Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುದ್ಧದಲ್ಲಿ ಪಾತ್ರ ವಹಿಸುವುದನ್ನು...

ಯುದ್ಧದಲ್ಲಿ ಪಾತ್ರ ವಹಿಸುವುದನ್ನು ಮಹಿಳೆಯರೇ ನಿರ್ಧರಿಸಬೇಕಿದೆ: ಲೆ.ಜ.ರಾವತ್

ವಾರ್ತಾಭಾರತಿವಾರ್ತಾಭಾರತಿ14 Jan 2017 7:48 PM IST
share
ಯುದ್ಧದಲ್ಲಿ ಪಾತ್ರ ವಹಿಸುವುದನ್ನು ಮಹಿಳೆಯರೇ ನಿರ್ಧರಿಸಬೇಕಿದೆ: ಲೆ.ಜ.ರಾವತ್

ಹೊಸದಿಲ್ಲಿ,ಜ.14: ಸೇನೆಯಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಅವಕಾಶ ನೀಡುವುದನ್ನು ಪ್ರತಿಪಾದಿಸಿರುವ ಸೇನಾವರಿಷ್ಠ ಜನರಲ್ ಬಿಪಿನ್ ರಾವತ್ ಅವರು, ಯಾವುದೇ ಪ್ರತ್ಯೇಕ ಅಥವಾ ಹೆಚ್ಚುವರಿ ಸೌಲಭ್ಯಗಳಿಲ್ಲದೆಯೇ, ಮುಂಚೂಣಿಯಲ್ಲಿ ಕದನದಲ್ಲಿ ಪುರುಷರ ಜೊತೆ ತಾವು ಪಾಲ್ಗೊಳ್ಳಬೇಕೇ ಎಂಬುದನ್ನು ಸ್ವತಃ ಮಹಿಳೆಯರೇ ನಿರ್ಧರಿಸಬೇಕಾಗಿದೆಯೆಂದರು.

  ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಬಳಿಕ ತನ್ನ ಮೊದಲ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ ನೀವು ಇಡೀ ಸಮಾಜವನ್ನು ಸಮಗ್ರವಾಗಿ ನೋಡಬೇಕಾಗಿದೆ, ಮಹಿಳೆಯರಿಗೆ ನಾವು ಕದನದ ಪಾತ್ರವನ್ನು ವಹಿಸಿದಲ್ಲಿ, ಅವರು ತಮ್ಮ ಪುರುಷರ ಸಹವರ್ತಿಗಳೊಂದಿಗೆ ಸರಿಸಮಾನವಾದ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕಾಗುತ್ತದೆ’’ ಎಂದು ಹೇಳಿದರು.

 ಮಹಿಳೆಯರು ಕದನ ಪಾತ್ರವನ್ನು ವಹಿಸಿಕೊಳ್ಳುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಪಟ್ಟಿ ಮಾಡಿದ ರಾವತ್, ಟ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುಆಗ ಪುರುಷರ ರಾತ್ರಿ ಹೊತ್ತು ಯಾವುದೇ ಸೌಕರ್ಯಗಳಿಲ್ಲದೆ ಟ್ಯಾಂಕ್‌ನ ಕೆಳಗೆಯೇ ಮಲಗುತ್ತಾರೆ ಎಂದರು. ಮಹಿಳೆಯರು ಮುಂಚೂಣಿಗಳನ್ನು ಹೊರತುಪಡಿಸಿ ಸೇನೆಯ ಎಲ್ಲಾ ಸಶಸ್ತ್ರ ಘಟಕಗಳಲ್ಲಿದ್ದಾರೆಂದು ಬೆಟ್ಟು ಮಾಡಿ ತೋರಿಸಿದ ಜನರಲ್ ರಾವತ್, ಮಹಿಳಾ ಸೈನಿಕರು ಗಸ್ತು ತಿರುಗುವ ಸಂದರ್ಭದಲ್ಲಿ ಶೌಚಾಲಯದ ವ್ಯಸ್ಥೆಯೂ ಇರುವುದಿಲ್ಲವೆಂದು ಹೇಳಿದರು.

   ‘‘ ಒಂದು ವೇಳೆ ಅಂತಹ ಪರಿಸರಕ್ಕೆ ಹೊಂದಿಕೊಳ್ಳಲು ತಾವು ಸಿದ್ಧರಿದ್ದೇವೆ ಎಂಬುಜನ್ನು ಸ್ವತಃ ಮಹಿಳೆಯರೇ ನಿರ್ಧರಿಸಬೇಕಾಗಿದೆ ಎಂದರು. ಒಂದು ವೇಳೆ ಟ್ಯಾಂಕ್‌ನಲ್ಲಿ ಓರ್ವ ಅಥವಾ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ ಸಂದರ್ಭದಲ್ಲಿ ಟ್ಯಾಂಕ್ ಕೆಳಗೆ ಮಲಗಲು ತಾವು ತಯಾರಿದ್ದೇವೆ ಎಂಬುದನ್ನು ಸ್ವತಃ ಮಹಿಳಾ ಸೈನಿಕರೇ ನಿರ್ಧರಿಸಬೇಕು ಎಂದರು. ಗಡಿಮುಂಚೂಣಿಯಲ್ಲಿ 20-25 ದಿನಗಳವರೆಗೂ ಗಸ್ತು ನಡೆಸಬೇಕಾಗುತ್ತದೆಯೆಂದ ಅವರು, ಅರುಣಾಚಲಪ್ರದೇಶದಲ್ಲಿ ಅದು 35 ದಿನಗಳವರೆಗೂ ಇರುತ್ತದೆಯೆಂದರು.

    ಮಹಿಳೆಯರನ್ನು ಸಶಸ್ತ್ರ ಪಡೆಗಳ ಎಂಜಿನಿಯರ್‌ಗಳು ಹಾಗೂ ಸಿಗ್ನಲ್ಸ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆಯಾದೂ, ಪದಾತಿದಳ, ಸಶಸ್ತ್ರ ಸೇನೆ ಹಾಗೂ ಯಾಂತ್ರಿಕೃತ ಪದಾತಿದಳದಿಂದ ಹೊರಗಿಡಲಾಗಿದೆ. ಆದಾಗ್ಯೂ ವಾಯುಪಡೆ ಈಗಾಗಲೇ ಮಹಿಳೆಯರನ್ನು ಕದನದ ಪಾತ್ರಕ್ಕೆ ಸೇರ್ಪಡೆಗೊಳಿಸಿದೆ, ಆದರೆ ಅವರನ್ನು ಮುಂಚೂಣಿಯ ನೆಲೆಗಳಲ್ಲಿ ನಿಯೋಜಿಸುತ್ತಿಲ್ಲ. ನೌಕಾಪಡೆಯು ತನ್ನ ವಿಮಾನಸಾಗಣಿಕೆ ಹಡಗುಗಳಿಂದ ಹಾರಾಟ ನಡೆಸದ ವಿಮಾನಗಳಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ನೀಡಿದೆ. ಆದಾಗ್ಯೂ ಭವಿಷ್ಯದ ದಿನಗಳಲ್ಲಿ ಮಹಿಳಾ ಯೋಧರನ್ನು ಕೂಡಾ ಗಮನದಲ್ಲಿಟ್ಟುಕೊಂಡು ಹಡಗುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X