ಮಂಗಳೂರು, ಜ.25: ನಗರದ ಮೈದಾನ್ ಕ್ರಾಸ್ ರಸ್ತೆಯ ಬಾರೊಂದರ ಬಳಿ ಇರ್ಶಾದ್ ಎಂಬ ವ್ಯಕ್ತಿಗೆ ಜ.24ರ ರಾತ್ರಿ 11:30ಕ್ಕೆ ಮನು ಮತ್ತು ತೌಸೀಫ್ ಎಂಬವರು ಚೂರಿಯಿಂದ ಇರಿದು ಗಾಯಗೊಳಿಸಿದ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕೃತ್ಯಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.