Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘ಅನುಚಿತ ದಾಳಿ’ ನಡೆಸುತ್ತಿರುವ ಮಾಧ್ಯಮದ...

‘ಅನುಚಿತ ದಾಳಿ’ ನಡೆಸುತ್ತಿರುವ ಮಾಧ್ಯಮದ ವಿರುದ್ಧ ‘ಖಡಾಖಂಡಿತ’ ಹೋರಾಟ: ಡೊನಾಲ್ಡ್ ಟ್ರಂಪ್ ತಂಡ

ವಾರ್ತಾಭಾರತಿವಾರ್ತಾಭಾರತಿ23 Jan 2017 7:58 PM IST
share
‘ಅನುಚಿತ ದಾಳಿ’ ನಡೆಸುತ್ತಿರುವ ಮಾಧ್ಯಮದ ವಿರುದ್ಧ ‘ಖಡಾಖಂಡಿತ’ ಹೋರಾಟ: ಡೊನಾಲ್ಡ್ ಟ್ರಂಪ್ ತಂಡ

ವಾಶಿಂಗ್ಟನ್, ಜ. 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ‘ಅನುಚಿತ ದಾಳಿಗಳನ್ನು’ ನಡೆಸುತ್ತಿರುವ ಸುದ್ದಿ ಮಾಧ್ಯಮದ ವಿರುದ್ಧ ‘ಖಡಾಖಂಡಿತ’ವಾಗಿ ಹೋರಾಡುವ ಪಣವನ್ನು ರವಿವಾರ ಶ್ವೇತಭವನ ತೊಟ್ಟಿದೆ. ಇದರೊಂದಿಗೆ ಈಗಾಗಲೇ ಇರುವ ಎಣ್ಣೆ-ಸೀಗೆಕಾಯಿ ಸಂಬಂಧವು ಹಾವು-ಮುಂಗುಸಿ ಕಾದಾಟಕ್ಕೆ ತಿರುಗಲು ವೇದಿಕೆ ಸಿದ್ಧವಾದಂತಿದೆ.

ಶನಿವಾರ ಸಿಐಎ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಟ್ರಂಪ್, ತನ್ನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೆರೆದಿದ್ದ ಜನರ ಸಂಖ್ಯೆಯನ್ನು ಮಾಧ್ಯಮಗಳು ಕಡಿಮೆ ಮಾಡಿ ವರದಿ ಮಾಡಿವೆ ಎಂದು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಅದಾದ ಒಂದು ದಿನದ ಬಳಿಕ, ರವಿವಾರ, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ರೀನ್ಸ್ ಪ್ರೈಬಸ್, ಮಾಧ್ಯಮ ವರದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಅವುಗಳು ‘ಟ್ರಂಪ್ ಮೇಲೆ ನಡೆಸಲಾದ ದಾಳಿಗಳು’ ಎಂದು ಬಣ್ಣಿಸಿದರು.

‘‘ವಿಷಯ ಸಭಿಕರ ಗಾತ್ರದ್ದಲ್ಲ. ಒಂದೇ ದಿನದಲ್ಲಿ ಈ ಅಧ್ಯಕ್ಷರ ಮೇಲೆ ದಾಳಿ ನಡೆಸಿ ಅವರ ಕಾನೂನು ಸಿಂಧುತ್ವವನ್ನು ಪ್ರಶ್ನಿಸಲು ನಡೆಸಲಾಗುತ್ತಿರುವ ಪ್ರಯತ್ನಗಳು ಈಗಿನ ವಿಷಯ. ನಾವು ಇದನ್ನು ಸುಮ್ಮನೆ ಕುಳಿತುಕೊಂಡು ಸ್ವೀಕರಿಸುವುದಿಲ್ಲ’’ ಎಂದು ‘ಫಾಕ್ಸ್ ನ್ಯೂಸ್ ಸಂಡೆ’ಯಲ್ಲಿ ಪ್ರೈಬಸ್ ಹೇಳಿದರು.
 ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಪ್ರತಿಮೆಯನ್ನು ಓವಲ್ ಕಚೇರಿಯಿಂದ ತೆರವುಗೊಳಿಸಲಾಗಿದೆ ಎಂಬ ವರದಿಗೆ ಪ್ರೈಬಸ್ ಆಕ್ಷೇಪ ವ್ಯಕ್ತಪಡಿಸಿದರು. ಶುಕ್ರವಾರ ರಾತ್ರಿ ಪ್ರಕಟಗೊಂಡ ವರದಿಯನ್ನು ತಕ್ಷಣ ಸರಿಪಡಿಸಲಾಗಿತ್ತು. ಆದರೆ, ಟ್ರಂಪ್ ಶನಿವಾರ ಟ್ರಂಪ್ ಸಿಐಎ ಕಚೇರಿಯಲ್ಲಿ ವರದಿಗಾರನ ಹೆಸರು ಹೇಳಿ ವರದಿಯನ್ನು ಪ್ರಸ್ತಾಪಿಸಿದರು.

