ಜ. 22ರಂದು ಉಳ್ಳಾಲದಲ್ಲಿ ಸಲಫಿ ಸಮಾವೇಶ

ಮಂಗಳೂರು, ಜ.20 : ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್.ನ ಉಳ್ಳಾಲ ಘಟಕದ ವತಿಯಿಂದ ಜ. 22 ರಂದು ಆದಿತ್ಯವಾರ ಸಂಜೆ ಗಂಟೆ 4:30ಕ್ಕೆ ಉಳ್ಳಾಲ ಪಂಚಾಯತ್ ಗ್ರೌಂಡ್ನಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಮೌಲವಿ ಅಲಿ ಉಮರ್ರವರು “ಕುರ್ಆನ್ ಮತ್ತು ಸುನ್ನತ್ಗೆ ಮರಳಿರಿ” ಎಂಬ ವಿಷಯವಾಗಿ ಮತ್ತು ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್ರವರು “ಕಲಿಮತುಶ್ಶಹಾದ” ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.
Next Story





