Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇಶ ಅಳುವ ಪ್ರಧಾನಿ ಮೋದಿಯ ಸೋದರರು...

ದೇಶ ಅಳುವ ಪ್ರಧಾನಿ ಮೋದಿಯ ಸೋದರರು ಜೀವನೋಪಾಯಕ್ಕೆ ಏನೇನು ಮಾಡುತ್ತಿದ್ದಾರೆ ?

ಇಲ್ಲಿದೆ ಈವರೆಗೆ ಬಹಿರಂಗವಾಗದ ಮಾಹಿತಿಗಳು

ವಾರ್ತಾಭಾರತಿವಾರ್ತಾಭಾರತಿ3 Jan 2017 9:53 PM IST
share
ದೇಶ ಅಳುವ ಪ್ರಧಾನಿ ಮೋದಿಯ ಸೋದರರು ಜೀವನೋಪಾಯಕ್ಕೆ ಏನೇನು ಮಾಡುತ್ತಿದ್ದಾರೆ ?

ಹೊಸದಿಲ್ಲಿ, ಜ. 3 : ಭಾರತದಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ ಯಾರು ಎಂದರೆ ಕಣ್ಣು ಮುಚ್ಚಿ ಪ್ರಧಾನಿ ನರೇಂದ್ರ ಮೋದಿ ಎಂದು ಚಿಕ್ಕ ಮಕ್ಕಳು ಬೇಕಾದರೂ ಹೇಳುತ್ತಾರೆ. ಸರ್ಕಾರದ ವಿರುದ್ಧ ಪರ - ವಿರುದ್ಧ ಅಭಿಪ್ರಾಯಗಳೇನೇ ಇದ್ದರೂ ಸುದ್ದಿಯಲ್ಲಿರುವುದರಲ್ಲಿ ಅವರೀಗಲೂ ದೇಶದ ನಂಬರ್ ಒನ್ ನಾಯಕ. ಆದರೆ ಅವರ ಸೋದರರ ಬಗ್ಗೆ ನಿಮಗೆಷ್ಟು ಗೊತ್ತು ಎಂದು ಕೇಳಿದರೆ ಅವರಿಗೆ ಸೋದರರು ಎಷ್ಟು ಎಂಬ ಉತ್ತರವೇ ಹೆಚ್ಚಿನವರಿಂದ ಬರುವ ಸಾಧ್ಯತೆ ಇದೆ. ಏಕೆಂದರೆ ತಮ್ಮ ಸೋದರ ದೇಶವನ್ನು ಅಳುತ್ತಿದ್ದರೂ ಅವರೆಲ್ಲರೂ ಗುಜರಾತಿನಲ್ಲಿ ಯಾವುದೇ ಪ್ರಚಾರ ಬಯಸದೆ ಜನಸಾಮಾನ್ಯರಂತೆ ಬದುಕುತ್ತಿದ್ದಾರೆ. 

ಇಂಡಿಯಾ ಟುಡೇ ಈ ಬಾರಿಯ ತನ್ನ ಸಂಚಿಕೆಯಲ್ಲಿ ಪ್ರಧಾನಿ ಸೋದರರ ಪರಿಚಯ ಪ್ರಕಟಿಸಿದೆ. ಇದರಲ್ಲಿ ದೇಶದ ಜನರು ಈವರೆಗೆ ತಿಳಿದೇ ಇಲ್ಲದ ಹಲವು ಮಹತ್ವದ ಮಾಹಿತಿಗಳು ಇವೆ. ಪ್ರಧಾನಿ ಮೋದಿ ತನ್ನ ತಂದೆಯ ಆರು ಮಕ್ಕಳಲ್ಲಿ ಮೂರನೆಯವರು. 

