ಶೇ.90ರಷ್ಟು ಹಳೆ 500, 1000ರೂ. ನೋಟುಗಳು ವಾಪಸ್ ತಲೆಕೆಳಗಾದ ಸರಕಾರದ ಲಾಭದ ಲೆಕ್ಕಾಚಾರ
ಹೊಸದಿಲ್ಲಿ, ಡಿ.28: ನೋಟು ರದ್ದತಿ ಮೂಲಕ ಕಾಳಧನಿಕರಿಗೆ ಆಘಾತ ನೀಡಲು ಮುಂದಾಗಿದ್ದ ಕೇಂದ್ರ ಸರಕಾರದ ಲೆಕ್ಕಾಚಾರ ಬುಡಮೇಲಾಗಿದ್ದು ಚಲಾವಣೆ ರದ್ದಾದ 500 ಹಾಗೂ 1000 ರೂ. ಮುಖ ಬೆಲೆಯ 15.4 ಲಕ್ಷ ಕೋಟಿ ರೂ. ನೋಟುಗಳ ಪೈಕಿ 14 ಕೋಟಿ ರೂ. ವೌಲ್ಯದ ನೋಟುಗಳು ಬ್ಯಾಂಕ್ಗಳಲ್ಲಿ ಜಮೆ ಆಗಿವೆ.
ಸರಕಾರದ ನಿರೀಕ್ಷೆಗೂ ಮೀರಿ ಅಧಿಕ ವೌಲ್ಯದ ನೋಟುಗಳು ಖಾತೆಗಳಿಗೆ ಜಮೆ ಆಗಿವೆ. ಕಾಳಧನಿಕರ ಬಳಿ ಇರುವ ಸುಮಾರು 3 ಲಕ್ಷ ಕೋಟಿ ರೂ. ಬ್ಯಾಂಕಿಗೆ ಮರಳುವ ಸಾಧ್ಯತೆ ಇಲ್ಲ ಎಂದು ಸರಕಾರ ಅಂದಾಜಿಸಿತ್ತು.
ಇದರಿಂದಾಗಿ ಆರ್ಬಿಐಯು ಸರಕಾರಕ್ಕೆ ನೀಡಲು ಉದ್ದೇಶಿಸಿದ್ದ ಲಾಭಾಂಶಕ್ಕೂ ಕತ್ತರಿ ಬಿದ್ದಂತಾಗಿದೆ. ಅಂದರೆ ಲೆಕ್ಕಕ್ಕೆ ಸಿಗದ ಹಣವನ್ನು ಬೇರೆ ಬೇರೆ ವಿಧಾನಗಳ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಸರಕಾರವು ತೆರಿಗೆ ಆದಾಯದ ಮೂಲಕ ದೊಡ್ಡ ಠೇವಣಿಗಳಿಂದ ಲಾಭ ಪಡೆಯುವ ನಿರೀಕ್ಷೆ ಇದೆ. ಕುಟುಂಬಗಳು ತಮ್ಮ ಬಳಿ ಇದ್ದ ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿ ಮಾಡಿರುವುದರಿಂದ ಸಣ್ಣ ಉಳಿತಾಯ ರೂಪದಲ್ಲೂ ಸರಕಾರಕ್ಕೆ ಆದಾಯ ಬರಲಿದೆ.
ಅಘೋಷಿತ ಕಾಳಧನವನ್ನು ಘೋಷಿಸಿದವರಿಗೆ ಶೇ.50ರಷ್ಟು ದಂಡ ವಿಧಿಸಿ, ಆ ಪೈಕಿ ಶೇ. 25ನ್ನು ಬಡವರ ಕಲ್ಯಾಣಕ್ಕೆ ವೆಚ್ಚ ಮಾಡಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಇಂತಹ ಘೋಷಣೆಯಿಂದ ಸರಕಾರಕ್ಕೆ ಅಧಿಕ ಆದಾಯ ಬರುತ್ತದೆ ಎಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ.





