Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕ್ಯಾಶ್ ಲೆಸ್ ಆಗಲು ಹೊರಟ ದೇಶದಲ್ಲಿ ಹೀಗೂ...

ಕ್ಯಾಶ್ ಲೆಸ್ ಆಗಲು ಹೊರಟ ದೇಶದಲ್ಲಿ ಹೀಗೂ ಒಂದು ಊರು !

►500, 1000 ದ ನೋಟನ್ನೇ ನೋಡಿಲ್ಲ ►ಇವರ ಪ್ರಕಾರ ದೇಶದಲ್ಲಿ ಈಗಲೂ ಸೋನಿಯಾ ಸರ್ಕಾರ

ವಾರ್ತಾಭಾರತಿವಾರ್ತಾಭಾರತಿ2 Jan 2017 3:00 PM IST
share
ಕ್ಯಾಶ್ ಲೆಸ್ ಆಗಲು ಹೊರಟ ದೇಶದಲ್ಲಿ ಹೀಗೂ ಒಂದು ಊರು !

ಒಂದು ಕಡೆ ನೋಟು ಅಮಾನ್ಯದ ಬಳಿಕ ಇಡೀ ದೇಶ ಸರತಿಯಲ್ಲಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಎಂದೂ ಸಾವಿರ ರೂಪಾಯಿ ನೋಟನ್ನೇ ನೋಡದವರು ಮತ್ತು ಅದಕ್ಕಾಗಿ ಸರತಿ ನಿಲ್ಲದ ಇಂತಹ ಕೆಲವರೂ ಇದ್ದಾರೆ! ಇವರಿಗೆ ನೋಟು ಅಮಾನ್ಯದಂಥ ಒಂದು ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ವಿಷಯವೂ ಗೊತ್ತಿಲ್ಲ. ಇದು ಮಹಾರಾಷ್ಟ್ರದ ಒಂದು ಗ್ರಾಮದ ಕತೆ.

ರೋಶಮಲ್ ಎನ್ನುವ ಈ ಗ್ರಾಮ ಪುಣೆಯಿಂದ 500 ಕಿಮೀ ದೂರದಲ್ಲಿದೆ.  ಇಲ್ಲಿ ನೆಲೆಸಿರುವ ಆದಿವಾಸಿಗಳಿಗೆ ರೂ. 500 ಮತ್ತು 1000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವುದೇ ತಿಳಿದಿಲ್ಲ. ರೋಶಮಲ್ ಗ್ರಾಮದಲ್ಲಿ ನೆಲೆಸಿರುವ ಜನರ ಪ್ರಕಾರ ದೇಶದಲ್ಲಿ ಈಗ ಇಂದಿರಾ ಗಾಂಧಿ ಮಗಳು ಸೋನಿಯಾ ಸರ್ಕಾರವಿದೆ! (ಸೋನಿಯಾ ಗಾಂಧಿ ಇಂದಿರಾರ ಸೊಸೆ ಎನ್ನುವುದೂ ಅವರಿಗೆ ತಿಳಿದಿಲ್ಲ.)

ಈ ಗ್ರಾಮದ ಜನರ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇರುವ ಪ್ರಶ್ನೆಯೇ ಬರುವುದಿಲ್ಲ. ಗ್ರಾಮದಲ್ಲಿ ರಸ್ತೆ, ವಿದ್ಯುತ್, ವಸತಿ ಅಥವಾ ನೀರಿನಂತಹ ಮೂಲ ಸೌಕರ್ಯಗಳೂ ಇಲ್ಲ. ಗ್ರಾಮಸ್ಥರಿಗೆ ನೋಟು ಅಮಾನ್ಯದ ಸುದ್ದಿಯೂ ಗೊತ್ತಿಲ್ಲ.

ಇವರ ಬಳಿ ದೊಡ್ಡ ಮೌಲ್ಯದ ನೋಟೇ ಬರದ ಕಾರಣ ಸಮಸ್ಯೆಯೂ ಆಗಿಲ್ಲ. ಆದರೆ ಇವರು ಜೋಳ ಮತ್ತು ಮೆಕ್ಕೆಜೋಳವನ್ನು ಮಂಡಿಗೆ ಹಾಕಲು ಹೋಗುವುದಿಲ್ಲ. ಏಕೆಂದರೆ ಕಿಲೋಗೆ ರೂ. 13- 15ರಂತೆ ಮಾರಾಟವಾಗುತ್ತಿದ್ದ ಬೆಳೆಗಳು ಈಗ ರೂ. 10ಕ್ಕೆ ಮಾರಾಟವಾಗುತ್ತಿರುವ ಕಾರಣ ಎಲ್ಲವನ್ನೂ ದಾಸ್ತಾನಿಟ್ಟು ಕಾಯುತ್ತಿದ್ದಾರೆ.

ಸುದ್ದಿಗಳ ಪ್ರಕಾರ ಗ್ರಾಮದಲ್ಲಿ ರಸ್ತೆಗಳು ಅಥವಾ ಬಸ್ಸೂ ಇಲ್ಲ. ಮಂಡಿಗೆ ಇವರು ನಡೆದೇ ಹೋಗುತ್ತಾರೆ. ಅಥವಾ ಅತೀ ವಿರಳವಾಗಿ ಓಡಾಡುವ ಜೀಪ್ ಹಿಡಿಯಬೇಕು. ಸಮೀಪದಲ್ಲಿ ಪೆಟ್ರೋಲ್ ಪಂಪ್ ಕೂಡ ಇಲ್ಲ. ಆದರೆ ಅಲ್ಲಲ್ಲಿ ಬಾಟಲಿಗಳಲ್ಲಿ ಸೀಮೆ ಎಣ್ಣೆ ಮಾರುವವರು ಕಾಣ ಸಿಗುತ್ತಾರೆ.

ನೋಟು ಅಮಾನ್ಯವಾದ ನಂತರ ಬ್ಯಾಂಕಿನಿಂದ 2000 ರುಪಾಯಿಗಳನ್ನು ಮಾತ್ರ ತೆಗೆಯಬಹುದು ಎಂದು ಹೇಳಿದಾಗ, ಅದು ಜೀವನೋಪಾಯಕ್ಕೆ ಸಾಕಾಗುತ್ತದೆ ಎನ್ನುವ ಉತ್ತರ ಬರುತ್ತದೆ. “ನಿಮಗೆ ಇದಕ್ಕಿಂತ ಹೆಚ್ಚು ಹಣದ ಆವಶ್ಯಕತೆ ಏಕಿದೆ? ನಾವು ತಿಂಗಳಿಗೆ 1500 ರೂಪಾಯಿಯಲ್ಲಿ ಕಾಲ ಕಳೆಯುತ್ತೇವೆ” ಎಂದು ಉತ್ತರಿಸುತ್ತಾರೆ!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X