ಸೈಯದ್ ವೈಲತ್ತೂರ್

ಮಂಗಳೂರು, ಜ.21: ಪ್ರಮುಖ ಧಾರ್ಮಿಕ ಮುಖಂಡ, ಸಮಸ್ತ ಉಲಮಾ ಒಕ್ಕೂಟ ಕೇಂದ್ರ ಮುಶಾವರದ ಸದಸ್ಯ ಅಸ್ಸೆಯದ್ ಯೂಸುುಲ್ ಜೀಲಾನಿ ವೈಲತ್ತೂರ್ ತಂಳ್ (70) ನಿಧನ ಹೊಂದಿದರು.
ಪ್ರತಿಷ್ಠಿತ ಸುನ್ನೀ ಮರ್ಕಝ್ನ ಉಪಾಧ್ಯಕ್ಷ, ಎಸ್ವೈಎಸ್ ಸುಪ್ರೀಂ ಕೌನ್ಸಿಲ್ ಸದಸ್ಯ ಮೊದಲಾದ ಹುದ್ದೆಗಳನ್ನು ವಹಿಸಿಕೊಂಡಿದ್ದ ಅವರು, 2018ರ ಜನವರಿಯಲ್ಲಿ ನಡೆಯಲಿರುವ ಮರ್ಕಝ್ 40ನೆ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.
ರೂರು ಸೈಯದ್ ಕೋಯಣ್ಣಿಕೋಯ ತಂಳ್ ಮತ್ತು ಆಯಿಶಾ ಬೀಬಿ ದಂಪತಿಯ ಪುತ್ರರಾದ ವೈಲತ್ತೂರು ನಿಧನದ ಕೆಲವೇ ಗಂಟೆಗಳ ಮೊದಲು ಕರಲಿಪಂಪೊಯಿಲ್ ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ಶೇಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ ಪರಂಪರೆಗೆ ಸೇರಿದ ಕವರತ್ತಿ ದ್ವೀಪದಲ್ಲಿ ಸಮಾಸ್ಥರಾಗಿರುವ ಸೈಯದ್ ಖಾಸಿಂ ವಲಿಯುಲ್ಲಾಹ್ ಅವರ ಐದನೆ ಪೌತ್ರರಾಗಿರುವ ವೈಲತ್ತೂರ್ ತಂಳ್ ಅವರು ಸಿಎಂ ಮಡವೂರು ವಲಿಯುಲ್ಲಾಹ್ ಅವರ ಶಿಷ್ಯರಾಗಿ ಸೇವೆ ಸಲ್ಲಿಸಿದ್ದರು. ತಂಳ್ 2014ರಲ್ಲಿ ಪವಿತ್ರ ಕಅಬಾ ಶರ್ೀ ಶುಚೀಕರಣ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದರು. ಮೃತರು ಪತ್ನಿ ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಹಲವು ಬಂಧುಮಿತ್ರರನ್ನು ಅಗಲಿದ್ದಾರೆ.
ಸಂತಾಪ: ಅಖಿಲ ಭಾರತ ಸುನ್ನಿ ಜಂಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಬೇಕಲ್ ಉಸ್ತಾದ್, ಎಸ್ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ, ಎಸ್ಸೆಸ್ಸ್ೆ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್ಸೆಸ್ಸ್ೆ ಬಂಟ್ವಾಳ ಡಿವಿಶನ್, ಉಳ್ಳಾಲ ಡಿವಿಷನ್, ಬಂಟ್ವಾಳ ಸೆಕ್ಟರ್, ಪಾಣೆಮಂಗಳೂರು ಸೆಕ್ಟರ್, ಉಳ್ಳಾಲ ಸೆಕ್ಟರ್, ಕಲ್ಲಡ್ಕ ಸೆಕ್ಟರ್, ಮಂಚಿ ಸೆಕ್ಟರ್, ಎಸ್ವೈಎಸ್ ಬಂಟ್ವಾಳ ಸೆಂಟರ್, ಮಾಣಿ ಎಸ್ಜೆಎಂ, ಎಸ್ವೈಎಸ್ ಉಳ್ಳಾಲ ಸೆಂಟರ್, ಸೈಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಸೇರಿದಂತೆ ಹಲವು ಸಂಘಟನೆಗಳು, ನಾಯಕರು ಸಂತಾಪ ಸೂಚಿಸಿದ್ದಾರೆ.







