Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ಪಾಸ್‌ಪೋರ್ಟ್ ನಿಯಮಾವಳಿ

ಹೊಸ ಪಾಸ್‌ಪೋರ್ಟ್ ನಿಯಮಾವಳಿ

ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಾಹಿತಿಗಳು

ಗುಂಜನ್ ಉಪ್ರೇತಿಗುಂಜನ್ ಉಪ್ರೇತಿ2 Jan 2017 5:32 PM IST
share
ಹೊಸ ಪಾಸ್‌ಪೋರ್ಟ್ ನಿಯಮಾವಳಿ

ಮೇಡಮ್, ನೀವು ಪುತ್ರಿಯ ಅರ್ಜಿ ನಮೂನೆಯಲ್ಲಿ ತಂದೆಯ ಹೆಸರು ನಮೂದಿಸಬೇಕಿಲ್ಲ

ನಾವು ಜತೆಗಿಲ್ಲ. ನಾನು ಒಬ್ಬಂಟಿ ತಾಯಿ

ಓಹ್ ! ಆತನ ಹೆಸರು ನಮೂದಿಸಿ ಮತ್ತು ಅವರ ಅನುಮತಿ ಪಡೆಯಿರಿ

ಇದು ಕೇವಲ ಹೆಸರು. ತಂದೆಯ ಹೆಸರು ಮತ್ತು ಅನುಮತಿ ಇಲ್ಲದೇ ನಾವು ಮುಂದುವರಿಯುವಂತಿಲ್ಲ.

ಕೆಲ ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿರುವ ಪಾಸ್‌ಪೋರ್ಟ್ ಕಚೇರಿಯಲ್ಲಿ ಕೇಳಿ ಬರುತ್ತಿದ್ದ ಸಂಭಾಷಣೆಯ ತುಣುಕುಗಳಿವು. ಆದರೆ ಇದೀಗ ಆ ಜಮಾನ ಮುಗಿದ ಅಧ್ಯಾಯ. ಇಂದಿನ ಸಾಮಾಜಿಕ ಅಗತ್ಯತೆಗಳಿಗೆ ಅನುಗುಣವಾಗಿ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಹೊಸ ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯ ನಿಯಮಾವಳಿಗಳನ್ನು ಘೋಷಿಸಿದ್ದಾರೆ.

ಅನಾಥ ಮಕ್ಕಳು, ಒಂಟಿ ತಾಯಂದಿರು, ಸರ್ಕಾರಿ ನೌಕರರು ಹಾಗೂ ಸಾಧುಗಳು ಸೇರಿದಂತೆ ವಿವಿಧ ವರ್ಗದವರಿಗೆ ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ.

ಪಾಸ್‌ಪೋರ್ಟ್‌ನಲ್ಲಿ ಹೊಸ ನಿಯಮಾವಳಿಯ ಪ್ರಮುಖ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.

1. ಜನ್ಮದಿನಾಂಕದ ಪುರಾವೆ

ಹಿಂದೆ

1989ರ ಜನವರಿ 26 ಅಥವಾ ಆ ಬಳಿಕ ಜನಿಸಿದ ಎಲ್ಲ ಅರ್ಜಿದಾರರೂ, ಜನ್ಮದಿನಾಂಕಕ್ಕೆ ಪುರಾವೆಯಾಗಿ ಜನ್ಮ ದೃಢೀಕರಣ ಪತ್ರ ಸಲ್ಲಿಸುವುದು ಕಡ್ಡಾಯ.

ಈಗ

ಹೊಸ ನಿಯಮಾವಳಿಯ ಪ್ರಕಾರ, ಪಾಸ್‌ಪೋರ್ಟ್ ಪ್ರಾಧಿಕಾರವು ನಮೂದಿಸಿದ ಎಂಟು ವಿಭಿನ್ನ ದಾಖಲೆಗಳ ಪೈಕಿ ಯಾವುದನ್ನಾದರೂ ಜನ್ಮದಿನಾಂಕದ ದೃಢೀಕರಣಕ್ಕಾಗಿ ಸಲ್ಲಿಸಬಹುದಾಗಿದೆ. ಈ ದಾಖಲೆಗಳೆಂದರೆ:

►ಜನನ ಮತ್ತು ಮರಣ ನೋಂದಣಿ ಕಾಯ್ದೆ - 1969ರ ಅನ್ವಯ ಯಾವುದೇ ಮಹಾನಗರ ಪಾಲಿಕೆ ಅಥವಾ ಪ್ರಾಧಿಕಾರಗಳ ಜನನ ಮತ್ತು ಮರಣ ನೋಂದಣಾಧಿಕಾರಿಯವರು ಭಾರತದಲ್ಲಿ ಹುಟ್ಟಿದ ಮಗುವಿಗೆ ನೀಡುವ ಜನ್ಮ ಪ್ರಮಾಣಪತ್ರ.

