Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘‘ಅಮಾನವೀಯ ನೋಟು ರದ್ದತಿಯಿಂದ ಭಾರತೀಯರ...

‘‘ಅಮಾನವೀಯ ನೋಟು ರದ್ದತಿಯಿಂದ ಭಾರತೀಯರ ಬದುಕು ದುಸ್ತರ’’

ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ

ವಾರ್ತಾಭಾರತಿವಾರ್ತಾಭಾರತಿ11 Jan 2017 1:50 PM IST
share
‘‘ಅಮಾನವೀಯ ನೋಟು ರದ್ದತಿಯಿಂದ ಭಾರತೀಯರ ಬದುಕು ದುಸ್ತರ’’

ನ್ಯೂಯಾರ್ಕ್, ಜ.11: ಅಮಾನವೀಯವಾಗಿ ಯೋಜಿತವಾಗಿ ಜಾರಿಯಾದ ನೋಟು ರದ್ದತಿ ಹಾಗೂ ನಂತರದ ನಗದು ಕೊರತೆಯ ಸಮಸ್ಯೆ ಭಾರತೀಯರ ಬದುಕನ್ನು ದುಸ್ತರಗೊಳಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ತನ್ನ ಸೋಮವಾರದ ಸಂಪಾದಕೀಯದಲ್ಲಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ಕಾಳಧನ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿದ್ದರೆ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಾಗಿದೆ ಎಂಬುದಕ್ಕೆಸಾಕಷ್ಟು ಪುರಾವೆಗಳಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘‘ಭಾರತ ಸರಕಾರವುದೊಡ್ಡ ಮುಖಬೆಲೆಯ ಹಾಗೂ ಚಲಾವಣೆಯಲ್ಲಿರುವ ಅತ್ಯಧಿಕ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ಚಲಾವಣೆಗೆ ತಂದು ಎರಡು ತಿಂಗಳಾದರೂ ದೇಶದ ಆರ್ಥಿಕತೆ ಇನ್ನೂ ಸಮಸ್ಯೆಯೆದುರಿಸುತ್ತಿದೆ’’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

‘‘ಉತ್ಪಾದನಾ ರಂಗ ಕುಸಿಯುತ್ತಿದೆ, ರಿಯಲ್ ಎಸ್ಟೇಟ್ ಮತ್ತು ಕಾರು ಮಾರಾಟ ಕಡಿಮೆಯಾಗಿದೆ, ನಗದು ಕೊರತೆಯಿಂದ ತಮಗೆ ತೀವ್ರ ತೊಂದರೆಯಾಗಿದೆ ಎಂದು ಕೃಷಿ ಕಾರ್ಮಿಕರು, ಅಂಗಡಿ ಮಾಲಕರು ಹಾಗೂ ಇತರ ಭಾರತೀಯರು ಹೇಳುತ್ತಿದ್ದಾರೆ,’’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

‘‘ಇಡೀ ಯೋಜನೆಯನ್ನು ಸರಿಯಾಗಿ ಯೋಚಿಸದೆ ಜಾರಿ ಮಾಡಲಾಗಿದೆ. ಭಾರತೀಯರು ಬ್ಯಾಂಕುಗಳ ಹೊರಗೆ ಹಣ ಠೇವಣಿಯಿಡಲು ಹಾಗೂ ಹಿಂದಕ್ಕೆ ಪಡೆಯಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವಂತಾಗಿದೆ. ಹೊಸ ನೋಟುಗಳ ಕೊರತೆಯಿದೆ. ಸರಕಾರ ಸಾಕಷ್ಟು ನೋಟುಗಳನ್ನು ಮುಂಚಿತವಾಗಿಯೇ ಮುದ್ರಿಸಿಲ್ಲ. ಸಣ್ಣ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಗದು ಕೊರತೆ ತೀವ್ರವಾಗಿದೆ. ಚಲಾವಣೆಯಲ್ಲಿರುವ ನಗದು ಅರ್ಧಕ್ಕೂ ಕಡಿಮೆಯಾಯಿತು. ನವೆಂಬರ್ 4ರಂದು ಚಲಾವಣೆಯಲ್ಲಿದ್ದ 17.7 ಟ್ರಿಲಿಯನ್ ರೂಪಾಯಿ ಡಿಸೆಂಬರ್ 9ಕ್ಕೆ 9.2 ಟ್ರಿಲಿಯನ್‌ ರೂಪಾಯಿಗಳಿಗಿಳಿಯಿತು ಎಂದು ರಿಸರ್ವ್ ಬ್ಯಾಂಕ್ ನೀಡಿದ ಅಂಕಿಅಂಶಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

