Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಾವೂದ್ ಇಬ್ರಾಹೀಂ ಜೊತೆ 'ಟೀ ಭೇಟಿಯಲ್ಲಿ'...

ದಾವೂದ್ ಇಬ್ರಾಹೀಂ ಜೊತೆ 'ಟೀ ಭೇಟಿಯಲ್ಲಿ' ಏನಾಯಿತು ?

ಬಹಿರಂಗಪಡಿಸಿದ ರಿಶಿ ಕಪೂರ್

ವಾರ್ತಾಭಾರತಿವಾರ್ತಾಭಾರತಿ15 Jan 2017 6:30 PM IST
share
ದಾವೂದ್ ಇಬ್ರಾಹೀಂ ಜೊತೆ ಟೀ ಭೇಟಿಯಲ್ಲಿ ಏನಾಯಿತು ?

ಮುಂಬೈ: ಬಾಲಿವುಡ್‌ನ ಖ್ಯಾತ ನಟರಾಗಿರುವ ರಿಶಿ ಕಪೂರ್ ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡವರು. ಅವರ ನೆನಪುಗಳ ಬುತ್ತಿ ಬಿಚ್ಚಿಡುವ ಹೊಸ ಕೃತಿ ಈಗ ಹೊರಬರುತ್ತಿರುವ ಕಾರಣದಿಂದ ಮತ್ತೆ ಈ ಬಾಲಿವುಡ್ ತಾರೆ ಸುದ್ದಿಯಲ್ಲಿದ್ದಾರೆ. ಮನೋರಂಜನಾ ಪತ್ರಕರ್ತೆ ಮೀನಾ ಅಯ್ಯರ್ ಇವರ ನೆನಪುಗಳಿಗೆ ಅಕ್ಷರರೂಪ ನೀಡಿದ್ದಾರೆ. ಹಾರ್ಪರ್ ಕೊಲಿನ್ಸ್ ಪ್ರಕಾಶನ ಹೊಣೆ ಹೊತ್ತಿದೆ. ದಾವೂದ್ ಇಬ್ರಾಹೀಂ ಅವರ ನಿವಾಸಕ್ಕೆ ಚಹಾಕೂಟಕ್ಕೆ ಹೋಗಿದ್ದಾಗಿನ ಅನುಭವವನ್ನು ಕಪೂರ್ ಇದರಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆ ನಡೆದದ್ದು 1988ರಲ್ಲಿ. ಭಾರತದ ನಂಬರ್ ವನ್ ಶತ್ರುವಾಗಿ ದಾವೂದ್ ಇಬ್ರಾಹೀಂರನ್ನು ರೂಪಿಸಿದ ಮುಂಬೈ ಸ್ಫೋಟ ನಡೆದ 1993ಕ್ಕಿಂತ ಮೊದಲು ಎಂದು ಕಪೂರ್ ಸ್ಪಷ್ಟಪಡಿಸಿದ್ದಾರೆ.

ದುಬೈ ವಿಮಾನ ನಿಲ್ದಾಣದಲ್ಲಿರುವ ದಾವೂದ್ ಬಂಟನೊಬ್ಬ, ಅಲ್ಲಿಗೆ ಭೇಟಿ ನೀಡುವ ಎಲ್ಲ ಸೆಲೆಬ್ರಿಟಿಗಳ ಬಗ್ಗೆ ಡಾನ್‌ಗೆ ಮಾಹಿತಿ ನೀಡುತ್ತಾನೆ. 1988ರ ಒಂದು ದಿನ, ರಿಶಿಕಪೂರ್ ತಮ್ಮ ಸ್ನೇಹಿತ ಬಿಟ್ಟು ಆನಂದ್ ಜತೆ ಒಂದು ಸಂಗೀತ ಕಚೇರಿಗೆ ದುಬೈಗೆ ಹೋಗಿದ್ದರು. ಅವರನ್ನು ಗುರುತಿಸಿದ ದಾವೂದ್ ಬಂಟ, ತಕ್ಷಣ ದಾವೂದ್‌ಗೆ ಫೋನ್ ಸಂಪರ್ಕಿಸಿ, ಕಪೂರ್ ಕೈಗೆ ನೀಡಿದ. ನನ್ನಿಂದ ಯಾವುದೇ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹೇಳಿದ ದಾವೂದ್, ಚಹಾ ಕೂಟಕ್ಕೆ ಆಹ್ವಾನಿಸಿದ ಎಂದು ಕಪೂರ್ ವಿವರಿಸಿದ್ದಾರೆ.