► ಕಡೆಯದಾಗಿ ಹಾಜರಾದ ಶಾಲೆ/ ಆಂಗೀಕೃತ ಶಿಕ್ಷಣ ಮಂಡಳಿ ನೀಡುವ, ಅರ್ಜಿದಾರನ ಜನ್ಮದಿನಾಂಕವನ್ನು ಒಳಗೊಂಡ ಟ್ರಾನ್ಸ್‌ಫರ್/ ಸ್ಕೂಲ್ ಲೀವಿಂಗ್/ ಮೆಟ್ರಿಕ್ ಪ್ರಮಾಣಪತ್ರ.

► ಆದಾಯ ತೆರಿಗೆ ಇಲಾಖೆ ವಿತರಿಸುವ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಪಿಎಎನ್ ಕಾರ್ಡ್.

►ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಆಧಾರ್ ಕಾರ್ಡ್/ ಇ- ಆಧಾರ್.

►ಅರ್ಜಿದಾರ ಸರ್ಕಾರಿ ನೌಕರನಾಗಿದ್ದಲ್ಲಿ, ಸೇವಾ ದಾಖಲೆಯ ಪ್ರತಿ ಅಥವಾ ನಿವೃತ್ತ ನೌಕರನಾಗಿದ್ದರೆ, ಅವರ ಜನ್ಮದಿನಾಂಕದ ವಿವರ ಒಳಗೊಂಡ ಪಿಂಚಣಿ ಪಾವತಿ ಆದೇಶ. ಇದನ್ನು ಆಯಾ ಸಚಿವಾಲಯದ ಅಥವಾ ಇಲಾಖೆಯ ಆಡಳಿತದ ಹೊಣೆ ಹೊಂದಿರುವ ಅಧಿಕಾರಿಗಳು ದೃಢೀಕರಿಸಿರಬೇಕು.

► ಆಯಾ ರಾಜ್ಯ ಸರ್ಕಾರಗಳ ಸಾರಿಗೆ ಇಲಾಖೆ ನೀಡಿರುವ ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಚಾಲನಾ ಪರವಾನಿಗೆ.

►ಭಾರತದ ಚುನಾವಣಾ ಆಯೋಗ ವಿತರಿಸಿದ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಚುನಾವಣಾ ಫೋಟೊ ಗುರುತಿನ ಚೀಟಿ (ಇಪಿಐಸಿ).

►ಸರ್ಕಾರಿ ಜೀವವಿಮಾ ನಿಗಮ ಅಥವಾ ಕಂಪನಿಗಳು ಬಿಡುಗಡೆ ಮಾಡಿರುವ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ವಿಮಾ ಪಾಲಿಸಿ ಬಾಂಡ್.

2. ಒಬ್ಬ ಪೋಷಕನ/ಳ ಅಥವಾ ಕಾನೂನುಬದ್ಧ ಪಾಲಕನ/ಳ ಹೆಸರು

ಅರ್ಜಿದಾರ ತಾಯಿ/ ಮಗು ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವುದೂ ಸೇರಿದಂತೆ ಪಾಸ್‌ಪೋರ್ಟ್ ಅರ್ಜಿಗಳಿಗೆ ಸಂಬಂಧಿಸಿದ ಮತ್ತು ದತ್ತು ಪಡೆದ, ಏಕ ಪೋಷಕರನ್ನು ಹೊಂದಿದ ಮಕ್ಕಳು ಅರ್ಜಿ ಸಲ್ಲಿಸುವಾಗ ಎದುರಾಗುವ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಲಾಗಿತ್ತು.

ಈ ಸಮಿತಿ ನೀಡಿದ ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಂಗೀಕರಿಸಿದೆ.

ಹಿಂದೆ

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಇಬ್ಬರೂ ಪೋಷಕರ ಹೆಸರನ್ನು ನಮೂದಿಸುವುದು ಕಡ್ಡಾಯವಾಗಿತ್ತು.

