Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸಂಗೀತ ಮಾಂತ್ರಿಕನಿಗೆ 50: ದಿಲೀಪ್...

ಸಂಗೀತ ಮಾಂತ್ರಿಕನಿಗೆ 50: ದಿಲೀಪ್ ಕುಮಾರ್, ಎ.ಆರ್.ರಹ್ಮಾನ್ ಆಗಿದ್ದು ಏಕೆ? ಹೇಗೆ?

ವಾರ್ತಾಭಾರತಿವಾರ್ತಾಭಾರತಿ6 Jan 2017 11:32 AM IST
share
ಸಂಗೀತ ಮಾಂತ್ರಿಕನಿಗೆ 50:  ದಿಲೀಪ್ ಕುಮಾರ್,  ಎ.ಆರ್.ರಹ್ಮಾನ್ ಆಗಿದ್ದು ಏಕೆ? ಹೇಗೆ?

ಚೆನ್ನೈ, ಜ.6: ಎ.ಆರ್.ರಹ್ಮಾನ್- ಭಾರತದ ಸಂಗೀತ ಲೋಕ ಕಂಡ ಒಂದು ಮಹಾನ್ ಪ್ರತಿಭೆ. ಅವರನ್ನು ಸಂಗೀತ ಲೋಕದ ಮಾಂತ್ರಿಕನೆಂದೂ ವರ್ಣಿಸುತ್ತಾರೆ. ಈ ಅಪೂರ್ವ ಕಲಾವಿದನಿಗೆ 50 ವರ್ಷಗಳು ತುಂಬಿವೆ. ಅಂದ ಹಾಗೆ ಈ ಎ.ಆರ್.ರಹ್ಮಾನ್(ಅಲ್ಲಾಹ್ರಖಾ ಖಾನ್) ಹಿಂದೆ ಎ.ಎಸ್.ದಿಲೀಪ್ ಕುಮಾರ್ ಆಗಿದ್ದರು. ಅವರು ಎ.ಆರ್.ರಹ್ಮಾನ್ ಆಗಿದ್ದು ಏಕೆ ? ಹೇಗೆ ? ಎಂಬುದು ಒಂದು ಕುತೂಹಲಕಾರಿ ಕಥೆ. ಇದನ್ನು ಸ್ವತಹ ಎ.ಆರ್.ರಹ್ಮಾನ್ ಅವರು ಬರೆದಿರುವ ಓಂ ಬುಕ್ಸ್ ಇಂಟರ್ ನ್ಯಾಷನಲ್ ಪ್ರಕಟಿಸಿರುವ ಅವರ ಕೃತಿ ‘ಎ.ಆರ್.ರಹ್ಮಾನ್ ದಿ ಸ್ಪಿರಿಟ್ ಆಫ್ ಮ್ಯೂಸಿಕ್’ ನಲ್ಲಿ ವಿವರಿಸಿದ್ದಾರೆ.

ರಹ್ಮಾನ್ ಅವರ ತಾಯಿ ಹಿಂದೂ ಪದ್ಧತಿಗಳನ್ನು ಪಾಲಿಸುವವರಾಗಿದ್ದರಲ್ಲದೆ, ಆಧ್ಯಾತ್ಮಿಕತೆಯಲ್ಲೂ ಒಲವು ಹೊಂದಿದವರಾಗಿದ್ದರು. ಅವರ ಹಬೀಬುಲ್ಲಾ ರಸ್ತೆಯ ಮನೆಯ ಗೋಡೆಗಳಲ್ಲಿ ಹಿಂದೂ ದೇವರ ಚಿತ್ರಗಳಿದ್ದವು. ಮೇರಿ ಮಾತೆ ಏಸುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿರುವ ಚಿತ್ರವೂ ಅಲ್ಲಿತ್ತಲ್ಲದೆ ಇಸ್ಲಾಂನ ಪವಿತ್ರ ಕ್ಷೇತ್ರಗಳಾದ ಮಕ್ಕಾ, ಮದೀನಾದ ಪಟವೂ ಇತ್ತು.

