ಇಂದು ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ
ಮಂಗಳೂರು, ಜ.16: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರ ಜನ್ಮ ಶತಾಬ್ಧ್ದಿಯ ಅಂಗವಾಗಿ ರಾಜ್ಯ ಸರಕಾರದ ಅಧಿಸೂಚನೆಯಂತೆ ದೇರೆಬೈಲ್ ಗ್ರಾಮದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾಮಟ್ಟದ ‘ಡಾ.ಅಂಬೇಡ್ಕರ್ ಭವನ’ ನಿರ್ಮಾಣದ ಕಾಮಗಾರಿಗೆ ಜ.17ರಂದು ಬೆಳಗ್ಗೆ 9:30ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಪಿ. ಕೇಶವ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಪ್ರೇಮನಾಥ ಪಿ.ಬಿ., ಪ.ಜಾ./ಪ.ಪಂ. ಮೀಸಲಾತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ವಿಶ್ವನಾಥ ಬೊಳ್ಳೂರು, ಅಖಿಲ ಭಾರತೀಯ ಪ.ಜಾ./ಪ.ಪಂ. ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗೀಶ್ ಗುರುಪುರ, ದಸಂಸ ಮುಖಂಡರಾದ ಆನಂದ್ ಸರಪಾಡಿ, ರವಿ ಉಪಸ್ಥಿತರಿದ್ದರು.
Next Story





