ಸರಕಾರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು, ಜ.27: ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ಕ್ರಾಸ್ ರಥಬೀದಿ ಘಟಕ, ರೆಡ್ರಿಬ್ಬನ್, ರಾ.ಸೇ.ಯೋ, ರೋವರ್ಸ್ ಹಾಗೂ ರೆಂಜರ್ಸ್ ಹಾಗೂ ಲಯನ್ಸ್ ಕ್ಲಬ್ ಬೆಂದೂರುವೆಲ್ ಇವುಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಸಂದರ್ಭ ಲ. ಶಶಿಧರ್ ಮಾರ್ಲ, ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಸಿ., ರೆಡ್ಕ್ರಾಸ್ ಘಟಕಾಧಿಕಾರಿ ಮಹೇಶ್ ಕೆ. ಬಿ., ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶಿವರಾಮ್, ವಿಜಯ ಅಂಥನಿ, ಲ. ನಾಗೇಶ್ಕುಮಾರ್ ಎನ್.ಜೆ., ಲ. ಕೇಶವ್ ಮತ್ತಿತರರು ಪಾಲ್ಗೊಂಡಿದ್ದರು.
Next Story





