Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಂಕಜಕಸ್ತೂರಿಯ ವಂಚಕ ಜಾಹೀರಾತು ಮತ್ತು...

ಪಂಕಜಕಸ್ತೂರಿಯ ವಂಚಕ ಜಾಹೀರಾತು ಮತ್ತು ಎರಡು ಮಕ್ಕಳ ನಕಲಿ ಅಪ್ಪ!

ಹನಮಂತ ಹಲಿಗೆರಿಹನಮಂತ ಹಲಿಗೆರಿ17 Jan 2017 9:53 AM IST
share
ಪಂಕಜಕಸ್ತೂರಿಯ ವಂಚಕ ಜಾಹೀರಾತು ಮತ್ತು ಎರಡು ಮಕ್ಕಳ ನಕಲಿ ಅಪ್ಪ!

ಜಾಹಿರಾತುಗಳ ದಗಲ್ಬಾಜಿಗೆ ಸಣ್ಣ ಉದಾಹರಣೆ ಇಲ್ಲಿದೆ ನೋಡಿ. ಜಾಹಿರಾತುಗಳು ಸುಳ್ಳು ಅಂತ ಗೊತ್ತಿತ್ತು. ಆದರೆ, ಈ ಪರಿ ಸುಳ್ಳು ಅಂತ ಅನಿಸಿರಲಿಲ್ಲ. ಯಪ್ಪಾ...

ಜಾಹಿರಾತಿನಲ್ಲಿರುವ ನಾರಾಯಣಭಟ್ ನನಗೆ ಹಳೆಯ ಪರಿಚಿತರು. ನಾನು ಹಿಂದೆ ನಾಟಕಗಳಲ್ಲಿ ಅಭಿನಯಿಸುವಾಗ ಮತ್ತು ವಾರ್ತಾಭಾರತಿಯಲ್ಲಿ ನಾಟಕಗಳ ವಿಮರ್ಶೆಯಂಥದ್ದನ್ನು ಬರೆಯುತ್ತಿದ್ದಾಗ ಹಲವಾರು ಸಲ ಇವರ ನಾಟಕಗಳನ್ನು ನೋಡಿ ಮೆಚ್ಚಿಕೊಂಡಿದ್ದೇನೆ. ನಂತರ ನಾರಾಯಣಭಟ್ ಜಾದು ಕ್ಷೇತ್ರ ಪ್ರವೇಶಿಸಿದಾಗ ಅವರ ನಾಟಕಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದರು. ಇಷ್ಟು ದಿನ ಒಂಟಿಯಾಗಿದ್ದ ಅವರು ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ.

ಇದೆಲ್ಲ ಇರಲಿ, ಈ ಜಾಹಿರಾತು ನೋಡಿ ಗಾಬರಿಗೊಳ್ಳಲು ಕಾರಣವೆಂದರೆ ಇತ್ತೀಚೆಗಷ್ಟೆ ಮದುವೆಯಾಗಿರುವ ನಮ್ಮ ನಾರಾಯಣಭಟ್ಟರಿಗೆ ಶಾಲೆಗೆ ಹೋಗುವಷ್ಟು ವಯಸ್ಸಾಗಿರುವ ಎರಡು ಮಕ್ಕಳಿರುವುದು ಹೇಗೆ ಸಾಧ್ಯ. ಭಟ್ಟರು ಆಟೋ ಓಡಿಸುವುದನ್ನು ಯಾವಾಗ ಶುರು ಹಚ್ಚಿಕೊಂಡರು ಎಂಬುದೇ ಯಕ್ಷ ಪ್ರಶ್ನೆ ಕಾಡತೊಡಗಿತು.ಗೊತ್ತಿರುವ ಗೆಳೆಯರನ್ನು ವಿಚಾರಿಸಿದ ಮೇಲೆ "ಏ ಅದು ಸುಳ್ಳು ಸುಳ್ಳೆ ಜಾಹಿರಾತು" ಎಂದರು.

"ನನಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಉಸಿರಾಟದ ತೊಂದರೆ ಇರುವ ಅವರಿಗೆ ಈ ಪಂಕಜ ಕಸ್ತೂರಿಯ ಔಷಧಿ ಕುಡಿಸಿದ ನಂತರ ಸಂಪೂರ್ಣ ವಾಸಿಯಾಯಿತಂತೆ" (ಈ ಕನ್ನಡದಲ್ಲಿರುವ ಜಾಹೀರಾತನ್ನು ಒಮ್ಮೆ ಓದಿ. ನಿಮ್ಮ ನಾಲಿಗೆ ಸ್ವಚ್ಚವಾಗುವುದು ಖಂಡಿತ.)

ಈ ಜಾಹಿರಾತಿನಲ್ಲಿ ಹೇಳಿಕೊಂಡಿದ್ದಷ್ಟೆ ಅಲ್ಲದೇ ಈ ಜಾಹಿರಾತನ್ನು ತಮ್ಮ ವಾಲ್ ಮೇಲೆ ಈ ಮಾಹಾನುಭಾವರು ಹಂಚಿಕೊಂಡಿದ್ದಾರೆ. 
ಇದರಲ್ಲಿ ಯಾರದು ತಪ್ಪು, ಪ್ರಕಟಿಸುವ ಕಂಪನಿಯದ್ದಾ, ನಟರದ್ದಾ, ಪ್ರಕಟಿಸುವ ಪತ್ರಿಕೆಗಳದ್ದಾ, ಕೊಳ್ಳುವ ಗ್ರಾಹಕರದ್ದಾ? ಇವರೊಳಗಿನ ಆತ್ಮ ಇಂಥದ್ದನ್ನೆಲ್ಲಾ ಪ್ರಶ್ನಿಸುವ ಗೂಜಿಗೆ ಹೋಗದೇ ನಿಷ್ಕ್ರೀಯಗೊಂಡಿದೆಯೇ? 

ಯಪ್ಪಾ... ಗುಣಮುಖರಾಗಿರುವ ಅಸಲಿ ಗ್ರಾಹಕರನ್ನೇ ಮಾತಾಡಿಸಿ ಜಾಹಿರಾತು ಪ್ರಕಟಿಸಲು ಈ ಕಂಪೆನಿಗಳಿಗೆ ಏನು ದಾಡಿ? ಅಥವಾ ಅದರಲ್ಲಿರುವ ಔಷಧಿಯೇ ನಕಲಿಯೇ? ಇಂಥದಕ್ಕೆಲ್ಲ ಶಿಕ್ಷೆಯೇ ಇಲ್ಲವೇ, ದುಡ್ಡು ಖರ್ಚು ಮಾಡಿ ಜಾಹಿರಾತು ನೀಡಿದರೆ ಅದು ಕಾನೂನುಬದ್ಧವಾಗಿ ಬಿಡುತ್ತದೆಯೇ? 
ಆದರೂ ಕೊಳ್ಳೊಣ. ಕಂಪೆನಿಗಳನ್ನು ಆರ್ಥಿಕವಾಗಿ ಸದೃಡಗೊಳಿಸೋಣ.

share
ಹನಮಂತ ಹಲಿಗೆರಿ
ಹನಮಂತ ಹಲಿಗೆರಿ
Next Story
X