ಉಜ್ವಲ ಯೋಜನೆಯ ಲಾಭ?
ಮಾನ್ಯರೆ,
ಸಮಾಜದ ಆರ್ಥಿಕವಾಗಿ ತಳಮಟ್ಟದಲ್ಲಿರುವ 1.5ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ನೀಡುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರ ಯೋಜನೆ ವಿಫಲವಾಗಿದೆ.
ಬಿಪಿಎಲ್ ಕುಟುಂಬದ ಮಹಿಳೆಯನ್ನು ಎಸ್ಇಸಿಸಿಯಲ್ಲಿ ಗುರುತಿಸಿ, ಅಡುಗೆ ಅನಿಲ ಸಂಪರ್ಕ ನೀಡುವುದಾಗಿ ಕೇಂದ್ರ ಸರಕಾರ ಆಸೆ ಹುಟ್ಟಿಸಿತ್ತು. ಆದರೆ ಈ ಯೋಜನೆಯಲ್ಲಿ ಕೇವಲ 5ಕೆಜಿ ಅಡುಗೆ ಅನಿಲ ಕೊಡುತ್ತಿದ್ದು ಇದು ಬಡವರ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದೆ.
ಅಲ್ಲದೆ ಇದನ್ನು ಪಡೆಯಲು ರೂ. 1,000ಅನ್ನು ಕೂಡಾ ಪಾವತಿಸ ಬೇಕಾಗಿದೆ. ಇದರಿಂದ ಬಡ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಅನುಕೂಲ ವಾಗದು. ಆದ್ದರಿಂದ ಈ ಯೋಜನೆ ಜನಪರವೆನಿಸದು. ಇದು ಮೋದಿ ಸರಕಾರ ಜನರಿಗೆ ಮಾಡಿದ ವಿಶ್ವಾಸದ್ರೋಹ.
Next Story





