ಅತ್ತಾವರ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು
ಮಂಗಳೂರು, ಜ.25: ನಗರದ ಅತ್ತಾವರದ ಕಟ್ಟಡವೊಂದಕ್ಕೆ ಬಣ್ಣ ಬಳಿಯುತ್ತಿದ್ದಾಗ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮಂಗಳೂರಿನ ರಮೇಶ್ (18) ಮೃತಪಟ್ಟ ಯುವಕ.
ಈತ ನೇತುಹಾಕಲಾದ ಹಗ್ಗಕ್ಕೆ ಕಟ್ಟಿದ ಹಲಗೆಯ ಮೇಲೆ ನಿಂತು ಕಟ್ಟಡದ ಮೂರನೆ ಮಹಡಿಗೆ ಬಣ್ಣ ಬಳಿಯುತ್ತಿದ್ದಾಗ ಆಯತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಪ್ರಯೋಜನವಾಗಲಿಲ್ಲ.
ಕೆಲಸದ ವೇಳೆ ಸುರಕ್ಷತೆಯ ನಿರ್ಲಕ್ಷ ವಹಿಸಿರುವುದೇ ಈ ಘಟನೆಗೆ ಕಾರಣ ಎಂದು ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
Next Story





