Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಆಮಿರ್ ಅನ್ನೇ ಹಿಂದಿಕ್ಕಿದ ಆಮಿರ್!

ಆಮಿರ್ ಅನ್ನೇ ಹಿಂದಿಕ್ಕಿದ ಆಮಿರ್!

ಬಾಲಿವುಡ್‌ನ ‘ಬಾಕ್ಸ್ ಆಫೀಸ್ ದಂಗಲ್ ’ನಲ್ಲಿ ನಂ.1

ವಾರ್ತಾಭಾರತಿವಾರ್ತಾಭಾರತಿ8 Jan 2017 5:19 PM IST
share
ಆಮಿರ್ ಅನ್ನೇ ಹಿಂದಿಕ್ಕಿದ ಆಮಿರ್!

ಆಮಿರ್ ಖಾನ್ ಅವರ ‘ದಂಗಲ್ ’ಚಿತ್ರ ಈವರೆಗಿನ ಅತ್ಯಂತ ಹೆಚ್ಚು ಹಣ ಗಳಿಸಿದ ಹಿಂದಿ ಚಿತ್ರ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡಿದೆ. ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುವುದರಲ್ಲಿ ಆಮಿರ್ ಖಾನ್ ಅವರದೇ ‘ಪಿಕೆ ’ ಮತ್ತು ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿಜಾನ್ ’ ಚಿತ್ರಗಳನ್ನು ದಂಗಲ್ ಹಿಂದಿಕ್ಕಿದೆ. ಅದು ಈವರೆಗೆ 342.18 ಕೋ.ರೂ.ಗಳಿಸಿದ್ದು, ಇದು ಬಾಲಿವುಡ್‌ನಲ್ಲಿ ಹಿಂದಿಚಿತ್ರವೊಂದರ ಸಾರ್ವಕಾಲಿಕ ದಾಖಲೆಯಾಗಿದೆ.

‘ದಂಗಲ್’ನ ದೈನಂದಿನ ಗಳಿಕೆಯ ವಿವರ ನೋಡಿ:

ಮೊದಲ ವಾರ

ದಿನ 1-ಡಿ.23: 29.78 ಕೋ.ರೂ.

ದಿನ 2-ಡಿ.24: 34.82 ಕೋ.ರೂ.

ದಿನ 3-ಡಿ.25: 42.35 ಕೋ.ರೂ.

ದಿನ 4-ಡಿ.26: 25.48 ಕೋ.ರೂ.

ದಿನ 5-ಡಿ.27: 23.07 ಕೋ.ರೂ.

ದಿನ 6-ಡಿ.28: 21.20 ಕೋ.ರೂ.

ದಿನ 7-ಡಿ.29: 20.29 ಕೋ.ರೂ.

ಎರಡನೇ ವಾರ

ದಿನ 8-ಡಿ.30: 18.59 ಕೋ.ರೂ.

ದಿನ 9-ಡಿ.31: 23.07 ಕೋ.ರೂ.

ದಿನ 10-ಜ.1: 31.27 ಕೋ.ರೂ.

ದಿನ 11-ಜ.2: 13.45 ಕೋ.ರೂ.

ದಿನ 12-ಜ.3: 12 ಕೋ.ರೂ.

ದಿನ 13-ಜ.4: 9.23 ಕೋ.ರೂ.

ದಿನ 14-ಜ.5: 9.12 ಕೋ.ರೂ.

ದಿನ 15-ಜ.6: 6.66 ಕೋ.ರೂ.

ದಿನ 16-ಜ.7: 10.80 ಕೋ.ರೂ

ದಿನ 17 ಜ.8: 11 ಕೋ.ರೂ.

17 ದಿನಗಳಲ್ಲಿ ಒಟ್ಟು 342.18 ಕೋ.ರೂ.ಗಳಿಕೆ

ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ತನ್ನ ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ತರಬೇತುಗೊಳಿಸಿದ ಹರ್ಯಾಣದ ಕುಸ್ತಿಪಟು ಮಹಾವೀರ ಸಿಂಗ್ ಫೋಗಟ್ ಅವರ ಜೀವನದ ಸತ್ಯಕಥೆಯನ್ನು ಆಧರಿಸಿದೆ.

ಮಹಾವೀರ ಆಗಿ ಆಮಿರ್,ಗೀತಾ ಫೋಗಟ್ ಆಗಿ ಝೈರಾ ವಾಸಿಂ/ಫಾತಿಮಾ ಸನಾ ಶೇಖ್ ಮತ್ತು ಬಬಿತಾ ಕುಮಾರಿ ಆಗಿ ಸುಹಾನಿ ಭಟ್ನಾಗರ್/ಸಾನ್ಯಾ ಮಲ್ಹೋತ್ರಾ ಅವರ ಅಭಿನಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

 ಹೊಸವರ್ಷದಲ್ಲಿ ‘ದಂಗಲ್’ ಮತ್ತು ಸಲ್ಮಾನ್ ಅವರ ‘ಸುಲ್ತಾನ್’ ನಡುವೆ ಭಾರೀ ಸ್ಪರ್ಧೆಯನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಪಂಡಿತರು ನಿರೀಕ್ಷಿಸಿದ್ದರು. ಇವೆರಡೂ ಚಿತ್ರಗಳ ವಿಷಯ ಕುಸ್ತಿಯೇ ಆಗಿದ್ದರಿಂದ ಸಹಜವಾಗಿಯೇ ಯಾವ ಚಿತ್ರವು ಮೇಲುಗೈ ಸಾಧಿಸಬಹುದು ಎಂಬ ಕುತೂಹಲವಿತ್ತು. ಆದರೆ ‘ಸುಲ್ತಾನ್ ’ಕೇವಲ 306 ಕೋ.ರೂ.ಗಳಿಸುವಲ್ಲಿ ಸುಸ್ತಾಗಿದ್ದು, ‘ದಂಗಲ್ ’ ಅದನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಬಹುಶಃ ಆಮಿರ್‌ಗೆ ಬಾಲಿವುಡ್‌ನ ನೂತನ ಸುಲ್ತಾನ್ ಎಂದು ಪಟ್ಟಾಭಿಷೇಕ ಮಾಡುವ ಸಮಯವೀಗ ಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X