Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ...

ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ ಉದ್ದದ ಲಾಡಿಹುಳು!

ವಾರ್ತಾಭಾರತಿವಾರ್ತಾಭಾರತಿ28 Jan 2017 12:18 PM IST
share
ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ ಉದ್ದದ ಲಾಡಿಹುಳು!

ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ ಉದ್ದದ ಲಾಡಿ ಹುಳು !

 ಹೊಸದಿಲ್ಲಿ, ಜ.28: ಆರು ಅಡಿಗಿಂತಲೂ ಹೆಚ್ಚು ಉದ್ದದ ಲಾಡಿ ಹುಳುವೊಂದನ್ನು  ಹೊಸದಿಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಎಂಡ್ ಬೈಲಿಯರಿ ಸಾಯನ್ಸಸ್‌ ಇಲ್ಲಿನ ವೈದ್ಯರು ರೋಗಿಯೊಬ್ಬನ ಬಾಯಿಯಿಂದ ಹೊರ ತೆಗೆದಿದ್ದಾರೆಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ ಪ್ರಕಟಿಸಿದ ವರದಿಯೊಂದು ತಿಳಿಸಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬನಿಗೆ ವೈದ್ಯರು 2014ರಲ್ಲಿ ಕೊಲೊನೊಸ್ಕೊಪಿ ನಡೆಸಿದ್ದರು. ಆತನ ವೈದ್ಯಕೀಯ ವರದಿಗಳು ಆತನ ರಕ್ತದಲ್ಲಿ ಹಿಮೊಗ್ಲೋಬಿನ್ ಕಡಿಮೆ ಇರುವುದನ್ನು ಪತ್ತೆ ಹಚ್ಚಿದ್ದವು. ಡಾ.ಸಿರಿಯಾಕ್ ಫಿಲಿಪ್ಸ್ ಎಂಬ ವೈದ್ಯರು ಕೊಲೊನೊಸ್ಕೊಪಿ ನಡೆಸುತ್ತಿದ್ದಾಗ ಹೊಟ್ಟೆಯಲ್ಲಿ ಹುಳವಿರುವುದನ್ನು ಪತ್ತೆ ಹಚ್ಚಿದ್ದರು. ಕೂಡಲೇ ವೈದ್ಯರು ಎಂಡೊಸ್ಕೊಪಿ ಪ್ರಕ್ರಿಯೆ ನಡೆಸಿದ್ದರು. ಇದರಲ್ಲಿ ಕ್ಯಾಮರಾ ಮೂಲಕ ವೈದ್ಯರು ವ್ಯಕ್ತಿಯ ಕರುಳನ್ನು ವೀಕ್ಷಿಸಿದಾಗ ಸಣ್ಣ ಕರುಳಿನಲ್ಲಿ ಉದ್ದದ ಹುಳುವಿರುವುದು ತಿಳಿದು ಬಂದಿತ್ತು.

ನಂತರ ವ್ಯಕ್ತಿಗೆ ಅನಸ್ತೇಶಿಯಾ ನೀಡಿ ಸಂಸ್ಥೆಯ ವೈದ್ಯರ ತಂಡವು ಆತನ ಬಾಯಿಯ ಮುಖಾಂತರ ನಾಲ್ಕು ಅಡಿಗೂ ಹೆಚ್ಚಿನ ಉದ್ದದ ಲಾಡಿಹುಳುವನ್ನು ಫೊರ್ಸೆಪ್ಸ್ ಸಹಾಯದಿಂದ ಹೊರಗೆಳೆದರು. ಈ ಪ್ರಕ್ರಿಯೆಗೆ ಒಂದು ಗಂಟೆ 15 ನಿಮಿಷ ತಗುಲಿತ್ತು. ಹುಳದ ಉದ್ದವನ್ನು ಪರೀಕ್ಷಿಸಿದಾಗ ಅದು 6.1 ಅಡಿಯಿರುವುದು ತಿಳಿದು ಬಂದಿತ್ತು. ಇಷ್ಟು ಉದ್ದದ ಲಾಡಿ ಹುಳುವನ್ನು ತಾನು ನೋಡಿಯೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹುಳುವನ್ನು ವೈದ್ಯರು ತಾಯಿನಿಯಾ ಸೊಲಿಯಂ ಅಥವಾ ಪೋರ್ಕ್ ಟೇಪ್ ವರ್ಮ್ ಎಂದು ಗುರುತಿಸಿದ್ದಾರೆ.

ನಂತರ ರೋಗಿಗೆ ಹುಳುಗಳನ್ನು ನಾಶಪಡಿಸುವ ಔಷಧಿ ನೀಡಲಾಯಿತಲ್ಲದೆ, ಆತ ಹಾಗೂ ಆತನ ಕುಟುಂಬ ಮುಂದಿನ ಆರು ತಿಂಗಳುಗಳ ಕಾಲ ನಿಯಮಿತವಾಗಿ ಹುಳು ನಿರೋಧಕ ಔಷಧಿ ಸೇವಿಸುವಂತೆ ಸಲಹೆ ನೀಡಲಾಯಿತು. ಅಷ್ಟೇ ಅಲ್ಲದೆ ಹಂದಿ ಮಾಂಸವನ್ನು ತಿನ್ನುವವರಾಗಿದ್ದರೆ ಚೆನ್ನಾಗಿ ಬೇಯಿಸಿ ತಿನ್ನುವಂತೆ ಹಾಗೂ ಕೊಳಕು ಪ್ರದೇಶಗಳಿಂದ ದೂರವುಳಿಯುವಂತೆಯೂ ಸಲಹೆ ನೀಡಲಾಗಿದೆ.

ಲಾಡಿಹುಳುವಿನ ತತ್ತಿ ಆಹಾರ ರೂಪದಲ್ಲಿ ಹೊಟ್ಟೆ ಸೇರಿದರೆ ಇಂತಹ ಸಮಸ್ಯೆಯುಂಟಾಗುತ್ತದೆ ಹಾಗೂ ಅದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಸಿಸ್ಟಿಸೆರ್ಸೋಸ್ ಎನ್ನಲಾಗುತ್ತದೆ. ಮಲಿನ ನೀರು, ಆಹಾರ ಅಥವಾ ಮಲದಿಂದ ಈ ಸಮಸ್ಯೆಯುಂಟಾಗುತ್ತದೆ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಪ್ರಕಾರ, ವಯಸ್ಕ ಹುಳುವೊಂದು ಸಾಧಾರಣವಾಗಿ 2 ಮೀಟರಿನಿಂದ 7 ಮೀಟರ್ ಉದ್ದವಿರುತ್ತದೆ. ಕೆಲವೊಮ್ಮೆ ಎಂಟು ಮೀಟರಿಗೂ ಹೆಚ್ಚು ಉದ್ದದ ಹುಳಗಳು ಪತ್ತೆಯಾಗಿದ್ದೂ ಉಂಟು ಎಂದು ಸಂಸ್ಥೆ ಹೇಳಿಕೊಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X