ಎರಡೂ ಕಿಡ್ನಿ ವೈಫಲ್ಯಕ್ಕೊಳಗಾದ ವ್ಯಕ್ತಿಯಿಂದ ನೆರವಿಗಾಗಿ ಕೋರಿಕೆ
ಬಿಪಿಎಲ್ ಕಾರ್ಡ್ ಕೊಡದ ಅಧಿಕಾರಿಗಳು

ಚಿಕ್ಕಮಗಳೂರು, ಜ.29: ನಗರದ ಶಂಕರಪುರದ ನಿವಾಸಿ ಎಲ್.ಮಂಜುನಾಥ್(37) ಎರಡು ಕಿಡ್ನಿಗಳ ವೈಫಲ್ಯದ ಪರಿಣಾಮ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ವೆಚ್ಚ ಭರಿಸಲಿಕ್ಕಾಗದೇ ಹೈರಾಣಾಗಿದ್ದು,ದಾನಿಗಳ ಸಹಾಯ ಹಸ್ತಕ್ಕಾಗಿ ಕಾದಿದ್ದಾರೆ.
ಕಡು ಬಡತನದಿಂದ ಜೀವನ ನಡೆಸಲು ಪರದಾಡುತ್ತಿರುವ ಅವರ ಕುಟುಂಬ ಬೀದಿ ಪಾಲಾಗುವ ಆತಂಕದಲ್ಲಿದೆ. ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್ ಆಘಾತದಿಂದ ಸಮಸ್ಯೆ ಎದುರಿಸುವಂತಾಯಿತು. ರಕ್ತದ ಒತ್ತಡದಿಂದ ಬಳಲಿದ ಅವರು ಹಾಸನದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ಎರಡು ಕಿಡ್ನಿ ವೈಫಲ್ಯಗೊಂಡಿರುವುದು ತಿಳಿಯಿತು. ಸದ್ಯದ ಪರಿಸ್ಥಿತಿಯಲ್ಲಿ ವಾರಕ್ಕೆರಡು ಬಾರಿ ರಕ್ತದ ಚುಚ್ಚುಮದ್ದಿನ ಜೊತೆಗೆ ಡಾಲಿಸಿಸ್ ಮಾಡಿಸಬೇಕಾದರೆ ರೂ. 6,000 ಹಣ ಬೇಕು.ಬದುಕಲು ಚಿಕಿತ್ಸೆಯ ಆವಶ್ಯಕತೆ ಇರುವುದರಿಂದ ಸಾರ್ವಜನಿಕರಿಂದ ಅಥವಾ ದಾನಿಗಳಿಂದ ಸಹಾಯ ಹಸ್ತ ಚಾಚಿ ನಿಂತಿದ್ದಾರೆ.
ಒಂದು ಕಡೆ 70 ವರ್ಷದ ವೃದ್ಧ ತಂದೆ ಪಾರ್ಶ್ವ ವಾಯು ಪೀಡಿತರಾಗಿದ್ದು,ಕೆಲಸ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ.ವಯಸ್ಸಾದ ತಾಯಿಯ ಜೊತೆಗೆ ಹೆಂಡತಿ ಸಹಿತ 8ವರ್ಷದ ಮಗಳು, 18 ತಿಂಗಳ ಮಗಳ ಜವಾಬ್ದಾರಿ ಮಂಜುನಾಥ್ ಹೆಗಲಲ್ಲಿದೆ. ತಮ್ಮ ಚಿಕಿತ್ಸೆಗೆ ಹಣಕಾಸು ಹೊಂದಿಸಲಿಕ್ಕಾಗಿ ಆಟೊ ಮಾರಿದ್ದಾರೆ.
ಕಿಡ್ನಿ ವೈಫಲ್ಯಕ್ಕೊಳಗಾದವರು ಡಯಾಲಿಸಿಸ್ ಮಾಡಿಸಬೇಕಾದರೆ 2ತಿಂಗಳ ಮುಂಚೆ ನೋಂದಣಿ ಮಾಡಿಸಬೇಕು.ಹಾಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಸತ್ತಲ್ಲಿ ಅವರ ತೆರವಾದ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಸಿಗುತ್ತದೆ. ಆದ್ದರಿಂದ ಸದ್ಯಕ್ಕೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಮಂಜುನಾಥ್ ಕಿಡ್ನಿ ಜೊಡಣೆಗೆ ಲಕ್ಷಾಂತರ ರೂ.ಗಳ ಖರ್ಚು ಭರಿಸುವ ಶಕ್ತಿಯಂತೂ ಕಡು ಬಡತನದ ಬೇಗೆಯಲ್ಲಿ ಒ ದ್ದಾಡುತ್ತಿರುವ ಕುಟುಂಬಕ್ಕಿಲ್ಲ. ಈ ಹಂತದಲ್ಲಿ ದಾನಿಗಳು ತಮ್ಮ ಕೈಲಾದಷ್ಟು ಮಂಜುನಾಥ್ ಅವರ ಪತ್ನಿ ಅರ್.ಮೀನಾಕ್ಷಿಯವರ ಎಸ್ಬಿ ಖಾತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಚಿಕ್ಕಮಗಳೂರು ಅಂಬೇಡ್ಕರ್ ರಸ್ತೆ ಶಾಖೆ ಉಳಿತಾಯ ಖಾತೆ ನಂ: 64204885112,ಐಊಖಇ ್ಚಟಛಿ:ಖಆಋ್ಗಿ0041085ಗೆ ಸಂದಾಯ ಮಾಡಬಹುದಾಗಿದೆ. ಅಗತ್ಯ ಬಿದ್ದರೆ ದೂರವಾಣಿ ಸಂಖ್ಯೆ: 9663095457, 9901551131 ನ್ನು ಸಂಪರ್ಕಿಸಲು ಮಂಜುನಾಥ್ ಪತ್ನಿ ಮನವಿ ಮಾಡಿಕೊಂಡಿದ್ದಾರೆ.
ಡಯಾಲಿಸೀಸ್ ಮಾಡಿಸಲು ಬಿಪಿಎಲ್ ಕಾರ್ಡ್ ಇದ್ದರೆ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 100 ರೂ. ನೀಡಬೇಕು. ಎಪಿಎಲ್ ಕಾರ್ಡ್ ಇದ್ದರೆ 400 ರೂ. ನೀಡಬೇಕು.
ಇವರಿಗೆ ಆ ಎರಡೂ ಕಾರ್ಡ್ಗಳ ಭಾಗ್ಯ ಇನ್ನೂ ದೊರಕದಿರುವುದು ಆತಂಕ ತಂದಿದೆ.
ಬಡತನ ರೇಖೆಗಿಂತ ಕೆಳಗಿನವರಿಗೆ ಲಭ್ಯವಾಗುವ ಕಾರ್ಡ್ಗೆ ಅರ್ಜಿ ಸಲ್ಲಿಸಿ ಈ ತನಕ ಆಹಾರ ಇಲಾಖೆಗೆ ಅಲೆದಲೆದು ಸುಸ್ತಾಗಿದ್ದಾರೆ.ಆದ್ದರಿಂದ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಮಂಜುನಾಥ್ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ನ್ನು ಒದಗಿಸಬೇಕು ಜೆ.ಸತ್ಯನಾರಾಯಣ, ಸಾಮಾಜಿಕ ಕಾರ್ಯಕರ್ತ,ಚಿಕ್ಕಮಗಳೂರು







