Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಿಕ್ಷಾವಾಲಾನ ಹೊಟ್ಟೆಪಾಡಿಗೆ ಕಲ್ಲು...

ರಿಕ್ಷಾವಾಲಾನ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಮಗನ ತಪ್ಪನ್ನು ಲಾಲು ಸರಿಪಡಿಸಿದ್ದು ಹೀಗೆ

ವಾರ್ತಾಭಾರತಿವಾರ್ತಾಭಾರತಿ30 Dec 2016 2:38 PM IST
share
ರಿಕ್ಷಾವಾಲಾನ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಮಗನ ತಪ್ಪನ್ನು ಲಾಲು ಸರಿಪಡಿಸಿದ್ದು ಹೀಗೆ

ಪಾಟ್ನಾ, ಡಿ.30 : ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ, ರಾಜ್ಯ ಆರೋಗ್ಯ ಸಚಿವನಾಗಿರುವ ತೇಜ್ ಪ್ರತಾಪ್ ಯಾದವ್ ಅವರಿಗೆ ವಿವಿಧ ರೀತಿಯ ವಾಹನಗಳನ್ನು ಚಲಾಯಿಸುವುದೆಂದರೆ ಇಷ್ಟ. ಅವರು ಕೆಲವೊಮ್ಮ ಆಡಿ ಕಾರನ್ನು ಓಡಿಸಿದರೆ ಕೆಲವೊಮ್ಮೆ ಕುದುರೆ ಸವಾರಿ ಮಾಡುತ್ತಾರೆ.ಅಂತೆಯೇ ಅವರು ವ್ಯಕ್ತಿಯೊಬ್ಬನ ಇ-ರಿಕ್ಷಾ ಕೂಡ ಚಲಾಯಿಸಿ ಕೊನೆಗೆ ಆತನಿಗೆ ಸಂಕಷ್ಟವೊದಗಿಸಿದ್ದರು. ವಿಷಯ ಹೀಗಿದೆ ಓದಿ.

ಒಮ್ಮೆ ಸಚಿವರ ಮನೆಗೆ ಕೆಲ ಸರಂಜಾಮುಗಳನ್ನು ತಲುಪಿಸಲು ಅಂಗಡಿ ಮಾಲಕರೊಬ್ಬರು ಅರುಣ್ ಕುಮಾರ್ ಎಂಬ ಹೆಸರಿನ ಇ-ರಿಕ್ಷಾ ಚಾಲಕನೊಬ್ಬನಿಗೆ ತಿಳಿಸಿದ್ದರು. ಅಂತೆಯೇ ರಿಕ್ಷಾ ಚಾಲಕ ಸರಂಜಾಮುಗಳನ್ನು ಸಚಿವರ ಮನೆಗೆ ತಲುಪಿಸಿದ್ದನು. ಆಗ ಅಲ್ಲಿದ್ದ ತೇಜ್ ಪ್ರತಾಪ್ ಯಾದವ್ ಆ ಇ-ರಿಕ್ಷಾವನ್ನು ತಾವು ಚಲಾಯಿಸುವ ಇಚ್ಛೆ ವ್ಯಕ್ತಪಡಿಸಿದರು. ಅಂತೆಯೇ ಅರುಣ್ ಸಚಿವರಿಗೆ ಇ-ರಿಕ್ಷಾ ಚಲಾಯಿಸುವ ವಿಧಾನ ಹೇಳಿಕೊಟ್ಟರು. ಸಚಿವರು ಇ-ರಿಕ್ಷಾ ಸ್ವಲ್ಪ ಹೊತ್ತು ಚಲಾಯಿಸಿದ ಬಳಿಕ ಅವರ ಚಾಲಕ ಪ್ರಮೋದ್ ಕೂಡ ಅದನ್ನು ಚಲಾಯಿಸಿದರು. ಅಲ್ಲೇ ಎಡವಟ್ಟಾಗಿರುವುದು. ರಿಕ್ಷಾ ಚಲಾಯಿಸುತ್ತಾ ಹೋಗಿ ವಾಹನವನ್ನು ಕಂಬವೊಂದಕ್ಕೆ ಗುದ್ದಿ ಬಿಟ್ಟರು, ಇದರಿಂದ ಅರುಣ್ ವಿಚಲಿತನಾದರೂ ರಿಕ್ಷಾ ದುರಸ್ತಿಪಡಿಸಿ ಕೊಡುವುದಾಗಿ ಸಚಿವ ಭರವಸೆ ನೀಡಿದ ಕಾರಣ ಮನೆಗೆ ಹಿಂದಿರುಗಿದ್ದರು. ಈ ಘಟನೆ ಡಿಸೆಂಬರ್ 12 ತಾರೀಕಿನಂದು ನಡೆದಿತ್ತು. ಆದರೆ ಘಟನೆ ನಡೆದು 17 ದಿನಗಳಾದರೂ ಸಚಿವರು ಇ-ರಿಕ್ಷಾ ದುರಸ್ತಿಗೊಳಿಸುವ ಗೋಜಿಗೆ ಹೋಗದೇ ಇದ್ದಾಗ ಡಿಸೆಂಬರ್ 28 ರಂದು ನೋಟು ಅಮಾನ್ಯದ ವಿರುದ್ಧ ಲಾಲು ಆಯೋಜಿಸಿದ್ದ ಧರಣಿ ಕಾರ್ಯಕ್ರಮದ ಸ್ಥಳಕ್ಕೆ ಬಂದ ಅರುಣ್ ಅಲ್ಲಿದ್ದ ಪಕ್ಷ ನಾಯಕರಲ್ಲಿ ತನ್ನ ಅಳಲನ್ನು ತೋಡಿಕೊಂಡರು. ಈ ವಿಷಯ ಲಾಲು ಕಿವಿಗೆ ಬೀಳುವಷ್ಟು ಹೊತ್ತಿಗೆ ಮಾಧ್ಯಮ ಮಂದಿಗೂ ಗೊತ್ತಾಗಿ ಬಿಟ್ಟಿತ್ತು. ನಂತರ ಲಾಲು ಅರುಣ್ ಗೆ ಫೋನ್ ಮಾಡಿ ಕರೆಸಿ ಆತನಿಗೆ ರಿಕ್ಷಾ ದುರಸ್ತಿಗೊಳಿಸಲು ರೂ 15,000 ನೀಡಿದರು.
ಈ ರಿಕ್ಷಾ ಪಡೆದುಕೊಳ್ಳಲು ಅರುಣ್‌ರೂ 1.4 ಲಕ್ಷ ವ್ಯಯಿಸಿದ್ದರೆ ಅದರಿಂದ ದಿನಕ್ಕೆ ರೂ 600ರಿಂದ 700ರ ತನಕ ಬಾಡಿಗೆ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X