ಬೆಳ್ತಂಗಡಿ : ರಾಜ್ಯಮಟ್ಟದ ಸಮಾಲೋಚನಾ ಸಭೆ

ಬೆಳ್ತಂಗಡಿ,ಜ.12: ಯಾವುದೇ ಉನ್ನತ ಸ್ಥಾನದಲ್ಲಿರುವವರು ತಾವು ಕಾನೂನಿಗೆ, ಸಂವಿಧಾ ನಕ್ಕೆ ಅತೀತರು ಎಂದು ಭಾವಿಸಿದ್ದರೆ ಇದು ತಪ್ಪು ಅಭಿಪ್ರಾಯ. ಕಾನೂನಿನ ಮುಂದೆ ಎಲ್ಲರೂ ಸಮನಾಗಿರಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಇಂತಹ ಕಾನೂನಿನ ಹೊರತಾದ ಅಧಿಕಾರ ಕೇಂದ್ರಗಳಿಗೆ ಶರಣಾಗುತ್ತಿರುವುದು ಜನತೆಗೆ ತಪ್ಪು ಸಂದೇಶವನ್ನು ನೀಡಲಿದೆ ಎಂದು ಎಂದು ಚಿಂತಕ ಶ್ರೀ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಇವರು ಗುರುವಾಯನಕೆರೆಯಲ್ಲಿ ನಾಗರಿಕ ಸೇವಾ ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿಯ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತಾನಾಡಿದರು.
ವಿಚಾರವಾದಿ ಡಾ.ನರೇಂದ್ರ ನಾಯಕ್ ಮಾತಾಡುತ್ತಾ “ಸಂವಿಧಾನ ಪ್ರಕಾರ ಎಲ್ಲರೂ ಸಮಾನರು. ನಮಗೆ ವ್ಯಕ್ತಿ ಕೊಡುವ ನ್ಯಾಯ ಬೇಕಾಗಿಲ್ಲ. ದೇಶದ ಕಾನೂನು ನೀಡುವ ನ್ಯಾಯಬೇಕಾಗಿದೆ. ಮೌಢ್ಯತೆಯ ಪ್ರಚಾರಕ್ಕೆ ವಿಜ್ಞಾನವನ್ನು ಬಳಸಿ ಸಮಾಜವನ್ನು ನಿರಂತರವಾಗಿ ಶೋಷಿಸುತ್ತಿದ್ದರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದು ತಪ್ಪು. ಅನ್ಯಾಯವನ್ನು ಸಹಿಸಿಕೊಳ್ಳಬೇಕಾಗಿಲ್ಲ. ಒಟ್ಟಿಗೆ ಹೋರಾಡೋಣ” ಎಂದರು.
ಸಮಿತಿಯ ಪ್ರಧಾನ ಸಂಚಾಲಕ, ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ ಸೋಮನಾಥ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು . ಗ್ರಾಮೀಣ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕುಮಾರ್. ಯಸ್ ಆದಿವಾಸಿಗಳ ರಾಷ್ಟ್ರೀಯ ಮಹಾಕೂಟದ ರಾಷ್ಟ್ರಿಯ ಸಂಚಾಲಕ ರಾಯ್ ಡೇವಿಡ್ ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಾಹಿತಿ ಅನಂತರಾಂ ಬಂಗಾಡಿ, ಸಾಮಾಜಿಕ ಕಾರ್ಯಕರ್ತ ಐ.ಎಲ್ ಪಿಂಟೋ ಕೊಯ್ಯೂರು, ಚಿಂತನಾ ಫೌಂಡೇಷನ್ ಅಜ್ಜಂಪುರದ ಪೂವಪ್ಪ, ಕೃಷಿಕರ ವೇದಿಕೆಯ ಮಾಜಿ ಅಧ್ಯಕ್ಷ ಯಶೋಶ್ಚಂದ್ರ ಪಿ.ಆರ್. ಏನೇಕಲ್ಲು, ಕುಸುಮಾವತಿ ಧರ್ುಸ್ಥಳ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಮುಮ್ತಾಜ್ ಮತ್ತಿತರರು ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿ ವಕೀಲ ಕೆ. ಭಾಸ್ಕರ ಹೊಳ್ಳ, ರಂಜನ್ ರಾವ್ ಯರ್ಡೂರ್, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ, ವಿದ್ಯಾ ನಾಯಕ್, ಟ್ರಸ್ಟ್ನ ಉಪಾಧ್ಯಕ್ಷ ಕೆ.ರಮಾನಂದ ಸಾಲಿಯಾನ್ , ಪ್ರಜಾಪ್ರಭುತ್ವ ವೇದಿಕೆಯ ತಾಲೂಕು ಸಂಚಾಲಕ ಅನಿಲ್ ಕುಮಾರ್, ಮಲೆಕುಡಿಯರ ಸಮಾಜ ಸುಧಾರಣಾ ಟ್ರಸ್ಟ್ನ ಅಧ್ಯಕ್ಷ ಬಾಲಕೃಷ್ಣ ನಿಡ್ಲೆ, ಟ್ರಸ್ಟ್ನ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ, ಸೋಮ ಕೆ, ಮತ್ತು ಬಾಬು ಎ, ಅಂಡಿಂಜೆ ಹೋರಾಟ ಸಮಿತಿಯ ಅಶೋಕ ದೇವಾಡಿಗ, ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಸ್ವಾಗತಿಸಿ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪಸ್ಥಾಪಿತ)ಯ ಮುಖಂಡ ರಮೇಶ್ ಆರ್, ವಂದಿಸಿದರು.







