Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಜೀವ್ ಹತ್ಯೆ ಸಾಧ್ಯತೆಯನ್ನು 5 ವರ್ಷ...

ರಾಜೀವ್ ಹತ್ಯೆ ಸಾಧ್ಯತೆಯನ್ನು 5 ವರ್ಷ ಮೊದಲೇ ಊಹಿಸಿದ್ದ ಸಿಐಎ

ವಾರ್ತಾಭಾರತಿವಾರ್ತಾಭಾರತಿ29 Jan 2017 7:19 PM IST
share
ರಾಜೀವ್ ಹತ್ಯೆ ಸಾಧ್ಯತೆಯನ್ನು 5 ವರ್ಷ ಮೊದಲೇ ಊಹಿಸಿದ್ದ ಸಿಐಎ

ಹೊಸದಿಲ್ಲಿ, ಜ.29: ರಾಜೀವ್ ಗಾಂಧಿ ಹತ್ಯೆಯಾದಲ್ಲಿ ಅಥವಾ ಭಾರತೀಯ ರಾಜಕೀಯದಿಂದ ಹಠಾತ್ ನಿರ್ಗಮಿಸಿದಲ್ಲಿ ಏನಾಗಬಹುದೆಂಬ ಬಗ್ಗೆ ಅವರು ಹತ್ಯೆಯಾಗುವುದಕ್ಕೆ ಐದು ವರ್ಷ ಮೊದಲೇ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಅತ್ಯಂತ ವಿಸ್ತೃತವಾದ ಹಾಗೂ ಕೂಲಂಕಶವಾದ ವರದಿಯನ್ನು ಸಿದ್ಧಪಡಿಸಿತ್ತು ಎಂದು ಇತ್ತೀಚಿನ ಬಯಲಿಗೆ ಬಂದ ವರದಿಯೊಂದು ತಿಳಿಸಿದೆ.

        1986ರ ಮಾರ್ಚ್‌ನಲ್ಲಿ ‘‘ ರಾಜೀವ್ ಆನಂತರದ ಭಾರತ’’ಎಂಬ ವರದಿಯನ್ನು ತಯಾರಿಸಿತ್ತು. ತನ್ನ ಹಿರಿಯ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಸಿದ್ಧಪಡಿಸಲಾಗಿದ್ದ ವರದಿಯನ್ನು ಅದು ಇತ್ತೀಚೆಗೆ ಬಹಿರಂಗಪಡಿಸಿತ್ತು.

ಪ್ರಧಾನಿ ರಾಜೀವ್‌ಗಾಂಧಿಯವರ ಅಧಿಕಾರಾವಧಿ 1989ರಲ್ಲಿ ಮುಗಿಯುವ ಮೊದಲೇ ಅವರು ಹತ್ಯೆಯಾಗುವ ಸಾಧ್ಯತೆಯಿದೆ ಎಂದು ವರದಿಯ ಪ್ರಥಮ ವಾಕ್ಯದಲ್ಲೇ ಹೇಳಲಾಗಿದೆ. ಆದಾಗ್ಯೂ, ಆನಂತರದ ವರದಿಯು, ರಾಜೀವ್ ಹತ್ಯೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆಂದು ಹೇಳಿದೆ.

 ಐದು ವರ್ಷಗಳ ಆನಂತರ ರಾಜೀವ್‌ಗಾಂಧಿ, ತಮಿಳುನಾಡಿನ ಶ್ರೀಪೆರುಂಬದೂರಿನಲ್ಲಿ 1991ರ ಮೇ 21ರಂದು ಹತ್ಯೆಯಾದರು.

