ನೋಟು ಅಮಾನ್ಯದಿಂದಾದ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಮಾನವ ಸರಪಳಿ

ಕಾಸರಗೋಡು, ಡಿ.29 : ನೋಟು ಅಮಾನ್ಯಗೊಳಿಸಿದ ಹಿನ್ನಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರಕಾರದ ವಿಫಲಗೊಂಡಿರುವ ಹಾಗೂ ಸಹಕಾರಿ ವಲಯದ ನಾಶಕ್ಕೆ ನಡೆಸುತ್ತಿರುವ ಹುನ್ನಾರವನ್ನು ಪ್ರತಿಭಟಿಸಿ ಸಿಪಿಐ ಎಂ ನೇತೃತ್ವದ ಎಲ್ ಡಿ ಎಫ್ ಕಾಸರಗೋಡಿನಿಂದ ತಿರುವನಂತಪುರ ತನಕ ಮಾನವ ಸರಪಳಿ ನಡೆಸಿತು.
ಕಾಸರಗೋಡು ಹೊಸ ಬಸ್ಸು ನಿಲ್ದಾಣ ಸಮೀಪ ಸರಪಳಿ ಗೆ ಮೊದಲಿಗೆ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಕೈಜೋಡಿಸಿದರೆ, ತಿರುವನಂತಪುರದಲ್ಲಿ ಕೊನೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಜೋಡಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ೪೭ ಕಿ . ಮೀ ಸೇರಿದಂತೆ ೭೦೦ ಕಿ . ಮೀ ಉದ್ದದ ಮಾನವ ಸರಪಳಿ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿತು.
ನಿರೀಕ್ಷೆಗೂ ಮೀರಿ ಜನರು ಸರಪಳಿಗೆ ಕೈ ಜೋಡಿಸಿದ್ದರು.
ಕಾಸರಗೋಡಿನಲ್ಲಿ ಸಚಿವ ಇ. ಚಂದ್ರಶೇಖರನ್ ಅಲ್ಲದೆ ಸಂಸದ ಪಿ . ಕರುಣಾಕರನ್ , ಕೆ .ಪಿ ಸತೀಶ್ಚಂದ್ರನ್, ಸಿ . ಎಚ್ ಕುಞ೦ಬು, ಬಿ . ವಿ ರಾಜನ್ , ಎಸ್ . ಜೆ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಮುಖ ಕೇಂದ್ರಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.







