ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಯಾವುದೇ ತೆರಿಗೆ ಇಲ್ಲ
ಕೇಂದ್ರ ಬಜೆಟ್ Live

ಹೊಸದಿಲ್ಲಿ, ಫೆ.1: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 2017-18ನೆ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ ಇಂದು ಮಂಡಿಸಿದರು.ಸಚಿವ ಜೇಟ್ಲಿ ನಾಲ್ಕನೆ ಬಜೆಟ್ ಮಂಡಿಸಿದರು.
ಮುಖ್ಯಾಂಶಗಳು
*ಮೊದಲ ಬಾರಿ ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ
*ಎರಡಂಕೆಯ ಹಣದುಬ್ಬರ ನಿಯಂತ್ರಣ.
*ಉದ್ಯೋಗ ಕ್ಷೇತ್ರದಲ್ಲಿ ಯುವ ಶಕ್ತಿ ಬಲವರ್ಧನೆಗೆ ಕ್ರಮ
* ಸಾರ್ವಜನಿಕ ಹಣ ಸದುಪಯೋಗ ಪಡಿಸಲು ಕ್ರಮ
*ಭಾರತ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ.
*ಭಾರತ ವಿದೇಶಿ ಹೂಡಿಕೆಯಲ್ಲಿ ಗಮನಾರ್ಹ ಸಾಧನೆ
* ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ನೋಟು ರದ್ಧತಿ ಪೂರಕ.
*ನೋಟು ರದ್ಧತಿಯಿಂದ ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಯಾಗಿದೆ
*ವಿದೇಶಿ ವಿನಿಮಯದಲ್ಲಿ ಭಾರೀ ಬದಲಾವಣೆ.
*ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ
*ನೋಟು ಅಮಾನ್ಯೀಕರಣ ಲಾಭ ಬಡಜನರಿಗೆ ವರ್ಗಾವಣೆಗೆ ನಿರ್ಧಾರ,. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೂಡಿಕೆ.
* ನೋಟು ಬ್ಯಾನ್ ನಿಂದ ಬ್ಯಾಂಕ್ ಸಾಲ ಕಡಿಮೆಯಾಗಿದೆ.
*ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
* ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
*ಫಸಲ್ ವಿಮಾ ಯೋಜನೆಯಲ್ಲೂ ರೈತರಿಗೆ ನೆರವು
*ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ
*ಹೈನುಗಾರಿಕಾ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ.
*ಗುಡಿಸಲು ಮುಕ್ತ ಭಾರತ ಯೋಜನೆಯಡಿ 1 ಕೋಟಿ ಮನೆ ನಿರ್ಮಾಣ
* ನೀರಾವರಿಗಾಗಿ ಧೀರ್ಘಾವಧಿ ಸಾಲ
*ಮನ್ರೆಗಾ ಫಂಡ್ ವಿಸ್ತರಣೆ , 48 ಸಾವಿರ ಕೋಟಿ ರೂ. ಹೆಚ್ಚಳ
*ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ನಿರ್ಧಾರ
*1.50 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯ
*ಪರಿಶಿಷ್ಟ ಜಾತಿ ಅಭಿವೃಧ್ದಿಗೆ 53 ಸಾವಿರ ಕೋಟಿ ರೂ.
*2019ರ ಒಳಗಾಗಿ ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಕ್ರಮ
,*2018ರ ವೇಳೆಗೆ ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ
*ವಿದ್ಯುತ್ ಯೋಜನೆಗಾಗಿ ನಾಲ್ಕವರೆ ಸಾವಿರ ಕೋಟಿ ರೂ. ಯೋಜನೆ
* ಮನ್ ರೆಗಾ ಯೋಜನೆಯಡಿ ಹಳ್ಳಿಗಳಲ್ಲಿ 10 ಲಕ್ಷ ಕೆರೆ ನಿರ್ಮಾಣ
*ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ
*ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆಗೆ 500 ಕೋಟಿ ರೂ.
*ಗರ್ಭಿಣಿ ಮಹಿಳೆಯರಿಗೆ 6000 ರೂ. ಸಹಾಯಧನ
*ಗ್ರಾಮೀಣ ಶಿಕ್ಷಣಕ್ಕೆ ತಂತ್ರಜ್ಞಾನ ಬಳಕೆ
*ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಒಂದೇ ಪ್ರಾಧಿಕಾರ
*ಎಲ್ಲ ಕಾಲೇಜುಗಳಿಗೆ ಸ್ವಾಯತ್ತತೆ
*ಟೆಕ್ಸ್ ಟೈಲ್ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಯೋಜನೆ.
* ಹಿರಿಯ ನಾಗರಿಕರಿಕರಿಗೆ ಆರೋಗ್ಯ ಕಾರ್ಡ್
*ಜಾರ್ಖಂಡ್, ಗುಜರಾತ್ ನಲ್ಲಿ ಎರಡು ಏಮ್ಸ್ ಕೇಂದ್ರ ಆರಂಭ
*ಆಧಾರ ಯೋಜನೆ ಆಧಾರದಲ್ಲಿ ಆರೋಗ್ಯ ಕಾರ್ಡ್ ಯೋಜನೆ.
*ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ, 64 ಸಾವಿರ ಕೋಟಿ ರೂ. ಯೋಜನೆ.
*ರೈಲು ಸುರಕ್ಷತೆಗೆ 1 ಲಕ್ಷ ಕೋಟಿ ರೂ.
*2020 ರ ಒಳಗೆ ಮಾನವರಹಿತ ರೈಲ್ವೆ ಕ್ರಾಸಿಂಗ್
*ಇ- ಟಿಕೆಟ್ ಮೇಲೆ ಸರ್ವಿಸ್ ಜಾರ್ಜ್ ಇಲ್ಲ.
