ಯುನಿವೆಫ್ನಿಂದ ಜ.20ರಂದು ಬಜ್ಪೆಯಲ್ಲಿ ಪ್ರವಾದಿ ಸಂದೇಶ ಅಭಿಯಾನ
ಮಂಗಳೂರು, ಜ.19: ‘ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್(ಸ)’ ಎಂಬ ಕೇಂದ್ರೀಯ ವಿಷಯದಲ್ಲಿ 2016ರ ಡಿಸೆಂಬರ್16ರಿಂದ 2017ರ ಫೆಬ್ರವರಿ 3ರ ತನಕ ಯುನಿವೆಫ್ ಕರ್ನಾಟಕ ಆಯೋಜಿಸಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಅಭಿಯಾನದ ಪ್ರಯುಕ್ತ ಜ.20ರ ಸಂಜೆ 7 ಗಂಟೆಗೆ ಬಜ್ಪೆಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸಭೆ ಜರಗಲಿದೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಶರೀಅತ್ ನಮ್ಮ ಕಾನೂನು ಪ್ರವಾದಿ(ಸ) ನಮ್ಮ ನಾಯಕ’ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಅಭಿಯಾನದ ಸಂಚಾಲಕ ಸಲೀಮ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