ಈಗ

►ಇದೀಗ ಆನ್‌ಲೈನ್ ಪಾಸ್‌ಪೋರ್ಟ್ ಅರ್ಜಿನಮೂನೆಗಳನ್ನು ಸಲ್ಲಿಸುವಾಗ, ಅರ್ಜಿದಾರ ತಂದೆ ಅಥವಾ ತಾಯಿ ಅಥವಾ ಕಾನೂನುಬದ್ಧ ಫೋಷಕರ ಪೈಕಿ ಯಾರ ಹೆಸರನ್ನಾದರೂ ನಮೂದಿಸಲು ಅವಕಾಶವಿದೆ. ಅಂದರೆ ಇಬ್ಬರು ಪೋಷಕರ ಬದಲಾಗಿ ಏಕ ಪೋಷಕರ ಹೆಸರು ನಮೂದಿಸಿದರೆ ಸಾಕು. ಇದರಿಂದಾಗಿ ಏಕಪೋಷಕರು ತಮ್ಮ ಮಕ್ಕಳ ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

►ಪಾಸ್‌ಪೋರ್ಟ್ ಅರ್ಜಿ ನಮೂನೆಯಲ್ಲಿ ಅರ್ಜಿದಾರರು ವಿಚ್ಛೇದಿತರಾಗಿದ್ದಲ್ಲಿ ಅಥವಾ ಪ್ರತ್ಯೇಕವಾಗಿದ್ದಲ್ಲಿ ತಮ್ಮ ಪತಿ/ ಪತ್ನಿಯ ಹೆಸರನ್ನು ನಮೂದಿಸುವ ಅಗತ್ಯವಿಲ್ಲ. ಇಂಥ ಅರ್ಜಿದಾರರು ತಮ್ಮ ವಿಚ್ಛೇದನ ಆದೇಶವನ್ನೂ ಸಲ್ಲಿಸುವ ಅಗತ್ಯವಿಲ್ಲ.

3. ಅನುಬಂಧ ಸಂಖ್ಯೆ ಕಡಿತ

►ಪಾಸ್‌ಪೋರ್ಟ್ ನಿಯಮಾವಳಿ- 1980ರಲ್ಲಿ ನಿರ್ದಿಷ್ಟಪಡಿಸಲಾದ ಒಟ್ಟು ಅನುಬಂಧಗಳ ಸಂಖ್ಯೆಯನ್ನು 15ರಿಂದ 9ಕ್ಕೆ ಇಳಿಸಲಾಗಿದೆ. ಅನುಬಂಧ ಎ,ಸಿ,ಡಿ,ಇ,ಜೆ ಹಾಗೂ ಕೆ ಗಳನ್ನು ಕಿತ್ತುಹಾಕಲಾಗಿದ್ದು, ಕೆಲ ಅನುಬಂಧಗಳನ್ನು ವಿಲೀನಗೊಳಿಸಲಾಗಿದೆ.

►ಅರ್ಜಿದಾರರು ಸಲ್ಲಿಸಬೇಕಿರುವ ಎಲ್ಲ ಅನುಬಂಧಗಳು ಖಾಲಿ ಹಾಳೆಯಲ್ಲಿ ಸ್ವಯಂ ದೃಢೀಕರಣ ಪತ್ರದ ರೂಪದಲ್ಲಿದ್ದರೆ ಸಾಕು. ಇದಕ್ಕೆ ಅಧಿಕಾರಿಯ ದೃಢೀಕರಣ, ನೋಟರಿ ಮುಂದೆ ದೃಢೀಕರಿಸಿಕೊಳ್ಳುವುದು, ಆಡಳಿತಾತ್ಮಕ ನ್ಯಾಯಾಧೀಶರ ಮುಂದೆ ಅಥವಾ ಪ್ರಥಮ ದರ್ಜೆ ನ್ಯಾಯಿಕ ಅಧಿಕಾರಿ ಮುಂದೆ ದೃಢೀಕರಣ ಮಾಡಿಕೊಳ್ಳುವ ಅಗತ್ಯವಿಲ್ಲ.

4. ವಿವಾಹಿತ ಅರ್ಜಿದಾರರು ಅನುಬಂಧ ಕೆ ಅನ್ನು ಅಥವಾ ಯಾವುದೇ ವಿವಾಹ ದೃಢೀಕರಣ ಪತ್ರ ಸಲ್ಲಿಸುವ ಅಗತ್ಯವಿಲ್ಲ.

5. ಅನಾಥ ಮಕ್ಕಳಿಗೆ ಯಾವುದೇ ಜನ್ಮದಿನಾಂಕ ದೃಢೀಕರಣ ಪತ್ರ ಇಲ್ಲದಿದ್ದರೆ ಅಥವಾ ಮೆಟ್ರಿಕ್ ಸರ್ಟಿಫಿಕೆಟ್ ಅಥವಾ ನ್ಯಾಯಾಲಯದ ಘೋಷಣಾ ಆದೇಶ ಇಲ್ಲದಿದ್ದರೆ ಅಂಥ ಅರ್ಜಿದಾರರು, ಅನಾಥಾಲಯಗಳ ಮುಖ್ಯಸ್ಥರು/ ಮಕ್ಕಳ ಪಾಲನಾ ಕೇಂದ್ರದ ಮುಖ್ಯಸ್ಥರಿಂದ ಅಧಿಕೃತ ಲೆಟರ್‌ಹೆಡ್‌ನಲ್ಲಿ ನೀಡುವ ಜನ್ಮದಿನಾಂಕ ದೃಢೀಕರಣ ಪತ್ರ ಸಲ್ಲಿಸಬಹುದಾಗಿದೆ.

