Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ .. ಮೆಣಸೇ

ಓ .. ಮೆಣಸೇ

ವಾರ್ತಾಭಾರತಿವಾರ್ತಾಭಾರತಿ2 Jan 2017 12:31 AM IST
share

  *ನೋಟು ಅಮಾನ್ಯ ವಿಷಯದಲ್ಲಿ ಇಡೀ ದೇಶವೇ ಮೋದಿ ಜೊತೆಗಿದೆ

  -ರವಿಶಂಕರ್ ಪ್ರಸಾದ್,ಕೇಂದ್ರ ಸಚಿವ ]

ಹೌದು, ದೇಶದ ಕಾಳದಂಧೆಕೋರರೆಲ್ಲ ಮೋದಿಯ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ.
---------------------
   ಹಾಸ್ಯ ಸಾಹಿತ್ಯದ ಮೂಲಕ ಜನರ ವ್ಯಥೆೆಗಳನ್ನು ದೂರ ಮಾಡಿ ಆರೋಗ್ಯವನ್ನು ಕಾಪಾಡಬಹುದು

  -ರಮಾನಾಥ ರೈ,ಸಚಿವ

ರೇಷನ್ ಅಂಗಡಿಯಲ್ಲಿ ಜನರಿಗೆ ಪುಕ್ಕಟೆ ಹಾಸ್ಯ ಸಾಹಿತ್ಯ ಭಾಗ್ಯವನ್ನು ಒದಗಿಸಬಹುದಲ್ಲ?
---------------------
  ನಾನು ಪಕ್ಷಾಂತರಿಯೇ ಹೊರತು ತತ್ವಾಂತರಿಯಲ್ಲ
-ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
  ಅತ್ತ ಪಕ್ಷವೂ ಇಲ್ಲ, ಇತ್ತ ತತ್ವವೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಹೇಳುವ ಮಾತು.

---------------------
  ಕಾಳಧನದ ಜೊತೆ ಕಾಳಮನವನ್ನು ಕಿತ್ತೊಗೆಯಬೇಕು
-ನರೇಂದ್ರ ಮೋದಿ,ಪ್ರಧಾನಿ
  ಅದಕ್ಕಾಗಿ ಜನರು ಇನ್ನೆಷ್ಟು ದಿನ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕು?
---------------------
  ಸಂಸ್ಕೃತ ಭಾಷೆ ಜೀವಂತವಾಗಿರಬೇಕಾದರೆ ಸಂಸ್ಕೃತದಲ್ಲೇ ಹೆಚ್ಚು ಸಂವಾದಗಳು ನಡೆಯಬೇಕು
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ಸತ್ತ ಬಳಿಕ ಮಾತನಾಡುವ ಭಾಷೆಯಲ್ಲವೇ ಅದು?
---------------------
  ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿಗಳಿಗೆ ಅಭ್ಯರ್ಥಿಗಳೇ ಇಲ್ಲ
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಅಪ್ಪ ಕಾಂಗ್ರೆಸ್‌ನಿಂದ, ಮಗ ಬಿಜೆಪಿಯಿಂದ ಸ್ಪರ್ಧಿಸಿದರೆ ಆಯಿತು. ಯಾರಾದರೊಬ್ಬರು ಗೆಲ್ಲಬಹುದು.

---------------------
  ಮದುವೆಯಾದ ತಕ್ಷಣ ಮಕ್ಕಳು ಹುಟ್ಟುವುದಿಲ್ಲ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಕೆಲವು ಮಕ್ಕಳು ಹುಟ್ಟಿದ ಬಳಿಕ ಮದುವೆಯಾಗುವುದೂ ಇದೆ.

---------------------
  ಯೋಜನೆಗಳ ಅನುಷ್ಠಾನಕ್ಕೆ ಅಕ್ರಮ ಸಕ್ರಮದ ಹಣ ಬಳಕೆ
-ಕೆ.ಜೆ.ಜಾರ್ಜ್, ಸಚಿವ
  ಸಚಿವರು ಮಾಡಿರುವ ಅಕ್ರಮ ಹಣವನ್ನೆಲ್ಲ ಯೋಜನೆಗಳಿಗೆ ಬಳಸಲಾಗುತ್ತದೆಯೇ?
---------------------
  ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಾಳ್ಮೆ ಕಳೆದುಕೊಂಡಿದ್ದೇ ನೋಡಿಲ್ಲ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಅವರ ತಾಳ್ಮೆಯನ್ನು ಬಹಳಷ್ಟು ಬಾರಿ ನೀವು ಪರೀಕ್ಷಿಸಿದ್ದೀರಿ ಎಂದಾಯಿತು.

