Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್ ಕಾರ್ಯಕ್ರಮದಲ್ಲೇ ಕುರ್ ಆನ್...

ಟ್ರಂಪ್ ಕಾರ್ಯಕ್ರಮದಲ್ಲೇ ಕುರ್ ಆನ್ ಆಧರಿತ ರಾಜಕೀಯ ಸಂದೇಶ ನೀಡಿದ ಇಮಾಮ್ ಮೊಹಮ್ಮದ್ ಮಜೀದ್

ವಾರ್ತಾಭಾರತಿವಾರ್ತಾಭಾರತಿ22 Jan 2017 5:36 PM IST
share
ಟ್ರಂಪ್ ಕಾರ್ಯಕ್ರಮದಲ್ಲೇ  ಕುರ್ ಆನ್ ಆಧರಿತ ರಾಜಕೀಯ ಸಂದೇಶ ನೀಡಿದ ಇಮಾಮ್ ಮೊಹಮ್ಮದ್ ಮಜೀದ್

ವಾಷಿಂಗ್ಟನ್,ಜ.22: ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಏರ್ಪಡಿಸಲಾಗಿದ್ದ ಅಂತರ್‌ಧರ್ಮೀಯ ಪ್ರಾರ್ಥನಾ ಸಭೆಯಲ್ಲಿ ನಮಾಝ್‌ಗೆ ಕರೆ ‘ಆಝಾನ್’ ನೀಡುತ್ತಾರೆಂದು ನಿರೀಕ್ಷಿಸಲಾಗಿದ್ದ ಇಮಾಮ್ ಮೊಹಮ್ಮದ್ ಮಜೀದ್ ಅವರು ಅದರ ಬದಲು ನೂತನ ಅಧ್ಯಕ್ಷರು ಮತ್ತು ಅವರ ಆಡಳಿತಕ್ಕೆ ಸ್ಪಷ್ಟ ರಾಜಕೀಯ ಸಂದೇಶಗಳನ್ನೊಳಗೊಂಡ ಕುರ್‌ಆನ್‌ನ ಎರಡು ಶ್ಲೋಕಗಳನ್ನು ಪಠಿಸಿದ್ದರು.

ಆಲ್ ಡಲ್ಲಸ್ ಏರಿಯಾ ಮುಸ್ಲಿಮ್ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರಾಗಿರುವ ಮಜೀದ್ ವಾಷಿಂಗ್ಟನ್‌ನಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಆದರೆ ಶನಿವಾರ ಸಂಜೆ ವಾಷಿಂಗ್ಟನ್ ನ್ಯಾಷನಲ್ ಕೆಥೆಡ್ರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಕ್ಕಾಗಿ  ಮುಸ್ಲಿಮ್ ಬಾಂಧವರಿಂದಲೇ ಟೀಕೆಗೆ ಗುರಿಯಾಗಿದ್ದರು.

ಪ್ರಾರ್ಥನೆಯನ್ನು ನಡೆಸಲು ಆಹ್ವಾನಿತರಾಗಿದ್ದ ವಿವಿಧ ಧಾರ್ಮಿಕ ನಾಯಕರಲ್ಲಿ ಮಜೀದ್ ಕೂಡ ಒಬ್ಬರಾಗಿದ್ದರು. ಜಾರ್ಜ್ ವಾಷಿಂಗ್ಟನ್ ಅವರ ಕಾಲದಿಂದಲೇ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾರ್ಯಕ್ರಮದ ಸೂಚಿಯಲ್ಲಿ ಮಜೀದ್ ಅವರು ‘ಆಝಾನ್ ’ (ನಮಾಝಿಗೆ ಕರೆ) ನೀಡಲಿದ್ದಾರೆ ಎಂದು ಹೇಳಲಾಗಿತ್ತು. 

ಆದರೆ ಹೆಚ್ಚಿನ ಅಮೆರಿಕನ್‌ ಮುಸ್ಲಿಮರನ್ನು ಕಡೆಗಣಿಸಲಾಗಿರುವ ಮತ್ತು ಅವರ ಬಗ್ಗೆ ತಪ್ಪುನಂಬಿಕೆಗಳು ಮೂಡಿರುವ,ಜನಾಂಗೀಯ ಮತ್ತು ಧಾರ್ಮಿಕ ಕಂದರ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಸ್ಪಷ್ಟ ರಾಜಕೀಯ ಸೂಚ್ಯರ್ಥಗಳನ್ನು ಹೊಂದಿರುವ,ಕುರ್ ಆನ್‌ನ ಎರಡು ಶ್ಲೋಕಗಳನ್ನು ಪಠಿಸಲು ಮಜೀದ್ ಆಯ್ಕೆ ಮಾಡಿಕೊಂಡಿದ್ದರು.

