Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ...

ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ ವಿಶ್ವದ ಗಮನ ಸೆಳೆದ ಅದ್ಭುತ ನಟ

ಓಂ ಪುರಿಯ ಮರೆಯಲಾಗದ 10 ಚಿತ್ರಗಳು

ವಾರ್ತಾಭಾರತಿವಾರ್ತಾಭಾರತಿ6 Jan 2017 2:58 PM IST
share
ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ ವಿಶ್ವದ ಗಮನ ಸೆಳೆದ ಅದ್ಭುತ ನಟ

ಮುಂಬೈ,ಜ.6 : ಮುಖದಲ್ಲಿ ಒಂದೊಮ್ಮೆ ಉಂಟಾದ ಸಿಡುಬು ರೋಗದ ಕಲೆಗಳು. ಆ ವ್ಯಕ್ತಿಯನ್ನೊಮ್ಮೆ ನೋಡಿದರೆ ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ ಅವರು ಎಲ್ಲಿ ಸಲ್ಲಬಹುದೆಂಬ ಯೋಚನೆ ವರ್ಷಗಳ ಹಿಂದೆ ಹಲವರಿಗೆ ಬಂದಿರದೇ ಇರದು.ಆದರೆ  ಆ ಚಾಕೊಲೇಟ್ ಹೀರೋಗಳ ನಡುವೆಯೂ ತನ್ನ ಅದ್ಭುತ ಪ್ರತಿಭೆಯಿಂದ ಗಮನ ಸೆಳೆದ ನಟನೆಂದರೆ ಅವರೇ ಓಂ ಪುರಿ. 1950ರ ಅಕ್ಟೋಬರ್ 18ರಂದು ಜನಿಸಿದ ಓಂಪುರಿ ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ಜಬ್ಬಾರ್ ಪಟೇಲ್ ಅವರ ನಿರ್ದೇಶನದ ಮರಾಠಿ ಚಿತ್ರ ಘಸೀರಾಂ ಕೋತ್ವಾಲ್ ನಲ್ಲಿಕಾಣಿಸಿಕೊಂಡಿದ್ದರು. ನಂತರ ಅವರು ಹಲವಾರು ಹಿಂದಿ ಚಿತ್ರಗಳಲ್ಲಿ ತಮ್ಮ ಅಭಿನಯದಿಂದಲೇ ಜನಾನುರಾಗಿಯಾದರು.

ಅವರ ಹತ್ತು ಮರೆಯಲಾರದ ಚಿತ್ರಗಳ ಬಗ್ಗೆ ಇಲ್ಲಿ ಓದಿ.

ಆಕ್ರೋಶ್ (1980) :

ಗೋವಿಂದ್ ನಿಹಲಾನಿ ನಿರ್ದೇಶನದ ಪ್ರಥಮ ಚಿತ್ರವು ಓಂ ಪುರಿಯವರಿಗೆ ಹಿಂದಿ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಗುರುತು ನೀಡಿತು. ವಿಜಯ್ ತೆಂಡುಲ್ಕರ್ ಅವರ ನಾಟಕದ ಕಥೆಯಾಧರಿತ ಈ ಚಿತ್ರದಲ್ಲಿ ಓಂ ಪುರಿ ಜತೆ ನಾಸಿರುದ್ಧೀನ್ ಶಾ ಹಾಗೂ ಅಮರೀಶ್ ಪುರಿ ಮುಖ್ಯ ಭೂಮಿಕೆಯಲ್ಲಿದ್ದರು. ಚಿತ್ರದಲ್ಲಿ ಓಂ ಪುರಿ ಲಹನ್ಯ ಭೀಖು ಪಾತ್ರಧಾರಿಯಾಗಿದ್ದರು.

ಅರ್ಧ ಸತ್ಯ್ (1983) :

ಇದು ಕೂಡ ಗೋವಿಂದ್ ನಿಹಲಾನಿ ಚಿತ್ರವಾಗಿದ್ದುಇದರಲ್ಲಿ ಸಬ್ ಇನಸ್ಪೆಕ್ಟರ್ ಅನಂತ್ ವೆಲನ್ಕರ್ ಆಗಿ ಅಭಿನಯಿಸಿದ್ದ ಓಂ ಪುರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು.