ಈ ಡಾನ್ ಭೇಟಿಯಿಂದ ಯಾವ ತೊಂದರೆಯೂ ಆಗದು ಎಂದು ನಿಶ್ಚಯಿಸಿದರು. ಏಕೆಂದರೆ ಆತ ಭೂಗತ ದೊರೆ ಎಂಬ ಕಲ್ಪನೆ ಇತ್ತೇ ವಿನಃ ಆತ ಉಗ್ರಗಾಮಿ ಎನ್ನುವ ಒಂದಂಶವೂ ಅವರಲ್ಲಿ ಇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

"ಆ ಸಂಜೆ ನನ್ನನ್ನು ಹಾಗೂ ಬಿಟ್ಟು ಅವರನ್ನು ಹೋಟೆಲ್‌ನಿಂದ ರೋಲ್ಸ್ ರಾಯ್ಸ್ ಕಾರಿನಲ್ಲಿ ಕರೆದೊಯ್ದರು. ಸನಿಹಕ್ಕೆ ತಲುಪುತ್ತಿದ್ದಂತೆ ಸುತ್ತಿ ಬಳಸಿ ಕರೆದೊಯ್ಯಲಾಯಿತು. ಏಕೆ ಎಂದು ನನಗೆ ಅರ್ಥವಾಗಲಿಲ್ಲ. ಅದು ದಾವೂದ್ ಮನೆ ಎಲ್ಲಿದೆ ಎನ್ನುವುದು ತಿಳಿಯಬಾರದು ಎಂಬ ಕಾರಣಕ್ಕೆ ಎಂದು ಸ್ನೇಹಿತ ವಿವರಿಸಿದ. ಗಂಭೀರ ವೇಷಭೂಷಣದೊಂದಿಗೆ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ, "ನಾನು ನಿಮ್ಮನ್ನು ಚಹಾಗೆ ಆಹ್ವಾನಿಸಿದ್ದಕ್ಕೆ ಕ್ಷಮೆ ಇರಲಿ. ಏಕೆಂದರೆ ನಾನು ಮದ್ಯ ಸೇವಿಸುವುದಿಲ್ಲ" ಎಂದು ಹೇಳಿದ್ದನ್ನು ರಿಶಿ ನೆನಪಿಸಿಕೊಂಡಿದ್ದಾರೆ.

ಸುಮಾರು ನಾಲ್ಕು ಗಂಟೆಯ ಭೇಟಿಯಲ್ಲಿ ಮೂವರೂ ಜತೆಯಾಗಿ ಚಹಾ- ಬಿಸ್ಕೆಟ್ ಸೇವಿಸಿದೆವು. ದಾವೂದ್ ತಾನೆಸಗಿದ ಅಪರಾಧ ಕೃತ್ಯಗಳೂ ಸೇರಿದಂತೆ ಹಲವು ವಿಚಾರವಾಗಿ ಮುಕ್ತವಾಗಿ ಮಾತನಾಡಿದರು. ಆ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದೂ ಸ್ಪಷ್ಟಪಡಿಸಿದರು.

"ಸಣ್ಣ ಕಳ್ಳತನ ಮಾಡಿದ್ದೆ. ಆದರೆ ಕೆಲವರನ್ನು ಕೊಲ್ಲಿಸಿದ್ದರೂ ನಾನು ಯಾರನ್ನೂ ಕೊಂದಿಲ್ಲ. ಮುಂಬೈ ಕೋರ್ಟ್‌ನಲ್ಲಿ ಸುಳ್ಳುಹೇಳಿದ್ದಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲ್ಲಿಸಿದ್ದನ್ನು ನೆನಪಿಸಿಕೊಂಡರು"

ತವಾಯಿಫ್ ಚಿತ್ರದ ದಾವೂದ್ ಪಾತ್ರದಲ್ಲಿ ಮಿಂಚಿದ ರಿಶಿಯನ್ನು ದಾವೂದ್ ಮುಕ್ತಕಂಠದಿಂದ ಹೊಗಳಿದರು. ಈ ಚಿತ್ರ ತಮ್ಮನ್ನು ವೈಭವೀಕರಿಸಿದೆ ಎಂದು ದಾವೂದ್ ಹೇಳಿದರು. ಹೀಗೆ ಒಂದು ಬಾರಿ ಮಾತ್ರ ದಾವೂದ್‌ನನ್ನು ಭೇಟಿಯಾದದ್ದಲ್ಲ ಎಂದು ಹೇಳಿದ್ದಾರೆ.

ಕೆಲ ವರ್ಷ ಬಳಿಕ ದುಬೈನ ಮಾಲ್ ಒಂದರಲ್ಲಿ ದಾವೂದ್ ಭೇಟಿಯಾದರು. 10 ಮಂದಿ ಅಂಗರಕ್ಷಕರು ಜತೆಗಿದ್ದರು. ಆ ಅಂಗಡಿಯಲ್ಲಿ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ದಾವೂದ್ ಹೇಳಿದ್ದರು. ಇದಕ್ಕೆ ಕೃತಜ್ಞತೆ ಹೇಳಿ, ನಾನು ನನ್ನ ಸ್ವಂತ ಹಣದಲ್ಲೇ ಶಾಪಿಂಗ್ ಮಾಡುತ್ತೇನೆ ಎಂದು ಹೇಳಿದೆ.

ದಾವೂದ್ ಈ ನಟನಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನೂ ಕೊಟ್ಟಿದರು. ಆದರೆ 1989ರ ವೇಳೆಗೆ ಭಾರತದಲ್ಲಿ ಇನ್ನೂ ಮೊಬೈಲ್ ಇಲ್ಲದ ಕಾರಣ ಅವರಿಗೆ ನನ್ನ ಸಂಖ್ಯೆ ಕೊಡಲಾಗಲಿಲ್ಲ ಎಂದು ರಿಶಿ ಹೇಳಿಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X