ಅವರು ಚಿಕ್ಕವರಿರುವಾಗಲೇ ಅವರ ತಂದೆ ತೀರಿಕೊಂಡಾಗ ಆ ಕುಟುಂಬಕ್ಕೆ ಆರ್ಥಿಕ ಸಂಕಷ್ಟಗಳು ತಲೆದೋರಿದ್ದವು. ನಾಲ್ಕು ಮಕ್ಕಳಿದ್ದ ಆ ಕುಟುಂಬವನ್ನು ಸಲಹುವುದು ಅವರ ತಾಯಿಗೆ ಬಹಳ ಕಷ್ಟಕರವಾಗಿತ್ತು. ಆಗ ಅವರು ಸೂಫಿ ಸಂತ ಕರೀಮುಲ್ಲಾ ಶಾಹ್ ಖಾದ್ರಿ ಅವರನ್ನು ಭೇಟಿಯಾಗಿದ್ದರಲ್ಲದೆ, ಅವರ ಆಶೀರ್ವಾದ ಹಾಗೂ ಅವರು ನೀಡಿದ ಧೈರ್ಯದಿಂದ ಸಾಕಷ್ಟು ನೆಮ್ಮದಿ ಪಡೆದಿದ್ದರು. ರಹ್ಮಾನ್ ಅವರ ತಂದೆ ತೀರಿ ಹತ್ತು ವರ್ಷಗಳಾದ ನಂತರ 1986ರಲ್ಲಿ ಮತ್ತೆ ಆ ಸಂತರನ್ನು ಅವರ ತಾಯಿ ಭೇಟಿಯಾಗಿದ್ದರು. ಆಗ ಅನಾರೋಗ್ಯದಿಂದ ಇದ್ದ ಅವರನ್ನು ರಹ್ಮಾನ್ ಅವರ ತಾಯಿ ಉಪಚರಿಸಿದ್ದರು. ಸಂತ ಕರೀಮುಲ್ಲಾ ಕೂಡ ರಹ್ಮಾನ್ ತಾಯಿಯನ್ನು ತಮ್ಮ ಸ್ವಂತ ಮಗಳೆಂದೇ ತಿಳಿದಿದ್ದರು. ಆಗ ದಿಲೀಪ್ ಕುಮಾರ್ ಗೆ 19ರ ವಯಸ್ಸು. ಆಗ ಅವರು ಸಂಗೀತಗಾರನಾಗಿ ಜಿಂಗಲ್ಸ್ ಸಂಯೋಜಿಸುತ್ತಿದ್ದರು. 1987ರಲ್ಲಿ ಅವರ ಕುಟುಂಬ ಕೊಡಂಬಕ್ಕಂಗೆ ಸ್ಥಳಾಂತರಗೊಂಡಿತು. ಅಲ್ಲಿಗೆ ಹೋದ ನಂತರ ಸೂಫಿ ಪಂಥ ತಮ್ಮನ್ನು ಹಾಗೂ ತಮ್ಮ ತಾಯಿಯನ್ನು ಮೇಲೆತ್ತಲು ಸಹಾಯ ಮಾಡಿತು ಎಂಬುದನ್ನು ಅರಿತು ಅವರು ಸೂಫಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ಆಗ ಅವರ ಕುಟುಂಬ ಸ್ವತಂತ್ರವಾಗಿದ್ದು, ಯಾರ ಮೇಲೂ ಅವಲಂಬಿತವಾಗಿಲ್ಲದೇ ಇದ್ದುದರಿಂದ, ಮೇಲಾಗಿ ಅವರು ಸಂಗೀತಗಾರರಾಗಿದ್ದುದರಿಂದ ಯಾರು ಕೂಡ ಅವರ ಮತಾಂತರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

‘‘ನಿಜ ಹೇಳಬೇಕೆಂದರೆ ನನಗೆ ನನ್ನ ಆಗಿನ ಹೆಸರೇ ಇಷ್ಟವಾಗಿರಲಿಲ್ಲ. ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅದೇಕೋ ನನ್ನ ಇಮೇಜ್ ಗೂ ಆ ಹೆಸರು ಹೊಂದಿ ಬರುತ್ತಿರಲಿಲ್ಲ’’ ಎಂದು ರಹ್ಮಾನ್ ಹೇಳುತ್ತಾರೆ.

ಒಮ್ಮೆ ಅವರ ಸಹೋದರಿಗೆ ವೈವಾಹಿಕ ಸಂಬಂಧಕ್ಕಾಗಿ ಅವರ ಜಾತಕವನ್ನು ಜ್ಯೋತಿಷಿಗಳೊಬ್ಬರಿಗೆ ತೋರಿಸಲು ಹೋದ ಸಮಯದಲ್ಲಿ ದಿಲೀಪ್ ಕುಮಾರ್ ಗೆತನ್ನ ಹೆಸರನ್ನು ಬದಲಾಯಿಸಬೇಕೆಂಬ ತುಡಿತವಿತ್ತು. ಆ ಜ್ಯೋತಿಷಿ ಅವರತ್ತ ನೋಡಿ ‘‘ಈ ಹುಡುಗ ಆಸಕ್ತಿದಾಯಕ ವ್ಯಕ್ತಿ’’ ಎಂದಿದ್ದರು.

ಅವರು ‘ಅಬ್ದುಲ್ ರಹ್ಮಾನ್’ ಹಾಗೂ ‘ಅಬ್ದುಲ್ ರಹೀಂ’ ಹೆಸರುಗಳನ್ನು ಸೂಚಿಸಿದರು. ಆದರೆ ಆಗಿನ ದಿಲೀಪ್ ಕುಮಾರ್ ಗೆ ಅದು ಇಷ್ಟವಾಗಿರಲಿಲ್ಲ. ಆದರೆ ‘ರಹ್ಮಾನ್’ ಎನ್ನುವುದು ಇಷ್ಟವಾಗಿತ್ತು. ‘‘ಹಿಂದೂ ಜ್ಯೋತಿಷಿಯೊಬ್ಬರು ನನಗೆ ಹೆಸರು ಸೂಚಿಸಿದವರು’’ ಎಂದು ರಹ್ಮಾನ್ ನೆನಪಿಸಿಕೊಳ್ಳುತ್ತಾರೆ.
 ಕೊನೆಗೆ ಅವರ ತಾಯಿಯ ಇಚ್ಛೆಯಂತೆ ‘ಅಲ್ಲಾಹ್ ರಖಾ’ ಸೇರಿಸಿ ಅವರು ಎ.ಆರ್.ರಹ್ಮಾನ್ ಆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X