ಗ್ರಾಮಸ್ಥರಿಂದ ತಡೆ: ಪ್ರತಿಭಟನೆ
ಅರಣ್ಯ ಇಲಾಖೆಯಿಂದ ಗಡಿ ಗುರುತು ನಿರ್ಮಾಣ
ಸುಬ್ರಹ್ಮಣ್ಯ, ಜ.31: ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಕುಂಬರಕೇರಿ ಎಂಬಲ್ಲಿ ಅರಣ್ಯ ಇಲಾಖೆ ಏಕಾಏಕಿ ಕಂದಕ ನಿರ್ಮಾಣ ಮಾಡಿ ಗಡಿ ಗುರುತು ಮಾಡುವ ವೇಳೆ ಗ್ರಾಮಸ್ಥರು ಕಂದಕ ಮಾಡದಂತೆ ಜೆಸಿಬಿಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಈ ಸಂದರ್ಭ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿವಾದ ಏರ್ಪಟ್ಟು ಸ್ವಲ್ಪಸಮಯಗಳ ಕಾಲ ಬಿಗುವಿನ ವಾತಾವರಣ ಉಂಟಾಗಿದೆ ಎಂದು ತಿಳಿದು ಬಂದಿದೆ. ವಲಯಾರಣ್ಯಾಕಾರಿ ಪ್ರಶಾಂತ್ ಪೈ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
ಕುಂಬರಕೇರಿ ಪರಿಸರದಲ್ಲಿ ಸುಮಾರು 150 ಕುಟುಂಬಸ್ಥರು ಕಳೆದ 40ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಇವರು ಕೃಷಿಭೂಮಿ ಮತ್ತು ಮನೆಯನ್ನು ಹೊಂದಿದ್ದು, ಜಾಗದ ಪಹಣಿಪತ್ರ ಇದೆ. ಹೀಗಿದ್ದರೂ ಅರಣ್ಯ ಇಲಾಖೆ ಏಕಾಏಕಿ ಸಂಬಂಧಪಟ್ಟ ಗ್ರಾಮಸ್ಥರಿಗೆ ಹಾಗೂ ಸ್ಥಳಿಯ ಪಂಚಾಯತ್ಗೆ ಯಾವುದೇ ಮಾಹಿತಿ ನೀಡದೆ ರೈತರ ಜಾಗದಲ್ಲಿ ಕಂದಕ ನಿರ್ಮಾಣ ಮಾಡುವುದನ್ನು ವಿರೋಸಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಮಂಗಳವಾರ ಕೃಷಿಕರೊಬ್ಬರ ಮನೆ ಹಾಗೂ ಮೂವರು ರೈತರ ಕೃಷಿಭೂಮಿಯಲ್ಲಿ ಕಂದಕ ನಿರ್ಮಾಣ ಮಾಡಲು ಹೊರಟಾಗ ಪ್ರತಿಭಟನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಲಾಯಿತು. ಈ ಸಂದರ್ಭದಲ್ಲಿ ರೈತರ ಪರವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಮಾತನಾಡಿದರು. ಅಲ್ಲದೆ ತಕ್ಷಣವೇ ವಲಯಾರಣ್ಯಾಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಸ್ಥಳಕ್ಕೆ ಆಗಮಿಸಿದ ವಲಯಾರಣ್ಯಾಕಾರಿ ಮುಂದಿನ ದಿನಗಳಲ್ಲಿ ರೈತರ ಕೃಷಿ ಭೂಮಿಗೆ ಹಾಗೂ ಮನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಂದಕ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ಈ ಸಂದರ್ಭ ದೇವಚಳ್ಳ ಗ್ರಾಪಂ ಅಧ್ಯಕ್ಷ ದಿವಾಕರ ಮುಂಡೋಡಿ ಹಾಗೂ ಸದಸ್ಯರು, ಅರಣ್ಯ ಇಲಾಖಾಕಾರಿಗಳು, ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಇಲಾಖೆಯು ಗಡಿಗುರುತು ಮಾಡುವ ವಿಚಾರ ಒಳ್ಳೆಯದು. ಆದರೆ ಈ ಕಾಮಗಾರಿ ಸಂದರ್ಭ ಹಲವಾರು ವರ್ಷಗಳಿಂದ ವಾಸವಾಗಿರುವ ರೈತರಿಗೆ ಯಾವುದೇ ಸಮಸ್ಯೆಯಾಗಬಾರದು. ಅಲ್ಲದೆ ಅವರು ವಾಸಿಸುತ್ತಿರುವ ಮನೆ ಮತ್ತು ಅವರ ಕೃಷಿಭೂಮಿಗೆ ಧಕ್ಕೆ ಆಗದಂತೆ ಅರಣ್ಯ ಇಲಾಖೆ ಗಡಿ ಗುರುತು ಮಾಡುವ ಸಂದರ್ಭದಲ್ಲಿ ನಿಗಾ ವಹಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ವೇದಿಕೆಯು ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲು ಸಿದ್ಧ.
ಕಿಶೋರ್ ಶಿರಾಡಿ
ಮಲೆನಾಡು ಜನಹಿರಕ್ಷಣಾ ವೇದಿಕೆ ಸಂಚಾಲಕ