---------------------
  ಶ್ರೀನಿವಾಸ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ
-ಪ್ರತಾಪ್ ಸಿಂಹ, ಸಂಸದ
ಅವರು ಬಿಎಸ್ಪಿಯಿಂದ ಪಕ್ಷಾಂತರ ಮಾಡಿದ್ದಾರೆ ಎಂಬ ತಿಳುವಳಿಕೆಯಲ್ಲಿದ್ದೀರಿ ನೀವು.

---------------------
  ನೋಟು ರದ್ದತಿಯ ಫಲ ಮುಂದೆ ಗೊತ್ತಾಗಲಿದೆ.
- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
  ಅಲ್ಲಿಯವರೆಗೆ ಬದುಕಿದ್ದಿದ್ದರೆ ತಾನೆ.

---------------------
  ಗಾಂಧೀಜಿ, ಬುದ್ಧ, ಬಸವರು ಯಾರ ಸ್ವತ್ತೂ ಅಲ್ಲ
- ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ
ಅವರನ್ನು ಸೊತ್ತು ಎಂದು ತಿಳಿಕೊಂಡದ್ದೇ ಮೊದಲ ತಪ್ಪು.

---------------------
  ರಾಹುಲ್ ಈಗ ಹೀರೋ ಆಗಿದ್ದಾರೆ, ಪ್ರಧಾನಿ ಜೀರೋ ಆಗಿದ್ದಾರೆ
- ಜನಾರ್ದನ ಪೂಜಾರಿ, ಕೇಂದ್ರ ಮಾಜಿ ಸಚಿವ
  ಸದ್ಯಕ್ಕೆ ನೀವು ಇವರೆಲ್ಲರ ನಡುವೆ ಜೋಕರ್ ಆಗುತ್ತಿದ್ದೀರಿ.
---------------------
  ಸಂಸತ್ತನ್ನು ಎದುರಿಸಲು ಹೆದರಿ ಸರಕಾರ ಹಿಂದಿನ ಬಾಗಿಲಿನಿಂದ ಕಾನೂನು ತರುತ್ತಿದೆ
-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
  ಹಿಂದಿನ ಬಾಗಿಲನ್ನು ತೆರೆದಿಟ್ಟದ್ದು ನಿಮ್ಮ ತಪ್ಪಲ್ಲವೇ?
---------------------
  ದುಶ್ಯಾಸನ ಇರುವುದೇ ಸೀರೆ ಎಳೆಯಲು
-ಕೆ.ಆರ್.ರಮೇಶ್ ಕುಮಾರ್,ಸಚಿವ
 ಕಾಂಗ್ರೆಸ್‌ನ ಸೀರೆ ಎಳೆಯಲು ಪಕ್ಷದೊಳಗಿರುವ ತಮ್ಮಂಥವರೇ ಸಾಕು.

---------------------
  ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಜೈಲಿಗೆ ಹೋಗಲೂ ಸಿದ್ಧ
-ವಾಟಾಳ್ ನಾಗರಾಜ್, ಹೋರಾಟಗಾರ
ಜೊತೆಗೆ ನಿಮ್ಮ ಕತ್ತೆಯನ್ನೂ ಕರೆದುಕೊಂಡು ಹೋಗಿ.

---------------------
  ನೋಟು ಅಮಾನ್ಯ ಮಾಡುವ ಮೂಲಕ ಮೋದಿ ಆರ್ಥಿಕ ವ್ಯಭಿಚಾರ ನಡೆಸುತ್ತಿದ್ದಾರೆ.
- ವೀರಪ್ಪ ಮೊಯ್ಲಿ,ಸಂಸದ
ಅದರ ಸಿಡಿ ಬಿಡುಗಡೆ ಮಾಡಿದ್ದಿದ್ದರೆ ಟಿವಿಯವರು ಆಸಕ್ತಿಯಿಂದ ಪ್ರಸಾರ ಮಾಡುತ್ತಿದ್ದರು.