ಸೋಮ್ ಭಾಯ್ ಮೋದಿ : ಗುಜರಾತಿನಲ್ಲಿ ವೃದ್ಧಾಶ್ರಮವೊಂದನ್ನು ನಡೆಸುತ್ತಿರುವ ಪ್ರಧಾನಿಯ ಸೋದರ ಸೋಮ್ ಭಾಯ್ ಬಗ್ಗೆ ಮೊದಲು ಜನರಿಗೆ ಗೊತ್ತಾಗಿದ್ದು 2015ರಲ್ಲಿ.  ಕಾರ್ಯಕ್ರಮವೊಂದಕ್ಕೆ ಬಂದಾಗ ಅವರು ಹೆಸರು ನೋಡಿದ ಬಳಿಕ ಈ ವಿಷಯ ಬಹಿರಂಗವಾಯಿತು. ಆದರೆ ಸೋಮ್ ಭಾಯ್ ಪ್ರಕಾರ " ಅವರು ನರೇಂದ್ರ ಮೋದಿ ಅವರ ಸೋದರ, ಪ್ರಧಾನ ಮಂತ್ರಿಯ ಸೋದರ ಅಲ್ಲ. ಪ್ರಧಾನಿ ಪಾಲಿಗೆ ದೇಶದ 125 ಕೋಟಿ ಜನರಂತೆ ಅವರೂ ಒಬ್ಬರು. 

ಕಳೆದ ಎರಡೂವರೆ ವರ್ಷಗಳಲ್ಲಿ ಅವರು ಪ್ರಧಾನಿಯನ್ನು ಭೇಟಿಯಾಗಿಲ್ಲ.  ಫೋನ್ ನಲ್ಲಿ ಮಾತ್ರ  ಮಾತನಾಡಿದ್ದಾರೆ. ಅವರ ಚಿಕ್ಕ ತಮ್ಮ ಪಂಕಜ್ ಗುಜರಾತ್ ವಾರ್ತಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು ಅವರ ಜೊತೆಯೇ ತಾಯಿ ಹೀರಾಬೆನ್ ಇರುವುದರಿಂದ ಅವರನ್ನು ಸೋಮ್ ಭಾಯ್ ಆಗಾಗ ಭೇಟಿಯಾಗುತ್ತಾರೆ.
 
ಅಮೃತ್ ಭಾಯ್ ಮೋದಿ : ಖಾಸಗಿ ಕಂಪೆನಿಯೊಂದರಲ್ಲಿ ಫಿಟ್ಟರ್ ಆಗಿ ಉದ್ಯೋಗದಲ್ಲಿದ್ದು 2005 ರಲ್ಲಿ ನಿವೃತ್ತರಾದ ಅಮೃತ್ ಭಾಯ್ ಪ್ರಧಾನಿ ಮೋದಿಯ ಇನ್ನೊಬ್ಬ ಸೋದರ. ನಿವೃತ್ತರಾಗುವಾಗ ಅವರ ಸಂಬಳ 10 ಸಾವಿರ. ಸದ್ಯ ತಮ್ಮ ಪುತ್ರ ಮಧ್ಯಮ ವರ್ಗದ ವ್ಯಾಪಾರಿಯಾಗಿರುವ ಸಂಜಯ್ (47), ಅವರ ಪತ್ನಿ ಹಾಗು ಇಬ್ಬರು ಮಕ್ಕಳೊಂದಿಗೆ ಅಹ್ಮದಾಬಾದ್ ನ ಗಾಡ್ ಲೋಡಿಯ ಎಂಬಲ್ಲಿ ನಾಲ್ಕು ಕೊಠಡಿಯ ಮನೆಯೊಂದರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದಾರೆ. 

ಸಂಜಯ್ ರ ಮಕ್ಕಳು ನೀರವ್ ಹಾಗು ನಿರಾಲಿ ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು. 2009 ರಲ್ಲಿ ಕಾರು ಖರೀದಿಸಿರುವ ಸಂಜಯ್ ಪ್ರಕಾರ ಅವರು ಈವರೆಗೆ ವಿಮಾನದಲ್ಲಿ ಪ್ರಯಾಣಿಸಿಲ್ಲ. 2003 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಹಾಗು 2014 ರ ಮೇ 16 ರಂದು ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಾಗ ಮಾತ್ರ ಅವರು ಮೋದಿಯನ್ನು ಅವರು ಭೇಟಿ ಮಾಡಿದ್ದಾರೆ. 

