Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಇರಾನಿ ಕಪ್: ಗುಜರಾತ್ ಮೇಲುಗೈ, ಪೂಜಾರ...

ಇರಾನಿ ಕಪ್: ಗುಜರಾತ್ ಮೇಲುಗೈ, ಪೂಜಾರ ಏಕಾಂಗಿ ಹೋರಾಟ

ವಾರ್ತಾಭಾರತಿವಾರ್ತಾಭಾರತಿ21 Jan 2017 11:02 PM IST
share
ಇರಾನಿ ಕಪ್: ಗುಜರಾತ್ ಮೇಲುಗೈ, ಪೂಜಾರ ಏಕಾಂಗಿ ಹೋರಾಟ

ಮುಂಬೈ, ಜ.21: ಇರಾನಿ ಕಪ್‌ನ ಎರಡನೆ ದಿನದಾಟವಾದ ಶನಿವಾರ 10 ವಿಕೆಟ್‌ಗಳು ಪತನಗೊಂಡಿದ್ದು, ಶೇಷ ಭಾರತದ ವಿರುದ್ದ ರಣಜಿ ಚಾಂಪಿಯನ್ ಗುಜರಾತ್ ತಂಡದ ಬ್ಯಾಟ್ಸ್‌ಮನ್ ಚಿರಾಗ್ ಗಾಂಧಿ 169 ರನ್ ಬಾರಿಸಿ ದಿನದ ಹೀರೋವಾಗಿ ಹೊರಹೊಮ್ಮಿದರು.

ಗುಜರಾತ್‌ನ ಮೊದಲ ಇನಿಂಗ್ಸ್ 358 ರನ್‌ಗೆ ಉತ್ತರಿಸಹೊರಟಿರುವ ಶೇಷ ಭಾರತ ತಂಡ ನಾಯಕ ಚೇತೇಶ್ವರ ಪೂಜಾರ(86 ರನ್, 156 ಎಸೆತ,11 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ ದಿನದಾಟದಂತ್ಯಕ್ಕೆ 72 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 206 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಗುಜರಾತ್ ಇನಿಂಗ್ಸ್‌ಗಿಂತ 152 ರನ್ ಹಿನ್ನಡೆಯಲ್ಲಿದೆ.

 ಶಿಸ್ತುಬದ್ಧ ಹಾಗೂ ನಿಯಂತ್ರಿತ ಬೌಲಿಂಗ್ ದಾಳಿ ನಡೆಸಿದ ಗುಜರಾತ್ ಬೌಲರ್‌ಗಳು 2ನೆ ದಿನದ ಗೌರವಕ್ಕೆ ಪಾತ್ರರಾದರು. ತ್ರಿವಳಿ ಬೌಲರ್‌ಗಳಾದ ಚಿಂತನ್ ಗಜ(3-46), ಮೋಹಿತ್ ಥಾಡಾನಿ(2-48) ಹಾಗೂ ಹಾರ್ದಿಕ್ ಪಟೇಲ್(3-73) ಹಳೆ ಹಾಗೂ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ನಡೆಸಿ 8 ವಿಕೆಟ್‌ಗಳನ್ನು ಹಂಚಿಕೊಂಡರು.

ಗುಜರಾತ್ 358 ರನ್‌ಗೆ ಆಲೌಟಾದ ಬಳಿಕ ಗಜ ಹಾಗೂ ಈಶ್ವರ್ ಚೌಧರಿ ಬಿಗಿ ಬೌಲಿಂಗ್ ನಡೆಸಿ ಶೇಷ ಭಾರತಕ್ಕೆ ಕಡಿವಾಣ ಹಾಕಿದರು. ಗಜ ಅವರು ಆರಂಭಿಕ ದಾಂಡಿಗ ಅಭಿನವ್ ಮುಕುಂದ್(8) ವಿಕೆಟ್ ಉರುಳಿಸಿದರು. ಗೊಹಿಲ್ ಸ್ಲಿಪ್ ಕಾರ್ಡನ್‌ನಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಮಿಂಚಿದರು.

89 ರನ್‌ಗೆ 2 ವಿಕೆಟ್ ಕಳೆದುಕೊಂಡ ಬಳಿಕ ನಿಧಾನವಾಗಿ ಶೇಷ ಭಾರತ ತಂಡ ಚೇತರಿಕೆಯ ಪ್ರದರ್ಶನ ನೀಡಿತು. ಕರುಣ್ ನಾಯರ್(28) ಹಾಗೂ ಪೂಜಾರ 4ನೆ ವಿಕೆಟ್‌ಗೆ ಉಪಯುಕ್ತ 45 ರನ್ ಜೊತೆಯಾಟ ನಡೆಸಿದರು. ಟೀ ವಿರಾಮಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕರುಣ್ ನಾಯರ್ ಅವರು ಗಜ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃಢಚಿತ್ತದಿಂದ ಆಡಿದ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 38ನೆ ಅರ್ಧಶತಕ ಬಾರಿಸಿದರು. ಮನೋಜ್ ತಿವಾರಿ35 ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು. ಆದರೆ, ಚೊಚ್ಚಲ ಪಂದ್ಯ ಆಡಿರುವ ಥಡಾನಿ ಅವರು ತಿವಾರಿಯನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಖಾತೆ ತೆರೆಯಲು ಥಡಾನಿ ಅವಕಾಶ ನೀಡಲಿಲ್ಲ.

ಈಶ್ವರ್ ಚೌಧರಿ ಅವರು 63ನೆ ಓವರ್‌ನಲ್ಲಿ ಪೂಜಾರ ವಿಕೆಟ್ ಕಬಳಿಸಿ ಗುಜರಾತ್‌ಗೆ ಮೇಲುಗೈ ಒದಗಿಸಿಕೊಟ್ಟರು. ಬಾಲಂಗೋಚಿಗಳಾದ ಶಹಬಾಝ್ ನದೀಮ್ ಹಾಗೂ ಸಿದ್ದಾರ್ಥ್ ಕೌಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಶೇಷ ಭಾರತ ತಂಡ 2ನೆ ದಿನದಾಟದಂತ್ಯಕ್ಕೆ 206 ರನ್‌ಗೆ 9 ವಿಕೆಟ್ ಕಳೆದುಕೊಂಡಿತು.

ಗುಜರಾತ್ 358: ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 300 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್‌ನ ಪರ ಗಾಂಧಿ ಹಾಗೂ ಹಾರ್ದಿಕ್(9) 9ನೆ ವಿಕೆಟ್‌ಗೆ 72 ರನ್ ಸೇರಿಸಿದರು.

  ಮೊದಲ ದಿನದಾಟದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ಪೂರೈಸಿದ್ದ ಗಾಂಧಿ ಎರಡನೆ ದಿನದಾಟದಲ್ಲಿ ಕೆಲವೊಂದು ಆಕರ್ಷಕ ಬೌಂಡರಿ ಬಾರಿಸಿದರು.

ಒಟ್ಟಿಗೆ 9 ವಿಕೆಟ್‌ಗಳನ್ನು ಕಬಳಿಸಿದ ಪಂಕಜ್ ಸಿಂಗ್(4-104) ಹಾಗೂ ಸಿದ್ದಾರ್ಥ್ ಕೌಲ್(5-86) ಕೊನೆಗೂ ಗುಜರಾತ್‌ನ್ನು 358 ರನ್‌ಗೆ ಆಲೌಟ್ ಮಾಡಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಪ್ರಥಮ ಇನಿಂಗ್ಸ್: 358 ರನ್‌ಗೆ ಆಲೌಟ್

(ಚಿರಾಗ್ ಗಾಂಧಿ 169, ಜುನೇಜ 47, ರಾವಲ್ 39, ಸಿದ್ದಾರ್ಥ್ ಕೌಲ್ 5-86, ಪಂಕಜ್ ಸಿಂಗ್ 4-104)

ರೆಸ್ಟ್ ಆಫ್ ಇಂಡಿಯಾ ಪ್ರಥಮ ಇನಿಂಗ್ಸ್:72 ಓವರ್‌ಗಳಲ್ಲಿ 206/9

(ಚೇತೇಶ್ವರ ಪೂಜಾರ 86, ಹೆರ್ವಾಡ್ಕರ್ 48, ಕರುಣ್ ನಾಯರ್ 28, ಗಜ 3-46, ಹಾರ್ದಿಕ್ ಪಟೇಲ್ 3-73, ಥಡಾನಿ 2-48)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X