6. ವಿವಾಹೇತರ ಸಂಬಂಧಗಳಿಂದ ಹುಟ್ಟಿದ ಮಕ್ಕಳಾಗಿದ್ದಲ್ಲಿ, ಅಂಥ ಅರ್ಜಿದಾರರು ಪಾಸ್‌ಪೋರ್ಟ್ ಅರ್ಜಿಯ ಜತೆಗೆ ಅನುಬಂಧ ಜಿ ಮಾತ್ರ ಸಲ್ಲಿಸಬೇಕಾಗುತ್ತದೆ.

7. ದೇಶೀಯವಾಗಿ ದತ್ತು ಪಡೆದ ಮಕ್ಕಳಾಗಿದ್ದಲ್ಲಿ, ಅಂಥವರಿಗೆ ಪಾಸ್‌ಪೋರ್ಟ್ ನೀಡಲು, ದತ್ತುಸ್ವೀಕಾರದ ನೋಂದಾಯಿತ ಕರಾರುಪತ್ರವನ್ನು ಸಲ್ಲಿಸುವುದು ಬೇಕಾಗಿಲ್ಲ. ಈ ಸಂಬಂಧ ಯಾವುದೇ ಕರಾರುಪತ್ರ ಇಲ್ಲದಿದ್ದರೂ, ಪಾಸ್‌ಪೋರ್ಟ್ ಅರ್ಜಿದಾರ ಖಾಲಿ ಹಾಳೆಯಲ್ಲಿ ಸ್ವಯಂ ದೃಢೀಕರಣ ನೀಡಿ, ದತ್ತುಸ್ವೀಕಾರವನ್ನು ಖಾತ್ರಿಪಡಿಸಬಹುದಾಗಿದೆ.

8. ಗುರುತು ಪ್ರಮಾಣಪತ್ರವನ್ನು (ಅನುಬಂಧ ಬಿ)/ ನಿರಾಕ್ಷೇಪಣಾ ಪತ್ರ (ಅನುಬಂಧ ಎಂ)ವನ್ನು ಸಂಬಂಧಿತ ಉದ್ಯೋಗದಾತರಿಂದ ಪಡೆಯಲು ಸಾಧ್ಯವಾಗದ ಸರ್ಕಾರಿ ನೌಕರರು, ತುರ್ತಾಗಿ ಪಾಸ್‌ಪೋರ್ಟ್ ಪಡೆಯಬೇಕಿದ್ದ ಸಂದರ್ಭದಲ್ಲಿ, ಅನುಬಂಧ ಎನ್ ನಮೂನೆಯ ಸ್ವಯಂ ದೃಢೀಕರಣ ಪತ್ರ ಸಲ್ಲಿಸಬಹುದಾಗಿದೆ. ಆದರೆ ಅಂಥ ಸಂದರ್ಭದಲ್ಲಿ, ಪಾಸ್‌ಪೋರ್ಟ್ ವಿತರಣಾ ಪ್ರಾಧಿಕಾರಕ್ಕೆ, ಸಾಮಾನ್ಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಮಾಹಿತಿ ನೀಡಬೇಕಾಗುತ್ತದೆ.

9. ಸಾಧುಗಳು ಹಾಗೂ ಸನ್ಯಾಸಿಗಳು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ, ತಮ್ಮ ಮೂಲ ಪೋಷಕರ ಹೆಸರಿನ ಬದಲಾಗಿ, ತಮ್ಮ ಆಧ್ಯಾತ್ಮಿಕ ಗುರುವಿನ ಹೆಸರನ್ನು ನಮೂದಿಸಲು ಅವಕಾಶವಿದೆ. ಆದರೆ ಇದಕ್ಕೆ, ಭಾರತದ ಚುನಾವಣಾ ಆಯೋಗ ವಿತರಿಸಿರುವ ಫೋಟೊ ಗುರುತಿನ ಚೀಟಿ, ಪಾನ್‌ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳ ಪೈಕಿ ಯಾವುದಾದರೂ ಒಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಇಂಥ ಗುರುತಿನ ಪತ್ರದಲ್ಲಿ ಪೋಷಕರ ಹೆಸರಿನ ಎದುರು, ಆಧ್ಯಾತ್ಮಿಕ ಗುರುವಿನ ಹೆಸರು ನಮೂದಿಸಿರಬೇಕು.

ಕೃಪೆ: tripoto.com

share
ಗುಂಜನ್ ಉಪ್ರೇತಿ
ಗುಂಜನ್ ಉಪ್ರೇತಿ
Next Story
X