---------------------
  ಗೋವು ನಮ್ಮ ತಾಯಿ
-ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
  ಎಂತಹ ಮಗನನ್ನು ಹೆತ್ತೆ ಎಂದು ಗೋವು ಅವಮಾನದಿಂದ ತಲೆತಗ್ಗಿಸಿದೆ.

---------------------
  ಪಾಪ ನಡೆಯುತ್ತಿದೆ ಎಂದು ಗೊತ್ತಿದ್ದೂ ಸುಮ್ಮನಿದ್ದರೆ ನಾವೂ ಪಾಪ ಮಾಡಿದಂತಾಗುತ್ತಿದೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಭಕ್ತರಿಗೆ ಅದು ‘ಪಾಪು’ ಮಾಡಿದಂತೆ ಎಂದು ಕೇಳಿಸಿ, ಬೆಚ್ಚಿ ಬಿದ್ದಿದ್ದಾರೆ.
---------------------
  ಪ್ರಪಂಚವನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ
-ಡಾ.ಡಿ.ವೀರೇಂದ್ರ ಹೆಗ್ಗಡೆ,ಧರ್ಮಾಧಿಕಾರಿ, ಧರ್ಮಸ್ಥಳ
 ಹೌದು. ಹಿರಿಯರು ಮಾಡುತ್ತಿರುವ ಅನಾಹುತಗಳನ್ನು ನೋಡುತ್ತಿದ್ದರೆ ಮಕ್ಕಳ ಜವಾಬ್ದಾರಿ ಹೆಚ್ಚುತ್ತಿದೆ.

---------------------
  ಅಖಿಲೇಶ್ ಯಾದವ್ ಪಕ್ಷವನ್ನೇ ನಾಶ ಮಾಡಲು ಹೊರಟಿದ್ದಾರೆ
- ಮುಲಾಯಂ ಸಿಂಗ್ ಯಾದವ್, ಎಸ್ಪಿ ಅಧ್ಯಕ್ಷ
  ತಾವೊಬ್ಬರೇ ನಾಶ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದಿರಾ?
---------------------
  ನಾನು ಮತ್ತು ಜನಾರ್ದನ ಪೂಜಾರಿ ಅಶೋಕವನದ ಸೀತೆ ಇದ್ದಂತೆ
-ಎಚ್.ವಿಶ್ವನಾಥ್, ಮಾಜಿ ಸಂಸದ
ಸಿದ್ದರಾಮಯ್ಯ ಅಗ್ನಿಪರೀಕ್ಷೆಗೆ ಕುಂಡ ಸಿದ್ಧ ಮಾಡುತ್ತಿದ್ದಾರೆ.

---------------------
  ಸಿದ್ದರಾಮಯ್ಯ ಸರಕಾರ ಬದುಕಿದೆಯೇ ಸತ್ತಿದೆಯೇ ಗೊತ್ತಾಗುತ್ತಿಲ್ಲ
-ಆರ್.ಅಶೋಕ್, ಮಾಜಿ ಡಿಸಿಎಂ
ಯಾಕೆಂದರೆ ವಿರೋಧ ಪಕ್ಷ ಸತ್ತಿದೆ. ಅದಕ್ಕೆ.

---------------------
  ನನ್ನ ನಿರ್ಧಾರವು ಬಂದು ಹೋಗುವ ಮಳೆಯಲ್ಲ
- ನರೇಂದ್ರ ಮೋದಿ, ಪ್ರಧಾನಿ
 ಅದು ದೇಶವನ್ನು ಸರ್ವನಾಶ ಮಾಡುವ ಸುನಾಮಿ ಎನ್ನುವುದು ಜನರಿಗೆ ಅರ್ಥವಾಗಹತ್ತಿದೆ.

---------------------
  ದೇಶವನ್ನು ಪ್ರೀತಿಸಿ, ಆದರೆ ಗದ್ದಲದ ದೇಶ ಪ್ರೇಮ ಬೇಡ

-ಪ್ರಣವ್ ಮುಖರ್ಜಿ, ರಾಷ್ಟ್ರಪತಿ

ಗದ್ದಲ ಮಾಡದೆ ದೇಶವನ್ನು ಪ್ರೀತಿಸುವುದು ಹೇಗೆ ಎಂದು ಕೇಳುತ್ತಿದ್ದಾರೆ ಸಂಘಪರಿವಾರ ಕಾರ್ಯಕರ್ತರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X