ಪ್ರಹ್ಲಾದ್ ಮೋದಿ (64) : ಇವರು ಪ್ರಧಾನಿ ಮೋದಿಗಿಂತ ಚಿಕ್ಕವರು ಹಾಗು ಗುಜರಾತ್ ನಲ್ಲಿ ನ್ಯಾಯಬೆಲೆ ಅಂಗಡಿ ಮಾಲಕರ ಸಂಘದ ಅಧ್ಯಕ್ಷರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆ ತರಲು ಒಂದು ಅಭಿಯಾನ ಪ್ರಾರಂಭಿಸಿದ್ದರು. ಇದನ್ನು ಸೋದರ ಪ್ರಹ್ಲಾದ್ ವಿರೋಧಿಸಿದ್ದರು. 

ಇವರಲ್ಲದೆ  ಪ್ರಧಾನಿ ಮೋದಿಯ ಇತರ ಸೋದರರು, ಸೋದರರ ಮಕ್ಕಳು ಕೂಡ ಸಾಮಾನ್ಯರಂತೆ ಜೀವಿಸುತ್ತಿದ್ದಾರೆ. 
ಪ್ರಧಾನಿಯ ಚಿಕ್ಕಪ್ಪ ನರಸಿಂಹ ದಾಸ್ ಅವರ ಪುತ್ರ  ಅಶೋಕ್ ಭಾಯ್ ಅವರು ವಡ್ನಗರದ ಧಿಕಾಂತ ಬಝಾರ್ ನಲ್ಲಿ ಚಿಕ್ಕ ಅಂಗಡಿಯೊಂದನ್ನು ಇತ್ತು ಗಾಳಿಪಟ , ಪಟಾಕಿ ಹಾಗು ತಿಂಡಿಗಳನ್ನು ಮಾರುತ್ತಾರೆ. ಅಶೋಕ್ ಅವರ ಭರತ್ ಭಾಯ್ ವಡ್ನಗರದಿಂದ 60 ಕಿಮೀ ದೂರದ ಪಾಲನ್ ಪುರದ ಸಮೀಪ ಲಾಲ್ ವಾಡಾ ಎಂಬಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಪತ್ನಿ ರಮೀಳಾ ಬೆನ್ ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾರೆ. 

ಭರತ್ ಭಾಯ್ ಅವರಿಗಿಂತ ಚಿಕ್ಕವರಾದ ಚಂದ್ರಕಾಂತ್ ಭಾಯ್ ಅಹ್ಮದಾಬಾದ್ ನ ಒಂದು ದತ್ತಿ ಗೋಶಾಲೆಯಲ್ಲಿ ಸಹಾಯಕರಾಗಿದ್ದಾರೆ. ಇವರ ಇನ್ನೊಬ್ಬ ಸೋದರ ಅರವಿಂದ್ ಭಾಯ್ ಗುಜರಿ ವ್ಯಾಪಾರಿಯಾಗಿದ್ದಾರೆ. ಇವರು ವಡ್ನಗರದಲ್ಲಿ ಮನೆ ಮನೆ ಸುತ್ತಿ ಹಳೆ ಟಿನ್ ಹಾಗು ರದ್ದಿ ಸಂಗ್ರಹಿಸುತ್ತಾರೆ. ಇವರೆಲ್ಲರ ಹಿರಿಯ ಸೋದರ ಭೋಗಿ ಭಾಯ್ ವಡ್ನಗರದಲ್ಲಿ ಒಂದು ದಿನಸಿ ಅಂಗಡಿ ನಡೆಸುತ್ತಿದ್ದಾರೆ.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X