ಕನ್ನಡ ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ಚಾಲನೆ

ಬ್ರಹ್ಮಾವರ, ಜ.10: ಬ್ರಹ್ಮಾವರದಲ್ಲಿ ಜ.13ರಿಂದ 15ರವರೆಗೆ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಾಭಾವಿಯಾಗಿ ಕನ್ನಡ ಭುವ ನೇಶ್ವರೀ ತಾಯಿಯನ್ನು ಹೊತ್ತ ರಥಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಬ್ರಹ್ಮಾವರ ಮಹಾಲಿಂಗೇಶ್ವರ ದೇವಳದಲ್ಲಿ ನಡೆದ ಸಮಾರಂಭದಲ್ಲಿ ಈ ರಥಯಾತ್ರೆಯನ್ನು ದೇವಳದ ಅರ್ಚಕ ಕೃಷ್ಣ ಭಟ್ ಉದ್ಘಾಟಿಸಿದರು.
ಈ ರಥಯಾತ್ರೆಯು ಉಡುಪಿ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಸಂಚ ರಿಸಿ ಕನ್ನಡದ ಕಂಪನ್ನು ಪಸರಿಸಲಿದೆ.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಶೋಕ್ ಭಟ್ ಚಾಂತಾರು, ಕಸಾಪ ಬ್ರಹ್ಮಾವರ ಹೋಬಳಿ ಅಧ್ಯಕ್ಷ ಮೋಹನ್ ಉಡುಪ, ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ನಾರಾಯಣ ಮಡಿ, ಪ್ರಶಾಂತ್ ಶೆಟ್ಟಿ, ಎನ್.ಎಸ್.ಅಡಿಗ, ಗಿರೀಶ್ ಅಡಿಗ ಹೇರೂರು, ಪ್ರತೀಶ್ ಕುಮಾರ್, ಶಂಕರನಾರಾಯಣ ಭಟ್, ಮಾಧವ ಖಾರ್ವಿ, ಬಲರಾಮ ಕಲ್ಕೂರ, ಕೃಷ್ಣಮೂರ್ತಿ ಭಟ್, ಆನಂದ ದಾಮ್ಲೆ, ವಿಠಲದಾಸ ಉಪಾಧ್ಯಾಯ, ವಿಠಲರಾಯ ಪೈ, ಮಹಾಬಲೇಶ್ವರ ಅಡಿಗ, ಗಾಯತ್ರಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.
Next Story





