ಅಂಬೇಡ್ಕರ್ ನಿಂದನೆ ಆರೋಪ: ಓರ್ವನ ಸೆರೆ
ಮಂಗಳೂರು, ಜ.11: ಸಾಮಾಜಿಕ ಜಾಲ ತಾಣಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೀಯಾಳಿಸಿ ಬರೆಯಲಾಗಿದೆ ಎಂಬ ಆರೋಪದ ಮೇಲೆ ದೀಪಕ್ ಕಾಮತ್ ಎಂಬಾತನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಸಾಹಿತಿಯಂತೆ ಬಿಂಬಿಸಿಕೊಂಡಿದ್ದ ದೀಪಕ್ ಕಾಮತ್ ಇತ್ತೀಚೆಗೆ ತನ್ನ ೇಸ್ಬುಕ್ನಲ್ಲಿ ಡಾ.ಅಂಬೇಡ್ಕರ್ ಅವರನ್ನು ಅವಾಚ್ಯವಾಗಿ ನಿಂದನೆಯ ಬರಹಗಳನ್ನು ಬರೆದು ದಲಿತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದ. ಈ ಬಗ್ಗೆ ದಲಿತ ಮುಖಂಡ ರಮೇಶ್ ಕೋಟ್ಯಾನ್ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ದೀಪಕ್ ಕಾಮತ್ನನ್ನು ಬಂಧಿಸಿದ್ದಾರೆ.
Next Story