Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೈಕೋರ್ಟ್ ತೀರ್ಪು : ಹಿಂಭಾಗದಲ್ಲಿ ಪಟ್ಟಿ...

ಹೈಕೋರ್ಟ್ ತೀರ್ಪು : ಹಿಂಭಾಗದಲ್ಲಿ ಪಟ್ಟಿ ಇಲ್ಲದ ಮಹಿಳೆಯರ ಪಾದರಕ್ಷೆ ಚಪ್ಪಲಿಯಲ್ಲ

ವಾರ್ತಾಭಾರತಿವಾರ್ತಾಭಾರತಿ29 Jan 2017 8:55 PM IST
share
ಹೈಕೋರ್ಟ್ ತೀರ್ಪು : ಹಿಂಭಾಗದಲ್ಲಿ ಪಟ್ಟಿ ಇಲ್ಲದ ಮಹಿಳೆಯರ ಪಾದರಕ್ಷೆ ಚಪ್ಪಲಿಯಲ್ಲ

ಹೊಸದಿಲ್ಲಿ, ಜ.29: ಹಿಂಭಾಗದಲ್ಲಿ ಪಟ್ಟಿಯಿಂದ ಕಟ್ಟಲ್ಪಡದ ಮಹಿಳೆಯರ ಪಾದರಕ್ಷೆಯನ್ನು ಚಪ್ಪಲಿ ಎನ್ನಲಾಗದು. ಅದನ್ನು ಸ್ಯಾಂಡಲ್ ಎಂದು ಕರೆಯಬಹುದು ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.

ಸ್ಯಾಂಡಲ್‌ಗಳನ್ನು ರಫ್ತು ಮಾಡುವಾಗ ಶೇ.10ರಷ್ಟು ರಫ್ತು ಸುಂಕ ತೆರಬೇಕು. ಆದರೆ ಚಪ್ಪಲ್‌ಗಳನ್ನು ರಫು ಮಾಡುವವರು ಶೇ.5ರಷ್ಟು ರಫ್ತು ಸುಂಕ ಪಾವತಿಸಿದರೆ ಸಾಕು ಎಂಬ ನಿಯಮದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಈ ತೀರ್ಪಿಗೆ ಮಹತ್ವವಿದೆ.

    ಪಾದರಕ್ಷೆ ರಫ್ತು ಮಾಡುವ ಓರ್ವ ಉತ್ಪಾದಕನಿಗೆ ವಿಧಿಸಲಾಗಿದ್ದ ಶೇ.10 ರಫ್ತು ಸುಂಕ ವನ್ನು ಮರು ಪಾವತಿಗೆ ನಿರಾಕರಿಸಿದ್ದ ಸರಕಾರ, ಆತ ರಫ್ತು ಮಾಡಿದ್ದ ಪಾದರಕ್ಷೆಗಳಿಗೆ ಹಿಂಬದಿಯಲ್ಲಿ ಬಿಗಿದು ಕಟ್ಟುವ ಪಟ್ಟಿ ಇಲ್ಲದ ಕಾರಣ ಅವು ಚಪ್ಪಲಿಯಾಗಿದೆ ಎಂದು ತಿಳಿಸಿತ್ತು. ಆದರೆ ಸರಕಾರದ ನಿರ್ಧಾರವನ್ನು ತಳ್ಳಿ ಹಾಕಿದ್ದ ಹೈಕೋರ್ಟ್, ಇವು ಚಪ್ಪಲಿಗಳಲ್ಲ. ಸ್ಯಾಂಡಲ್ ಎಂದು ತೀರ್ಪು ನೀಡಿದೆ.

   ಚೆನ್ನೈ ಮೂಲದ ಪಾದರಕ್ಷೆ ಉತ್ಪಾದಕರಾದ ವಿಶಾಲ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯೊಂದು 2003ರ ಮೇ ತಿಂಗಳಿನಲ್ಲಿ ‘ಮಹಿಳೆಯರ ಚರ್ಮದ ಸ್ಯಾಂಡಲ್’ ಎಂಬ ಹೆಸರಿನಲ್ಲಿ ಸರಕನ್ನು ರಫ್ತು ಮಾಡಿತ್ತು ಮತ್ತು ಶೇ.10ರಷ್ಟು ರಫ್ತು ಸುಂಕ ಮರುಪಾವತಿಗೆ ಕೋರಿಕೆ ಸಲ್ಲಿಸಿತ್ತು. ಆದರೆ ಹಿಂಬದಿಯಲ್ಲಿ ಬಿಗಿದು ಕಟ್ಟುವ ಪಟ್ಟಿ ಇಲ್ಲದ ಪಾದರಕ್ಷೆ ಸ್ಯಾಂಡಲ್ ಅಲ್ಲ, ಅದು ಚಪ್ಪಲ್ ಎಂದು ಸೀಮಾ ಸುಂಕ ಇಲಾಖೆ , ಈ ಕೋರಿಕೆಯನ್ನು ತಳ್ಳಿ ಹಾಕಿತ್ತು. ಈ ವಿಷಯವನ್ನು ಸಂಸ್ಥೆಯು ಚರ್ಮ ರಫ್ತು ಸಮಿತಿಯ ಗಮನಕ್ಕೆ ತಂದಿತ್ತು. ಈ ಸರಕು ಸ್ಯಾಂಡಲ್ ಹೌದು ಎಂದು ಸಮಿತಿ ಸ್ಪಷ್ಟಪಡಿಸಿತ್ತು.

  ಇದನ್ನು ಆಕ್ಷೇಪಿಸಿದ ಸೀಮಾ ಸುಂಕ ಇಲಾಖೆ, ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆಯ ಅಭಿಪ್ರಾಯ ಕೇಳಿತ್ತು. ಈ ಸಂಸ್ಥೆ ಸೀಮಾ ಸುಂಕ ಇಲಾಖೆಯ ವಾದವನ್ನು ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ , ಈಗಾಗಲೇ ಮರು ಪಾವತಿಸಿರುವ ಶೇ.10ರಷ್ಟು ಸುಂಕವನ್ನು ದಂಡ ಸಹಿತ ಮರಳಿಸುವಂತೆ ಇಲಾಖೆಯು ಪಾದರಕ್ಷೆ ಉತ್ಪಾದನಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ಈ ನೋಟಿಸನ್ನು ಪ್ರಶ್ನಿಸಿ, ಪಾದರಕ್ಷೆ ಉತ್ಪಾದನಾ ಸಂಸ್ಥೆ ದಿಲ್ಲಿ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X