ಮಜೀದ್ ಅವರು ಟ್ರಂಪ್ ಅವರ ಕುಟುಂಬ ಮತ್ತು ಉಪಾಧ್ಯಕ್ಷ ಮೈಕೇಲ್ ಪೆನ್ಸ್ ಸೇರಿದಂತೆ ಅಧಿಕಾರಸ್ಥರನ್ನುದ್ದೇಶಿಸಿ ಕುರ್ ಆನ್‌ನ ಎರಡು ಶ್ಲೋಕಗಳನ್ನು ಮೊದಲು ಅರೆಬಿಕ್‌ನಲ್ಲಿ ಓದಿ,ಬಳಿಕ ಇಂಗ್ಲಿಷ್‌ನಲ್ಲಿ ಅದರ ಅನುವಾದವನ್ನು ನೀಡಿದರು.

ಅವರು ಓದಿದ್ದ ಮೊದಲ ಶ್ಲೋಕ ಸೂರ ಅಲ್ ಹುಜುರಾತ್ ಅಧ್ಯಾಯದ್ದಾಗಿತ್ತು.

‘‘ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಮತ್ತು ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿದ್ದಾನೆ. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಮತ್ತು ಅರಿವು ಉಳ್ಳವನಾಗಿದ್ದಾನೆ ’’

ಅವರು ಓದಿದ್ದ ಎರಡನೇ ಶ್ಲೋಕ ಸೂರ ಅರ್ರೂಮ್ ಅಧ್ಯಾಯದ್ದಾಗಿತ್ತು.

‘‘ಆಕಾಶ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆಗಳು ಮತ್ತು ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ(ಅಲ್ಲಾಹನ) ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ ’’

ವಾಷಿಂಗ್ಟನ್ ನ್ಯಾಷನಲ್ ಕೆಥೆಡ್ರಲ್‌ನ ಅಧಿಕಾರಿಗಳು ಮಜೀದ್‌ರ ಶ್ಲೋಕ ಪಠಣಕ್ಕೆ ಅನುಮತಿ ನೀಡಿದ್ದರು ಎಂದು ಅವರ ವಕ್ತಾರರು ತಿಳಿಸಿದರು.

ಚುನಾವಣೆಯ ಬಳಿಕ ಮುಸ್ಲಿಮರ ಬಗ್ಗೆ ಬಹಳಷ್ಟನ್ನು ಹೇಳಲಾಗಿದೆ ಮತ್ತು ಮುಸ್ಲಿಮರ ನಿಷ್ಠೆಯ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ದೇವರೇ ನಮ್ಮೆಲ್ಲರನ್ನು ಸೃಷ್ಟಿಸಿದ್ದಾನೆ,ನಾವು ಒಂದಾಗಬೇಕು ಮತ್ತು ಈ ವೈವಿಧ್ಯತೆಯನ್ನು ಗೌರವಿಸಬೇಕು ಎಂಬ ಸಂದೇಶ ರವಾನೆ ಈ ಶ್ಲೋಕಗಳ ಉದ್ದೇಶವಾಗಿದೆ ಎಂದು ಆಲ್ ಡಲ್ಲಸ್ ಏರಿಯಾ ಮುಸ್ಲಿಮ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ರಿಝ್ವಾನ್ ಜಕಾ ಹೇಳಿದರು.

ತನ್ನ ಪ್ರಚಾರ ಅಭಿಯಾನದಲ್ಲಿ ಮುಸ್ಲಿಮರು, ಮೆಕ್ಸಿಕನ್ನರು ಮತ್ತು ಮಹಿಳೆಯರ ವಿರುದ್ಧ ಒರಟು ಭಾಷೆಯನ್ನು ಬಳಸಿದ್ದ ಟ್ರಂಪ್ ಅವರನ್ನು ಆಧರಿಸಿ,ಅವರೊಂದಿಗೆ ಪ್ರಾರ್ಥಿಸಿದ್ದಕ್ಕಾಗಿ ಎಪಿಸ್ಕೋಪಲಿಯನ್ ಕ್ರೈಸ್ತರ ವಿರುದ್ಧವೂ ಟೀಕೆಗಳು ವ್ಯಕ್ತವಾಗಿದ್ದವು.

 ಕೆಥೆಡ್ರಲ್‌ನ ಡೀನ್ ರೆವರಂಡ್ ಮಾರ್ಷಲ್ ಹೊಲೆರಿತ್ ಅವರೂ ‘ನಮ್ಮನ್ನು ಪ್ರತ್ಯೇಕಿಸಿರುವ ಗೋಡೆಗಳನ್ನು ಬೀಳಿಸುವಂತೆ ಮತ್ತು ನಮ್ಮ ಹೃದಯಗಳಲ್ಲಿ ತುಂಬಿಕೊಂಡಿರುವ ಅಹಂಕಾರ ಮತ್ತು ದ್ವೇಷವನ್ನು ನಿವಾರಿಸುವಂತೆ ದೇವರನ್ನು ಕೋರುವ,ದೇಶದಲ್ಲಿಯ ವಿಭಜಿತ ರಾಜಕೀಯ ವಾತಾವರಣವನ್ನು ಬೆಟ್ಟು ಮಾಡುವ ಪ್ರಾರ್ಥನೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಮಜೀದ್ ಅವರು ಹಲವಾರು ವರ್ಷಗಳಿಂದ ವಾಷಿಂಗ್ಟನ್‌ನಲ್ಲಿ ನಡೆಯುವ ಅಂತರ್‌ಧರ್ಮೀಯ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X