

10. ಬಿಬಿಸಿ ಭಾರತ ಬ್ಯೂರೊ ಮುಖ್ಯಸ್ಥ ಮಾರ್ಕ್ ಟುಲ್ಲಿ, ಮೋದಿ ಸರ್ಕಾರವನ್ನು ಬೆಂಬಲಿಸಿ, ನೆಹರೂ ಸರ್ಕಾರವನ್ನು ಆಲದ ಮರಕ್ಕೆ ಹೋಲಿಸಿದ್ದಾರೆ ಎಂಬ ಸುದ್ದಿ ಇನ್ನೊಂದು. ಜನ ಹಾಗೂ ಸಂಸ್ಥೆಗಳ ಬೆಳವಣಿಗೆಯ ಮೇಲೆ ದಟ್ಟ ನೆರಳಾಗಿ ಈ ಸರ್ಕಾರ ಇತ್ತು ಎಂದು ಅವರು ಹೇಳಿದ್ದಾರೆ ಎಂಬ ಸುದ್ದಿ ಈ ತಿಂಗಳ ಆರಂಭದಲ್ಲಿ ಹಬ್ಬಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X