‘‘ದೇಶದ ಶೇ.98ರಷ್ಟು ಮಂದಿ ನಗದು ವಹಿವಾಟು ನಡೆಸುವ ದೇಶವಾದ ಭಾರತದಲ್ಲಿಇಷ್ಟೊಂದು ಸಂಖ್ಯೆಯ ನೋಟುಗಳನ್ನು ಕೆಲವೇ ವಾರಗಳಲ್ಲಿ ಚಲಾವಣೆಯಿಂದ ಹಿಂದೆಗೆದುಕೊಳ್ಳುವ ಕಾರ್ಯವನ್ನು ಯಾವ ದೇಶವೂ ಮಾಡಲಿಕ್ಕಿಲ್ಲ. ಹೆಚ್ಚು ಹೆಚ್ಚು ಜನರ ಬಳಿ ಡೆಬಿಟ್ ಕಾರ್ಡುಗಳು ಹಾಗೂ ಮೊಬೈಲ್ ಫೋನುಗಳಿದ್ದರೂ ಹೆಚ್ಚಿನ ವರ್ತಕರು ಇ-ಪೇಮೆಂಟ್ ಸ್ವೀಕರಿಸುವ ವ್ಯವಸ್ಥೆ ಹೊಂದಿಲ್ಲ’’ ಎಂದು ಹೇಳಿದೆ.

"ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಲು ತರುವವರು ತಾವು ತೆರಿಗೆ ಪಾವತಿಸಿರುವುದಕ್ಕೆ ದಾಖಲೆ ಒದಗಿಸಬೇಕೆಂದು ಸರಕಾರ ಹೇಳಿತ್ತು. ಇದರಿಂದಾಗಿ ಕಪ್ಪು ಹಣ ಬ್ಯಾಂಕುಗಳನ್ನು ತಲುಪಲಿಕ್ಕಿಲ್ಲವೆಂಬುದು ಸರಕಾರದ ಯೋಚನೆಯಾಗಿತ್ತು.  ಆದರೆ ವರದಿಗಳ ಪ್ರಕಾರ ಹೆಚ್ಚಿನ ಅಮಾನ್ಯಗೊಂಡ ನೋಟುಗಳನ್ನುಭಾರತೀಯರು ಬ್ಯಾಂಕುಗಳಿಗೆ ಹಿಂದಿರುಗಿಸಿದ್ದಾರೆ. ಇದರರ್ಥ ಒಂದೋ ಸರಕಾರ ಅಂದಾಜಿಸಿದಷ್ಟು ಕಾಳಧನ ಚಲಾವಣೆಯಲ್ಲಿರಲಿಲ್ಲ ಇಲ್ಲವೇಸರಕಾರ ವಾದಿಸಿದ ಹಾಗೆ ವಾಮ ಮಾರ್ಗಗಳ ಮೂಲಕ ಕೆಲವರು ತಮ್ಮ ಬಳಿಯಿದ್ದ ಕಪ್ಪು ಹಣವನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿದ್ದಾರೆ’’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘‘ಭ್ರಷ್ಟಾಚಾರದ ವಿರುದ್ಧ ಹೋರಾಟಲು ತಾವು ಸ್ವಲ್ಪ ಕಷ್ಟ ಸಹಿಸಲು ಸಿದ್ಧರಿದ್ದೇವೆ ಎಂದು ಬಹಳಷ್ಟು ಭಾರತೀಯರು ಹೇಳಿದ್ದಾರೆ. ಆದರೆ ನಗದು ಕೊರತೆ ಇನ್ನೂ ಬಹಳ ಕಾಲ ಮುಂದುವರಿದರೆ ಹಾಗೂ ಭ್ರಷ್ಟಾಚಾರ ಹಾಗೂ ತೆರಿಗೆ ವಂಚನೆ ಕಡಿಮೆಯಾಗದೇ ಇದ್ದಲ್ಲಿ ಅವರು ಅಷ್ಟರವರೆಗೆ ಸಹನೆಯಿಂದಿರಲು ಸಾಧ್ಯವಿಲ್ಲ ಎಂದು ಬಹಳಷ್ಟು ಅರ್ಥ ಶಾಸ್ತ್ರಜ್ಞರುಭವಿಷ್ಯ ನುಡಿದ್ದಿದ್ದಾರೆ’’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X