*2019ರ ಒಳಗಾಗಿ ಎಲ್ಲ ರೈಲುಗಳಲ್ಲಿ ಜೈವಿಕ ಟಾಯ್ಲೆಟ್ ಅಳವಡಿಕೆ
* 4 ಪ್ರಮುಖ ಉದ್ದೇಶದೊಂದಿಗೆ ರೈಲ್ವೆ ಕ್ಷೇತ್ರ ಅಭಿವೃದ್ಧಿ
*500 ಕಿ.ಲೋ ಮೀಟರ್ ಹೊಸ ರೈಲ್ವೆ ಹಳಿ ಅಳವಡಿಕೆ
*ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣ. ವಿಮಾನ ನಿಲ್ದಾಣ ಪ್ರಾಧಿಕಾರದ ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆ
*ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ 2.41 ಲಕ್ಷ ಕೋಟಿ ರೂ.
* 3,500 ಕಿ.ಮಿ. ಹೊಸ ರೈಲು ಮಾರ್ಗ ನಿರ್ಮಾಣ.
*ರೈಲು ನಿಲ್ದಾಣಗಳಲ್ಲಿ ದಿವ್ಯಾಂಗರ ಅನುಕೂಕ್ಕೆ ಯೋಜನೆ
*ಡಿಜಿಟಲ್ ವ್ಯವಹಾರ ಹೆಚ್ಚಿಸಲು ಭೀಮ್ ಸ್ಕೀಮ್ ಎರಡು ಹೋಜನೆ.
* ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲವರಿಗೆ ಆಧಾರ ಕಾರ್ಡ್ ಮೂಲಕ ವ್ಯವಹಾರಕ್ಕೆ ಕ್ರಮ
* ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ಸೌಲಭ್ಯ
*ಆಧಾರ್ ಕಾರ್ಡ್ ಆಧಾರದಲ್ಲಿ ಹೊಸ ಸ್ಮಾರ್ಟ್ ಕಾರ್ಡ್
*ಆನ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ
*ಆಧಾರ್ ಆಧಾರಿತ ಯೋಜನೆಗೆ 20 ಲಕ್ಷ ಹೊಸ ಕೇಂದ್ರ, ಆಧಾರ ಪೇ ಹೆಸರಿನಲ್ಲಿ ಯೋಜನೆ ಜಾರಿ.
*ಆರ್ಥಿಕ ಸುಸ್ತಿದಾರರ ಆಸ್ತಿ ವಶಪಡಿಸಿಕೊಳ್ಲಲು ಕ್ರಮ.
* 2020ರ ಒಳಗೆ ಆಧಾರ್ ಆಧಾರಿತ 20 ಲಕ್ಷ ಸ್ವೈಪ್ ಮಿಶನ್
*ರಕ್ಷಣಾ ಇಲಾಖೆಗೆ 2.74 ಲಕ್ಷ ಕೋಟಿ ರೂ. ಅನುದಾನ
*2016 &17 ನೆ ಸಾಲಿನ ಆದಾಯ ತೆರಿಗೆ ಘೋಷಣೆ ವಿವರ : 50 ಲಕ್ಷ ರೂ ಕಡಿಮೆ ಆದಾಯ -1.72 ಲಕ್ಷ ಜನರು ಘೋಷಣೆ, 10 ಲಕ್ಷ ಕಡಿಮೆ ಆದಾಯ 24 ಲಕ್ಷ ಜನ, 2.50 ಲಕ್ಷ ರೂ. ಕಡಿಮೆ ಆದಾಯ 99 ಲಕ್ಷ ಜನರಿಂದ ಘೋಷಣೆ, ಒಟ್ಟು 3.5 ಕೋಟಿ ಜನರಿಂದ ಆದಾಯ ತೆರಿಗೆ ಪಾವತಿ.
*ದೇಶದಲ್ಲಿ 13.97 ಲಕ್ಷ ನೋಂದಾಯಿತ ಕಂಪನಿಗಳ ಪೈಕಿ 5.97 ಕಂಪೆನಿಗಳಿಂದ ತೆರಿಗೆ ಹಣ ಪಾವತಿ.
*3 ಲಕ್ಷ ರೂಪಾಯಿಗಳಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ
*ವಾರ್ಷಿಕ 50 ಕೋಟಿ ವ್ಯವಹಾರ ಮಾಡುವ ಕಂಪೆನಿಗೆ ಶೇ 5ರಷ್ಠು ತೆರಿಗೆ ವಿನಾಯತಿ
* ರಾಜಕೀಯ ಪಕ್ಷಗಳಿಗೆ 2 ಸಾವಿರ ರೂ. ಮಾತ್ರ ನಗದಿನಲ್ಲಿ ಪಾವತಿ
* ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಷರತ್ತು. ಚೆಕ್, ಡಿಡಿ, ಡಿಜಿಟಲ್ ಮೋಡ್ ನಲ್ಲಿ ಹಣ ಪಡೆಯಲು ಅವಕಾಶ.
*ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ.
* ಆದಾಯ ತೆರಿಗೆ ಶೇ 10ರಿಂದ 5ಕ್ಕೆ ಕಡಿತ
* ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ
* 3ರಿಂದ 5 ಲಕ್ಷ ರೂ. ಆದಾಯಕ್ಕೆ ಶೇ 5ರಷ್ಟು ತೆರಿಗೆ
*5ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ 10ರಷ್ಟು
*10ರಿಂದ ಮೇಲ್ಪಟ್ಟು ಶೇ 30
* ರೂ. 50 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಶೇ 10ರಷ್ಟು ಸರ್ಚಾರ್ಜ್
*1 ಕೋಟಿ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಶೇ 15ರಷ್ಟು ಸರ್ಚಾರ್ಜ್