‘‘ನಾವು ಪ್ರತಿ ದಿನ ಖಡಖಂಡಿತ ಹೋರಾಟ ನಡೆಸುತ್ತೇವೆ ಹಾಗೂ ರವಿವಾರಗಳಂದು ಎರಡು ಬಾರಿ ಹೋರಾಡ ನಡೆಸುತ್ತೇವೆ’’ ಎಂದು ಪ್ರೈಬಸ್ ನುಡಿದರು.

ಶುಕ್ರವಾರ ಅಧಿಕಾರ ಸ್ವೀಕಾರ ಸಮಾರಂಭ ನಡೆದ ‘ನ್ಯಾಶನಲ್ ಮಾಲ್’ನ ಚಿತ್ರಗಳಲ್ಲಿ ಸಭಿಕರ ಸಂಖ್ಯೆಯನ್ನು ಕಡಿಮೆ ಎಂಬಂತೆ ಬಿಂಬಿಸಲು ಹಸ್ತಕ್ಷೇಪ ನಡೆಸಲಾಗಿದೆ ಎಂದು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರು ಆರೋಪಿಸಿದರು.

2009ರಲ್ಲಿ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನೆರೆದಿದ್ದ ಪ್ರೇಕ್ಷಕರ ಸಂಖ್ಯೆಗಿಂತ ಟ್ರಂಪ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರ ಸಂಖ್ಯೆಯು ಕಡಿಮೆ ಎಂಬಂತೆ ವಿಹಂಗಮ (ಮೇಲಿನಿಂದ ತೆಗೆದ) ಚಿತ್ರಗಳು ತೋರಿಸಿದ್ದವು.

ಮಹಿಳಾ ಪ್ರತಿಭಟನೆಯೂ ಬೃಹತ್!

ಟ್ರಂಪ್ ವಿರುದ್ಧ ಶನಿವಾರ ನಡೆದ ಮಹಿಳೆಯರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಸಂಖ್ಯೆಯೂ ಟ್ರಂಪ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದವರ ಸಂಖ್ಯೆಗಿಂತ ಹೆಚ್ಚಾಗಿತ್ತು.

ಶನಿವಾರ ಸ್ಥಳೀಯ ಸಮಯ ಬೆಳಗ್ಗಿನ 11 ಗಂಟೆ ಹೊತ್ತಿಗೆ (ಮಹಿಳೆಯರ ಪ್ರತಿಭಟನೆ ನಡೆದ ಸಮಯದಲ್ಲಿ) 2.75 ಲಕ್ಷ ಜನರು ಆಗಮಿಸಿದ್ದಾರೆ ಎಂದು ವಾಶಿಂಗ್ಟನ್ ಸಬ್‌ವೇ ಸಿಸ್ಟಮ್ ವರದಿ ಮಾಡಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ (ಟ್ರಂಪ್ ಅಧಿಕಾರ ಸ್ವೀಕರ ಸಮಾರಂಭದಲ್ಲಿ) 1.93 ಲಕ್ಷ ಮಂದಿ ಸಬ್‌ವೇ ಸಿಸ್ಟಮ್ ಪ್ರವೇಶಿಸಿದ್ದರು ಎಂದು ಅದು ಹೇಳಿದೆ.
2009ರಲ್ಲಿ ನಡೆದ ಒಬಾಮ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ 5.13 ಲಕ್ಷ ಮಂದಿ ವಾಶಿಂಗ್ಟನ್ ಸಬ್‌ವೇ ಸಿಸ್ಟಮ್ ಪ್ರವೇಶಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X