ಜಾನೆ ಭಿ ದೋ ಯಾರೋ (1983) :

ಕುಂದನ್ ಶಾ ನಿರ್ದೇಶನದಈ ಹಾಸ್ಯಭರಿತ ಚಿತ್ರವು ಭಾರತದ ರಾಜಕಾರಣ, ಭ್ರಷ್ಟಾಚಾರ, ಮಾಧ್ಯಮ ಮುಂತಾದ ಕ್ಷೇತ್ರಗಳ ಬಗ್ಗೆತನ್ನ ವ್ಯಂಗ್ಯಭರಿತ ಕಥಾ ಹಂದರದಿಂದ ಗಮನ ಸೆಳೆದಿತ್ತು.

ದ್ರೋಹ್ ಕಾಲ್ (1984) :

ಇದು ಕೂಡ ಗೋವಿಂದ್ ನಿಹಲಾನಿ ಚಿತ್ರವಾಗಿದ್ದು ಉಗ್ರವಾದದ ಕಥೆಯನ್ನು ಹೊಂದಿತ್ತಲ್ಲದೆ ಇದರಲ್ಲಿ ಓಂ ಪುರಿ ಡಿಸಿಪಿ ಅಭಯ್ ಸಿಂಹ್ ಪಾತ್ರಧಾರಿಯಾಗಿ ಅಭಿನಯಿಸಿದ್ದರು.

ಚಾಚಿ 420 ( 1997) :

ಕಮಲಹಾಸನ್ ಅವರ ಅಭಿನಯದ ಈ ಖ್ಯಾತ ಚಿತ್ರದಲ್ಲಿ ಓಂ ಪುರಿ ಮತ್ತೊಮ್ಮೆ ತಾವು ಹಾಸ್ಯ ಭರಿತ ಪಾತ್ರಗಳಿಗೂ ಸೈ ಎಂದು ಎನಿಸಿಕೊಂಡಿದ್ದಾರೆ.

ಆಸ್ಥಾ (1997) :

ಬಸು ಭಟ್ಟಾಚಾರ್ಯ ಅವರ ಈ ಚಿತ್ರ ವಿವಾಹೇತರ ಸಂಬಂಧದ ಕಥೆ ಹೊಂದಿರುವ ಬೋಲ್ಡ್ ಸಿನೆಮಾ ಎಂದು ಗುರುತಿಸಿಕೊಂಡಿತ್ತು. ಚಿತ್ರದಲ್ಲಿ ಓಂ ಪುರಿ, ರೇಖಾ ಮತ್ತು ನವೀನ್ ನಿಶ್ಚಲ್ ಅಭಿನಯಿಸಿದ್ದರು.ಚಿತ್ರದಲ್ಲಿ ಓಂ ಪುರಿ ರೇಖಾ ಪತಿಯಾಗಿ ಅಭಿನಯಿಸಿದ್ದರು.

ಈಸ್ಟ್ ಈಸ್ ಈಸ್ಟ್ (1999) :

ಡೆಮಿಯನ್ ಓಂಡೊನೆಂಟ್ ಅವರ ಚಿತ್ರದಲ್ಲಿ ಬ್ರಿಟನ್ನಿನಲ್ಲಿ ನೆಲೆಸಿರುವ ಪಾಕಿಸ್ತಾನಿ ನಾಗರಿಕನ ಪಾತ್ರ ನಿರ್ವಹಿಸಿದ್ದದರು.

ಹೇರಾ ಫೇರಿ (2000) :

ಪ್ರಿಯದರ್ಶನ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಓಂ ಪುರಿ ಮತ್ತೆ ಹಾಸ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಮಕ್ಬೂಲ್ (2003) :

ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಇರ್ಫಾನ್ ಖಾನ್ ಹಾಗೂ ಟಬು ಇದ್ದರೂ ಓಂ ಪುರಿ ಹಾಗೂ ನಾಸಿರುದ್ಧೀನ್ ಶಾ ಕೂಡ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದಾರೆ.

ದಿ ಜಂಗಲ್ ಬುಕ್ (2016) :

ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲೊಂದಾಗಿದ್ದ ಜಂಗಲ್ ಬುಕ್ ಇದರ ಅನಿಮೇಶನ್ ಚಿತ್ರದಲ್ಲಿ

ಓಂ ಪುರಿಯವರು ಮೋಗ್ಲಿಯ ಅತ್ಯಂತ ವಿಶ್ವಸನೀಯ ಸಹವರ್ತಿಗೆ ಕಂಠದಾನ ಮಾಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X