  ರಾಜೀವ್ ಇಲ್ಲದೆ ಭಾರತದ ರಾಜಕೀಯ ನಾಯಕತ್ವದಲ್ಲಿ ಹಠಾತ್ ಬದಲಾವಣೆಯಾದಲ್ಲಿ ಆಂತರಿಕ ಹಾಗೂ ವಿದೇಶಿ ರಾಜಕೀಯ ಸನ್ನಿವೇಶವು ಯಾವ ರೂಪವನ್ನು ತಾಳುವುದೆಂಬ ಬಗ್ಗೆಯೂ ವರದಿಯು ವಿಶ್ಲೇಷಿಸಿದೆ. ರಾಜೀವ್ ಹತ್ಯೆಯು ಅಮೆರಿಕ, ರಶ್ಯ ಮತ್ತಿತರ ದೇಶಗಳ ಜೊತೆಗೆ ಭಾರತದ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದಾಗಿ ಅದು ಹೇಳಿದೆ. ಆ ಸಮಯದಲ್ಲಿ ವಿವಿಧ ತೀವ್ರವಾದಿ ಗುಂಪುಗಳಿಂದ ರಾಜೀವ್ ಜೀವಕ್ಕೆ ಅಪಾಯವಿದ್ದು, ಅವರ ಹತ್ಯೆಯಾಗುವ ಸಾಧ್ಯತೆಯಿರುವುದಾಗಿಯೂ ವರದಿ ಹೇಳಿತ್ತು.

ಒಂದು ವೇಳೆ ರಾಜೀವ್ ಗಾಂಧಿ ಸಿಖ್ಖ್ ಅಥವಾ ಕಾಶ್ಮೀರಿಯಿಂದ ಹತ್ಯೆಯಾದಲ್ಲಿ ವ್ಯಾಪಕವಾದ ಕೋಮುಗಲಭೆ ಭುಗಿಲೇಳುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ.

ರಾಜೀವ್‌ರ ‘ಹಠಾತ್ ನಿರ್ಗಮಿಸಿ’ದಲ್ಲಿ ಪಿ.ವಿ.ನರಸಿಂಹರಾವ್ ಅಥವಾ ವಿ.ಪಿ.ಸಿಂಗ್, ಹಂಗಾಮಿ ಉತ್ತರಾಧಿಕಾರಿಗಳಾಗುವ ಸಾಧ್ಯತೆಯಿದೆಯೆಂದು ವರದಿ ಅಭಿಪ್ರಾಯಿಸಿತ್ತು. 1991ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿ ನೇಮಕಗೊಂಡಿದ್ದರು.

ರಾಜೀವ್ ಅವರು ಮತಾಂಧ ಹಿಂದುವಲ್ಲದೆ, ರೋಷತಪ್ತ ಕಾಶ್ಮೀರಿ ಮುಸ್ಲಿಮರು ಅಥವಾ ಸಿಖ್ಖ್ ಭಯೋತ್ಪಾದಕರಿಂದ ಹತ್ಯೆಯಾಗುವ ಸಾಧ್ಯತೆ ಬಹಳಷ್ಟಿದೆಯೆಂದು ಅದು ಊಹಿಸಿತ್ತು.

 ಆದಾಗ್ಯೂ ಈ ವಿಶ್ಲೇಷಣಾ ವರದಿಯಲ್ಲಿ ಮಹತ್ವದ ಭಾಗವೊಂದನ್ನು ತೆಗೆದುಹಾಕಲಾಗಿದ್ದು, ಅದು ಶ್ರೀಲಂಕಾದ ಎಲ್ಟಿಟಿಇ ತಮಿಳು ಉಗ್ರರಿಗೆ ಸಂಬಂಧಿಸಿದ್ದೇ ಎಂಬುದು ಸ್ಪಷ್ಟವಾಗಿಲ್ಲ. ಎಲ್ಟಿಟಿಇ ಉಗ್ರರು ಹಾಗೂ ಶ್ರೀಲಂಕಾ ಸರಕಾರದ ಮಧ್ಯೆ ಭುಗಿಲೆದ್ದ ಸಂಘರ್ಷವನ್ನು ಬಗೆಹರಿಸುವಲ್ಲಿ ರಾಜೀವ್ ಅವರು ನಡೆಸಿದ ಸಂಧಾನ ಪ್ರಯತ್ನಗಳ ಬಗ್ಗೆ ವರದಿಯ ಒಂದು ಅಧ್ಯಾಯವು ವಿವರವಾಗಿ ವಿಶ್ಲೇಷಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X