ಸ್ಕಾರ್ಪಿಯೋ ಪಲ್ಟಿ : ಯುವಕ ಸಾವು
.jpg)
ಸಾಗರ , ಜ.11 : ತಾಲ್ಲೂಕಿನ ಹುಲಿದೇವರಬನ ಸಮೀಪದ ಕೌತಿ ಕ್ರಾಸ್ನಲ್ಲಿ ಸ್ಕಾರ್ಪಿಯೋ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಸಾಗರದ ಜನ್ನತ್ಗಲ್ಲಿ ವಾಸಿ ಸಮೀಲ್ (22) ಮೃತ ಯುವಕನಾಗಿದ್ದಾನೆ.
ಜನ್ನತ್ಗಲ್ಲಿಯ ಆರು ಜನ ಯುವಕರು ಸಾಗರದಿಂದ ಹೊಳೆಬಾಗಿಲಿಗೆ ಸ್ಕಾರ್ಪಿಯೋ ವಾಹನದಲ್ಲಿ (ಕೆಎ20 ಎಂಎ 3451) ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ತಿರುವಿನಲ್ಲಿ ಮೂರು ಪಲ್ಟಿ ಹೊಡೆದಿದೆ.
ಸಮೀಲ್ ಸ್ಥಳದಲ್ಲಿಯೆ ಮೃತಪಟ್ಟಿದ್ದು, ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





